ಮುಂದಿನ ಹಂತದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ), ಇಂಡಿಯನ್ ಬ್ಯಾಂಕ್ ಮತ್ತು ಇಂಡಿಯನ್ ಓವರ್ಸೀಸ್ ಬ್ಯಾಂಕ್ಗಳ ಒಗ್ಗೂಡಿಸುವುದು ಮತ್ತು ಕೆನರಾ, ಸಿಂಡಿಕೇಟ್ ಮತ್ತು ಯುಕೋ ಬ್ಯಾಂಕ್ಗಳನ್ನು ವಿಲೀನ ಮಾಡುವ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿದೆ.
ಈ ಮಧ್ಯೆ, ಬ್ಯಾಂಕ್ ಆಫ್ ಬರೋಡಾ ವಿಜಯಾ, ದೇನಾ ಬ್ಯಾಂಕ್ಗಳ ವಿಲೀನ ನಿರ್ಧಾರದ ಬೆನ್ನಿಗೆ ಷೇರುಪೇಟೆಯಲ್ಲಿ ಬ್ಯಾಂಕಿಂಗ್ ಷೇರು ಕುಸಿತ ಕಂಡಿದೆ. ಬ್ಯಾಂಕ್ ಆಫ್ ಬರೋಡಾದ ಷೇರು ಮೌಲ್ಯ ಶೇ. 17 ಕುಸಿದಿದ್ದು, ನಿಫ್ಟಿ ವಹಿವಾಟು ಆರಂಭವಾದ 50 ನಿಮಿಷಗಳಲ್ಲೆ ಸುಮಾರು -ಠಿ; 500 ಕೋಟಿ ನಷ್ಟವಾಯಿತು. ವಿಜಯಾ ಬ್ಯಾಂಕ್ ಷೇರು ಶೇ. 7ರಷ್ಟು ಇಳಿಕೆಯಾಗಿದೆ. ಆದರೆ, ದೇನಾ ಬ್ಯಾಂಕ್ ಷೇರು ಮೌಲ್ಯ ಶೇ. 19 ವೃದ್ಧಿ ಕಂಡಿದೆ.
ಬ್ಯಾಂಕ್ ಆಫ್ ಬರೋಡಾ, ವಿಜಯಾ ಮತ್ತು ದೇನಾ ಬ್ಯಾಂಕ್ಗಳ ವಿಲೀನದ ಪ್ರಕ್ರಿಯೆ ಪೂರ್ಣವಾಗಲು 3ರಿಂದ 6 ತಿಂಗಳು ಹಿಡಿಯುವುದರಿಂದ ಈ ವರ್ಷದಲ್ಲಿ ಮತ್ತೆ ಬ್ಯಾಂಕ್ಗಳ ವಿಲೀನದ ಘೋಷಣೆ ಹೊರಬೀಳುವುದು ಅನುಮಾನ. ಮುಂದಿನ ವರ್ಷ ಲೋಕಸಭಾ ಚುನಾವಣೆಗೂ ಮುಂಚೆ ಅಥವಾ ನಂತರ ಮತ್ತೆ ಚುರುಕುಗೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.
ಇನ್ನೆರಡು ಪ್ರಸ್ತಾವನೆ: ಮುಂದಿನ ಹಂತದಲ್ಲಿ ವಿಲೀನವಾಗಲಿದೆ ಎನ್ನಲಾಗಿರುವ ಪಿಎನ್ಬಿ ಹಾಲಿ ವಹಿವಾಟು -ಠಿ; 10,45,650 ಕೋಟಿ ಇದ್ದರೆ, ಇಂಡಿಯನ್ ಬ್ಯಾಂಕ್ನ ವಹಿವಾಟು -ಠಿ;3,74,550 ಕೋಟಿ ಮತ್ತು ಇಂಡಿಯನ್ ಓವರ್ಸೀಸ್ ಬ್ಯಾಂಕ್ನ ವಹಿವಾಟು -ಠಿ;3,61,928 ಕೋಟಿಯಷ್ಟಿದೆ. ಪಿಎನ್ಬಿ -ಠಿ;6,30,311 ಕೋಟಿ, ಇಂಡಿಯನ್ ಬ್ಯಾಂಕ್ -ಠಿ; 2,10,170 ಕೋಟಿ ಹಾಗೂ ಇಂಡಿಯನ್ ಓವರ್ಸೀಸ್ ಬ್ಯಾಂಕ್ -ಠಿ; 2,13,168 ಕೋಟಿ ಠೇವಣಿ ಸಂಗ್ರಹ ಇದೆ.
ವಿಲೀನದ ಪರಿಶೀಲನೆಯಲ್ಲಿರುವ ಕೆನರಾ, ಸಿಂಡಿಕೇಟ್ ಮತ್ತು ಯುಕೋ ಬ್ಯಾಂಕ್ಗಳ ವಾರ್ಷಿಕ ವಹಿವಾಟು ಕ್ರಮವಾಗಿ -ಠಿ; 8,63,359 ಕೋಟಿ, -ಠಿ; 4,74,976 ಕೋಟಿ ಮತ್ತು -ಠಿ; 2,76,784 ಇದೆ. ಕೆನರಾ ಬ್ಯಾಂಕ್ನಲ್ಲಿ -ಠಿ; 5,00,866, ಸಿಂಡಿಕೇಟ್ ಬ್ಯಾಂಕ್ನಲ್ಲಿ -ಠಿ; 4,05,939 ಮತ್ತು ಯುಕೋ ಬ್ಯಾಂಕ್ನಲ್ಲಿ -ಠಿ; 1,78,211 ಕೋಟಿ ಠೇವಣಿ ಸಂಗ್ರಹ ಇದೆ.
ಏ. 1ರಿಂದ ಕಾರ್ಯಾರಂಭ
ಬ್ಯಾಂಕ್ ಆಫ್ ಬರೋಡಾ, ವಿಜಯಾ ಮತ್ತು ದೇನಾ ಬ್ಯಾಂಕ್ಗಳ ವಿಲೀನದಿಂದ ರಚನೆಯಾಗುವ ಹೊಸ ಬ್ಯಾಂಕ್ ಮುಂದಿನ ಆರ್ಥಿಕ ವರ್ಷದಿಂದ (ಏಪ್ರಿಲ್ 1) ಕಾರ್ಯಾರಂಭ ಮಾಡಲಿದೆ.
‘ಮೂಡಿ’ಸ್ ಶ್ಲಾಘನೆ
ಭಾರತದಲ್ಲಿ ಬ್ಯಾಂಕ್ಗಳ ವಿಲೀನ ಪ್ರಕ್ರಿಯೆ ಆರಂಭವಾಗಿ ರುವುದು ಸ್ವಾಗತಾರ್ಹ ಬೆಳವಣಿಗೆ. ಇದರಿಂದ ಬ್ಯಾಂಕ್ಗಳ ಕಾರ್ಯ ಕ್ಷಮತೆ ಹೆಚ್ಚುವ ಜತೆಗೆ ದೇಶದ ಆರ್ಥಿಕ ಪ್ರಗತಿಯೂ ಆಗಲಿದೆ ಎಂದು ಜಾಗತಿಕ ಕ್ರೆಡಿಟ್ ರ್ಯಾಂಕಿಂಗ್ ಸಂಸ್ಥೆ ಮೂಡಿ’ಸ್ ಇನ್ವೆಸ್ಟರ್ಸ್ ಸರ್ವೀಸ್ ಹೇಳಿದೆ.
ಜೇಟ್ಲಿ ಜತೆ ಬ್ಯಾಂಕ್ ಮುಖ್ಯಸ್ಥರ ಸಭೆ
ಸಾರ್ವಜನಿಕ ವಲಯದ ಬ್ಯಾಂಕ್ಗಳ ಮುಖ್ಯಸ್ಥರನ್ನು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಸೆ. 25ರಂದು ಭೇಟಿ ಮಾಡಲಿದ್ದಾರೆ. ಬ್ಯಾಂಕ್ಗಳ ಹಣಕಾಸು ನಿರ್ವಹಣೆ ಕುರಿತ ಅವರು ಪರಿಶೀಲನಾ ಸಭೆ ನಡೆಸಲಿದ್ದಾರೆ. ಅನುತ್ಪಾದಕ ಆಸ್ತಿ ತಗ್ಗಿಸಲು ಕೈಗೊಂಡ ಕ್ರಮಗಳ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ.
ಆರ್ಬಿಐ ಶಿಫಾರಸು
ಖಾಸಗಿ ಬ್ಯಾಂಕ್ಗಳ ಜತೆಗೆ ಸ್ಪರ್ಧಾತ್ಮಕ ಪೈಪೋಟಿ ನೀಡಬೇಕಿದ್ದರೆ ಸಾರ್ವಜನಿಕ ವಲಯದ 21 ಬ್ಯಾಂಕ್ಗಳನ್ನು ವಿಲೀನ ಮಾಡಿ ನಾಲ್ಕೈದು ದೊಡ್ಡ ಬ್ಯಾಂಕ್ಗಳನ್ನಾಗಿ ರಚಿಸುವುದು ಒಳಿತು ಎಂದು ಆರ್ಬಿಐ ಈ ಹಿಂದೆಯೇ ಶಿಫಾರಸು ಮಾಡಿದೆ. ಇದರ ಅನ್ವಯ ಈಗಾಗಲೇ ಎಸ್ಬಿಐನ ಐದು ಸಹವರ್ತಿ ಬ್ಯಾಂಕ್ ಮತ್ತು ಭಾರತೀಯ ಮಹಿಳಾ ಬ್ಯಾಂಕನ್ನು ಎಸ್ಬಿಐ ಜತೆಗೆ ಕಳೆದ ವರ್ಷ ಒಗ್ಗೂಡಿಸಲಾಗಿದೆ. ವಸೂಲಾಗದ ಸಾಲ ಮತ್ತು ಅನುತ್ಪಾದಕ ಆಸ್ತಿ ಹೆಚ್ಚಳದಿಂದ ತತ್ತರಿಸುತ್ತಿರುವ ಬ್ಯಾಂಕ್ಗಳನ್ನು ಉಳಿಸಬೇಕಾದರೆ ವಿಲೀನ ಅನಿವಾರ್ಯ ಎಂಬ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಇದನ್ನು ಬಜೆಟ್ನಲ್ಲೂ ಉಲ್ಲೇಖಿಸಿದೆ.
ಎರಡು ದಿನಗಳಲ್ಲಿ -ಠಿ; 2.72 ಲಕ್ಷ ಕೋಟಿ ನಷ್ಟ
ಮೂರು ಬ್ಯಾಂಕ್ಗಳ ವಿಲೀನದ ನಿರ್ಧಾರ ಮತ್ತು ಚೀನಾ ಸರಕುಗಳ ಮೇಲೆ ಅಮೆರಿಕ ಹೆಚ್ಚುವರಿ ಸುಂಕ ವಿಧಿಸಿದ ಪರಿಣಾಮ ಬಾಂಬೆ ಷೇರುಪೇಟೆ (ಬಿಎಸ್ಇ) ಮತ್ತು ರಾಷ್ಟ್ರೀಯ ಷೇರುಪೇಟೆ (ನಿಫ್ಟಿ)ಯಲ್ಲಿ ಉಂಟಾಯಿತು.ಬೇರೆ ಬೇರೆ ಕಾರಣಗಳಿಗೆ ಕಳೆದೆರಡು ದಿನಗಳಲ್ಲಿ ಹೂಡಿಕೆದಾರರು 2.72 ಲಕ್ಷ ಕೋಟಿ ನಷ್ಟ ಅನುಭವಿಸಿದ್ದಾರೆ. ಬಿಎಸ್ಇಯಲ್ಲಿ ಮಂಗಳವಾರ 295 ಪಾಯಿಂಟ್ಗಳು ಇಳಿಕೆಯಾಗಿ ಒಂದು ತಿಂಗಳ ಹಿಂದಿನ ಸೂಚ್ಯಂಕ 37,291ಕ್ಕೆ ತಲುಪಿತು.140 ಕಂಪನಿಗಳ ಷೇರು ಮೌಲ್ಯ ಕುಸಿತವಾಗಿದ್ದು, 52 ವಾರಗಳ ಹಿಂದಿದ್ದ ಮೌಲ್ಯಕ್ಕೆ ಹಿನ್ನಡೆ ಕಂಡಿತು. ನಿಫ್ಟಿಯಲ್ಲಿ 98 ಅಂಶ ಕುಸಿದು, ಸಂವೇದಿ ಸೂಚ್ಯಂಕ 11,300ಕ್ಕಿಂತಲೂ ಕಡಿಮೆ ಆಯಿತು. ಇದರಿಂದ ಸೋಮವಾರ -ಠಿ; 1.72 ಲಕ್ಷ ಕೋಟಿ ಹೂಡಿಕೆ ನಷ್ಟವಾಯಿತು. ಈ ನಡುವೆ, ಡಾಲರ್ ಎದುರು ದಿನೇ ದಿನೆ ಸೊರಗುತ್ತಿರುವ ರೂಪಾಯಿ ಮಂಗಳವಾರ 47 ಪೈಸೆ ಕುಸಿದು, 72.99ಕ್ಕೆ ಸ್ಥಿರಗೊಂಡಿತು. ಇದು ರೂಪಾಯಿ ಮೌಲ್ಯದ ಸಾರ್ವಕಾಲಿಕ ಅಧಃಪತನವಾಗಿದೆ.
ಈ ಮಧ್ಯೆ, ಬ್ಯಾಂಕ್ ಆಫ್ ಬರೋಡಾ ವಿಜಯಾ, ದೇನಾ ಬ್ಯಾಂಕ್ಗಳ ವಿಲೀನ ನಿರ್ಧಾರದ ಬೆನ್ನಿಗೆ ಷೇರುಪೇಟೆಯಲ್ಲಿ ಬ್ಯಾಂಕಿಂಗ್ ಷೇರು ಕುಸಿತ ಕಂಡಿದೆ. ಬ್ಯಾಂಕ್ ಆಫ್ ಬರೋಡಾದ ಷೇರು ಮೌಲ್ಯ ಶೇ. 17 ಕುಸಿದಿದ್ದು, ನಿಫ್ಟಿ ವಹಿವಾಟು ಆರಂಭವಾದ 50 ನಿಮಿಷಗಳಲ್ಲೆ ಸುಮಾರು -ಠಿ; 500 ಕೋಟಿ ನಷ್ಟವಾಯಿತು. ವಿಜಯಾ ಬ್ಯಾಂಕ್ ಷೇರು ಶೇ. 7ರಷ್ಟು ಇಳಿಕೆಯಾಗಿದೆ. ಆದರೆ, ದೇನಾ ಬ್ಯಾಂಕ್ ಷೇರು ಮೌಲ್ಯ ಶೇ. 19 ವೃದ್ಧಿ ಕಂಡಿದೆ.
ಬ್ಯಾಂಕ್ ಆಫ್ ಬರೋಡಾ, ವಿಜಯಾ ಮತ್ತು ದೇನಾ ಬ್ಯಾಂಕ್ಗಳ ವಿಲೀನದ ಪ್ರಕ್ರಿಯೆ ಪೂರ್ಣವಾಗಲು 3ರಿಂದ 6 ತಿಂಗಳು ಹಿಡಿಯುವುದರಿಂದ ಈ ವರ್ಷದಲ್ಲಿ ಮತ್ತೆ ಬ್ಯಾಂಕ್ಗಳ ವಿಲೀನದ ಘೋಷಣೆ ಹೊರಬೀಳುವುದು ಅನುಮಾನ. ಮುಂದಿನ ವರ್ಷ ಲೋಕಸಭಾ ಚುನಾವಣೆಗೂ ಮುಂಚೆ ಅಥವಾ ನಂತರ ಮತ್ತೆ ಚುರುಕುಗೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.
ಇನ್ನೆರಡು ಪ್ರಸ್ತಾವನೆ: ಮುಂದಿನ ಹಂತದಲ್ಲಿ ವಿಲೀನವಾಗಲಿದೆ ಎನ್ನಲಾಗಿರುವ ಪಿಎನ್ಬಿ ಹಾಲಿ ವಹಿವಾಟು -ಠಿ; 10,45,650 ಕೋಟಿ ಇದ್ದರೆ, ಇಂಡಿಯನ್ ಬ್ಯಾಂಕ್ನ ವಹಿವಾಟು -ಠಿ;3,74,550 ಕೋಟಿ ಮತ್ತು ಇಂಡಿಯನ್ ಓವರ್ಸೀಸ್ ಬ್ಯಾಂಕ್ನ ವಹಿವಾಟು -ಠಿ;3,61,928 ಕೋಟಿಯಷ್ಟಿದೆ. ಪಿಎನ್ಬಿ -ಠಿ;6,30,311 ಕೋಟಿ, ಇಂಡಿಯನ್ ಬ್ಯಾಂಕ್ -ಠಿ; 2,10,170 ಕೋಟಿ ಹಾಗೂ ಇಂಡಿಯನ್ ಓವರ್ಸೀಸ್ ಬ್ಯಾಂಕ್ -ಠಿ; 2,13,168 ಕೋಟಿ ಠೇವಣಿ ಸಂಗ್ರಹ ಇದೆ.
ವಿಲೀನದ ಪರಿಶೀಲನೆಯಲ್ಲಿರುವ ಕೆನರಾ, ಸಿಂಡಿಕೇಟ್ ಮತ್ತು ಯುಕೋ ಬ್ಯಾಂಕ್ಗಳ ವಾರ್ಷಿಕ ವಹಿವಾಟು ಕ್ರಮವಾಗಿ -ಠಿ; 8,63,359 ಕೋಟಿ, -ಠಿ; 4,74,976 ಕೋಟಿ ಮತ್ತು -ಠಿ; 2,76,784 ಇದೆ. ಕೆನರಾ ಬ್ಯಾಂಕ್ನಲ್ಲಿ -ಠಿ; 5,00,866, ಸಿಂಡಿಕೇಟ್ ಬ್ಯಾಂಕ್ನಲ್ಲಿ -ಠಿ; 4,05,939 ಮತ್ತು ಯುಕೋ ಬ್ಯಾಂಕ್ನಲ್ಲಿ -ಠಿ; 1,78,211 ಕೋಟಿ ಠೇವಣಿ ಸಂಗ್ರಹ ಇದೆ.
ಏ. 1ರಿಂದ ಕಾರ್ಯಾರಂಭ
ಬ್ಯಾಂಕ್ ಆಫ್ ಬರೋಡಾ, ವಿಜಯಾ ಮತ್ತು ದೇನಾ ಬ್ಯಾಂಕ್ಗಳ ವಿಲೀನದಿಂದ ರಚನೆಯಾಗುವ ಹೊಸ ಬ್ಯಾಂಕ್ ಮುಂದಿನ ಆರ್ಥಿಕ ವರ್ಷದಿಂದ (ಏಪ್ರಿಲ್ 1) ಕಾರ್ಯಾರಂಭ ಮಾಡಲಿದೆ.
‘ಮೂಡಿ’ಸ್ ಶ್ಲಾಘನೆ
ಭಾರತದಲ್ಲಿ ಬ್ಯಾಂಕ್ಗಳ ವಿಲೀನ ಪ್ರಕ್ರಿಯೆ ಆರಂಭವಾಗಿ ರುವುದು ಸ್ವಾಗತಾರ್ಹ ಬೆಳವಣಿಗೆ. ಇದರಿಂದ ಬ್ಯಾಂಕ್ಗಳ ಕಾರ್ಯ ಕ್ಷಮತೆ ಹೆಚ್ಚುವ ಜತೆಗೆ ದೇಶದ ಆರ್ಥಿಕ ಪ್ರಗತಿಯೂ ಆಗಲಿದೆ ಎಂದು ಜಾಗತಿಕ ಕ್ರೆಡಿಟ್ ರ್ಯಾಂಕಿಂಗ್ ಸಂಸ್ಥೆ ಮೂಡಿ’ಸ್ ಇನ್ವೆಸ್ಟರ್ಸ್ ಸರ್ವೀಸ್ ಹೇಳಿದೆ.
ಜೇಟ್ಲಿ ಜತೆ ಬ್ಯಾಂಕ್ ಮುಖ್ಯಸ್ಥರ ಸಭೆ
ಸಾರ್ವಜನಿಕ ವಲಯದ ಬ್ಯಾಂಕ್ಗಳ ಮುಖ್ಯಸ್ಥರನ್ನು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಸೆ. 25ರಂದು ಭೇಟಿ ಮಾಡಲಿದ್ದಾರೆ. ಬ್ಯಾಂಕ್ಗಳ ಹಣಕಾಸು ನಿರ್ವಹಣೆ ಕುರಿತ ಅವರು ಪರಿಶೀಲನಾ ಸಭೆ ನಡೆಸಲಿದ್ದಾರೆ. ಅನುತ್ಪಾದಕ ಆಸ್ತಿ ತಗ್ಗಿಸಲು ಕೈಗೊಂಡ ಕ್ರಮಗಳ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ.
ಆರ್ಬಿಐ ಶಿಫಾರಸು
ಖಾಸಗಿ ಬ್ಯಾಂಕ್ಗಳ ಜತೆಗೆ ಸ್ಪರ್ಧಾತ್ಮಕ ಪೈಪೋಟಿ ನೀಡಬೇಕಿದ್ದರೆ ಸಾರ್ವಜನಿಕ ವಲಯದ 21 ಬ್ಯಾಂಕ್ಗಳನ್ನು ವಿಲೀನ ಮಾಡಿ ನಾಲ್ಕೈದು ದೊಡ್ಡ ಬ್ಯಾಂಕ್ಗಳನ್ನಾಗಿ ರಚಿಸುವುದು ಒಳಿತು ಎಂದು ಆರ್ಬಿಐ ಈ ಹಿಂದೆಯೇ ಶಿಫಾರಸು ಮಾಡಿದೆ. ಇದರ ಅನ್ವಯ ಈಗಾಗಲೇ ಎಸ್ಬಿಐನ ಐದು ಸಹವರ್ತಿ ಬ್ಯಾಂಕ್ ಮತ್ತು ಭಾರತೀಯ ಮಹಿಳಾ ಬ್ಯಾಂಕನ್ನು ಎಸ್ಬಿಐ ಜತೆಗೆ ಕಳೆದ ವರ್ಷ ಒಗ್ಗೂಡಿಸಲಾಗಿದೆ. ವಸೂಲಾಗದ ಸಾಲ ಮತ್ತು ಅನುತ್ಪಾದಕ ಆಸ್ತಿ ಹೆಚ್ಚಳದಿಂದ ತತ್ತರಿಸುತ್ತಿರುವ ಬ್ಯಾಂಕ್ಗಳನ್ನು ಉಳಿಸಬೇಕಾದರೆ ವಿಲೀನ ಅನಿವಾರ್ಯ ಎಂಬ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಇದನ್ನು ಬಜೆಟ್ನಲ್ಲೂ ಉಲ್ಲೇಖಿಸಿದೆ.
ಎರಡು ದಿನಗಳಲ್ಲಿ -ಠಿ; 2.72 ಲಕ್ಷ ಕೋಟಿ ನಷ್ಟ
ಮೂರು ಬ್ಯಾಂಕ್ಗಳ ವಿಲೀನದ ನಿರ್ಧಾರ ಮತ್ತು ಚೀನಾ ಸರಕುಗಳ ಮೇಲೆ ಅಮೆರಿಕ ಹೆಚ್ಚುವರಿ ಸುಂಕ ವಿಧಿಸಿದ ಪರಿಣಾಮ ಬಾಂಬೆ ಷೇರುಪೇಟೆ (ಬಿಎಸ್ಇ) ಮತ್ತು ರಾಷ್ಟ್ರೀಯ ಷೇರುಪೇಟೆ (ನಿಫ್ಟಿ)ಯಲ್ಲಿ ಉಂಟಾಯಿತು.ಬೇರೆ ಬೇರೆ ಕಾರಣಗಳಿಗೆ ಕಳೆದೆರಡು ದಿನಗಳಲ್ಲಿ ಹೂಡಿಕೆದಾರರು 2.72 ಲಕ್ಷ ಕೋಟಿ ನಷ್ಟ ಅನುಭವಿಸಿದ್ದಾರೆ. ಬಿಎಸ್ಇಯಲ್ಲಿ ಮಂಗಳವಾರ 295 ಪಾಯಿಂಟ್ಗಳು ಇಳಿಕೆಯಾಗಿ ಒಂದು ತಿಂಗಳ ಹಿಂದಿನ ಸೂಚ್ಯಂಕ 37,291ಕ್ಕೆ ತಲುಪಿತು.140 ಕಂಪನಿಗಳ ಷೇರು ಮೌಲ್ಯ ಕುಸಿತವಾಗಿದ್ದು, 52 ವಾರಗಳ ಹಿಂದಿದ್ದ ಮೌಲ್ಯಕ್ಕೆ ಹಿನ್ನಡೆ ಕಂಡಿತು. ನಿಫ್ಟಿಯಲ್ಲಿ 98 ಅಂಶ ಕುಸಿದು, ಸಂವೇದಿ ಸೂಚ್ಯಂಕ 11,300ಕ್ಕಿಂತಲೂ ಕಡಿಮೆ ಆಯಿತು. ಇದರಿಂದ ಸೋಮವಾರ -ಠಿ; 1.72 ಲಕ್ಷ ಕೋಟಿ ಹೂಡಿಕೆ ನಷ್ಟವಾಯಿತು. ಈ ನಡುವೆ, ಡಾಲರ್ ಎದುರು ದಿನೇ ದಿನೆ ಸೊರಗುತ್ತಿರುವ ರೂಪಾಯಿ ಮಂಗಳವಾರ 47 ಪೈಸೆ ಕುಸಿದು, 72.99ಕ್ಕೆ ಸ್ಥಿರಗೊಂಡಿತು. ಇದು ರೂಪಾಯಿ ಮೌಲ್ಯದ ಸಾರ್ವಕಾಲಿಕ ಅಧಃಪತನವಾಗಿದೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ