ಬೆಂಗಳೂರು: ಮಂಗಳವಾರ (ಸೆ. 4) ಪತ್ರಿಕಾ ವಿತರಕರ ದಿನ. ಚಳಿ, ಮಳೆ ಎನ್ನದೆ ಪ್ರತಿ ನಿತ್ಯ ಬೆಳಗ್ಗಿನ ಜಾವ ಸಕಾಲಕ್ಕೆ ಮನೆ-ಮನೆಗಳಿಗೆ ಪತ್ರಿಕೆ ತಲುಪಿಸುವ ವಿತರಕರ ಶ್ರಮ ಅಪಾರ. ಕೇವಲ 2-3 ಗಂಟೆಗಳಲ್ಲಿ ತಮ್ಮ ವ್ಯಾಪಿಯ ಸಾವಿರಾರು ಮನೆಗಳಿಗೆ ಪತ್ರಿಕೆಗಳನ್ನು ಹಾಕುವ ಕಾರ್ಯ ನಿತ್ಯ ತಪ್ಪದು. ಪತ್ರಿಕೆ ಸಕಾಲದಲ್ಲಿ ಸಿಗದಿದ್ದರೆ ಲಕ್ಷಾಂತರ ಓದುಗರು ಚಡಪಡಿಸುತ್ತಿರುತ್ತಾರೆ. ಆ ಕಾರಣಕ್ಕಾಗಿಯೇ ಬೆಳಗಿನ ಜಾವ ವಿಳಂಬ ಮಾಡದ ವಿತರಕರು ಸೈಕಲ್ ಮತ್ತು ಬೈಕನ್ನೇರಿ ಪತ್ರಿಕೆಗಳನ್ನು ಸಂಗ್ರಹಿಸಿ ಮನೆಮನೆಗಳಿಗೆ ಪತ್ರಿಕೆ ಹಾಕುವ ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತಾರೆ.
ಜಾಗತೀಕರಣ, ಆಧುನಿಕತೆ ಎಷ್ಟೇ ಮುಂದುವರಿದರೂ ವಿತರಣೆ ವ್ಯವಸ್ಥೆ ಮಾತ್ರ ಹಳೇ ಪದ್ದತಿಯಲ್ಲೇ ಇದೆ. ಇಂದಿಗೂ ಸೈಕಲ್ ಮೇಲೆ ವಿತರಕರು ಮನೆಗಳಿಗೆ ಪತ್ರಿಕೆ ಹಾಕುತ್ತಿದ್ದಾರೆ. ಇದಕ್ಕೆ ಪರ್ಯಾಯ ವ್ಯವಸ್ಥೆ ತರಬೇಕಿದೆ. ಪತ್ರಿಕೆ ವಿತರಣೆ ಕಷ್ಟದ ಕೆಲಸವಾದರೂ ಸಮಾಜದಲ್ಲಿ ಅವರಿಗೆ ವೃತ್ತಿ ಗೌರವ ಹೆಚ್ಚಿದೆ. ಬಹುತೇಕ ಬಡ ಕುಟುಂಬದ ಮಕ್ಕಳು ಇಂದಿಗೂ ಬೆಳಗ್ಗೆ ಎದ್ದು ಪತ್ರಿಕೆ ಹಾಕುವ ಕೆಲಸ ಮಾಡಿಕೊಂಡು ವಿದ್ಯಾಭ್ಯಾಸ ಮಾಡಿ ಬದುಕು ಕಟ್ಟಿಕೊಂಡಿರುವ ನಿದರ್ಶನಗಳು ನಮ್ಮ ಮುಂದೆ ಸಾಕಷ್ಟಿವೆ.
ಹೊಸಬರು ಈ ವೃತ್ತಿಗೆ ಬರುವಂತೆ ಆಕರ್ಷಿಸಲು ಸರ್ಕಾರ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಬೇಕು. ಬೆಳಗಿನ ಜಾವ 5 ಗಂಟೆಗೆ ಕರ್ತವ್ಯಕ್ಕೆ ಹಾಜರಾಗುವ ಪತ್ರಿಕಾ ವಿತರಕರು ಕೆಲವೊಮ್ಮೆ ಅನಾಹುತಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಆಗ ನೆರವಿಗೆ ಬರಬೇಕು ಎನ್ನುತ್ತಾರೆ ಯಶವಂತಪುರ ವಿತರಕ ಚಂದ್ರಶೇಖರ್.
ಅನುದಾನ ಹೆಚ್ಚಿಸಲಿ: ಪತ್ರಿಕಾ ವಿತರಕರ ಸಮಸ್ಯೆಗಳನ್ನು ನಿವಾರಿಸಲು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಜೆಟ್ನಲ್ಲಿ 2 ಕೋಟಿ ರೂ. ಅನುದಾನ ಘೋಷಿಸಿದೆ. ರಾಜ್ಯಮಟ್ಟದಲ್ಲಿ ಒಂದು ಸಂಘವನ್ನು ಆರಂಭಿಸಿ ಅದರ ಮೂಲಕ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಬೇಕು. ಇದರಿಂದಾಗಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿದಂತಾಗುತ್ತದೆ. ಬರುವ ಬಜೆಟ್ನಲ್ಲಿ ಕ್ಷೇಮ ನಿಧಿಗೆ ಹೆಚ್ಚು ಅನುದಾನ ನೀಡಬೇಕು ಎಂದು ಮಹಾಲಕ್ಷ್ಮಿ ಲೇಔಟ್ ಪತ್ರಿಕಾ ವಿತರಕ ಶಂಭು ಹೇಳಿದರು.
ವಿತರಕರ ಬೇಡಿಕೆಗಳೇನು?
ವಿತರಕರನ್ನು ಗುರುತಿಸಿ ಐಡಿ ಕಾರ್ಡ್ ನೀಡಿ
ಪತ್ರಿಕೆ ಸಂಗ್ರಹಣೆಗಾಗಿ ನಿಗದಿತ ಸ್ಥಳ ಕಲ್ಪಿಸಿ
ದ್ವಿಚಕ್ರ ವಾಹನ ಖರೀದಿಗೆ ಸಬ್ಸಿಡಿ
ಕಡಿಮೆ ಬಡ್ಡಿ ದರದಲ್ಲಿ ಸಾಲ ವ್ಯವಸ್ಥೆ
ವಿತರಕರ ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವು
ಆರೋಗ್ಯಕ್ಕಾಗಿ ಕಾರ್ಯಕ್ರಮ
ಪಿಂಚಣಿ ಸೌಲಭ್ಯ
ವಿತರಕರನ್ನು ಗುರುತಿಸುವ ಕೆಲಸವಾಗಲಿ
ಮನೆ-ಮನೆಗಳಿಗೆ ಪತ್ರಿಕೆ ಹಾಕುತ್ತಿರುವ ವಿತರಕರನ್ನು ಗುರುತಿಸಿ ಅಸಂಘಟಿತದಿಂದ ಸಂಘಟಿತ ವಲಯಕ್ಕೆ ತರುವ ಕೆಲಸವಾಗಬೇಕಿದೆ. ರಾಜ್ಯದಲ್ಲಿ ಅಂದಾಜು 40ಸಾವಿರ ಪತ್ರಿಕಾ ವಿತರಕರಿದ್ದು, ಗುರುತಿನ ಚೀಟಿ ನೀಡಿದರೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗಬಹುದು. ಪ್ರತಿ ಜಿಲ್ಲೆಗೆ ಸರ್ಕಾರದ ವತಿಯಿಂದ ಉಸ್ತುವಾರಿ ಅಧಿಕಾರಿಯನ್ನು ನೇಮಿಸಬೇಕು. ಅದಕ್ಕಿಂತ ಮುಂಚೆ ವಿತರಕರನ್ನು ಗುರುತಿಸುವ ಕೆಲಸವಾಗಬೇಕು.
ನಿಧಿ ನಿರ್ವಹಣೆ ಮಾಧ್ಯಮ ಅಕಾಡೆಮಿಗೆ
ಪತ್ರಿಕಾ ವಿತರಕರ ಕ್ಷೇಮ ನಿಧಿಗೆ ಸರ್ಕಾರ ಘೋಷಿಸಿರುವ 2 ಕೋಟಿ ರೂ.ಗಳನ್ನು ಕರ್ನಾಟಕ ಮಾಧ್ಯಮ ಅಕಾಡೆಮಿಗೆ ನೀಡಲು ತೀರ್ವನಿಸಲಾಗಿದೆ. ಚಲನಚಿತ್ರ ಅಕಾಡೆಮಿಯಲ್ಲಿ ಕಾರ್ವಿುಕರಿಗಾಗಿ 10 ಕೋಟಿ ರೂ. ನಿಧಿ ಇಡಲಾಗಿದ್ದು, ಅದನ್ನು ನಿಭಾಯಿಸುತ್ತಿರುವ ಮಾದರಿಯಲ್ಲಿಯೇ ಪತ್ರಿಕಾ ವಿತರಕರ ಕ್ಷೇಮ ನಿಧಿ ಬಳಸಲು ಮಾರ್ಗಸೂಚಿ ಸಿದ್ಧಪಡಿಸಲಾಗುತ್ತಿದೆ. ಮುಂದೆ ಇನ್ನೂ ಹೆಚ್ಚಿನ ನೆರವನ್ನು ಸರ್ಕಾರ ನೀಡಲಿದೆ ಎಂದು ಸಿಎಂ ಮಾಧ್ಯಮ ಕಾರ್ಯದರ್ಶಿ ಎಚ್.ಬಿ. ದಿನೇಶ್ ತಿಳಿಸಿದ್ದಾರೆ.
ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿಗೆ ಹಿಂದಿನ ಸರ್ಕಾರ ಅನುದಾನ ನೀಡಿದ್ದು, ಫಲಾನುಭವಿಗಳಿಗೆ ತಲುಪಿಸುವ ಕೆಲಸ ಆಗುತ್ತಿಲ್ಲ. ಈಗಿನ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು.
| ಮುಕುಂದ ಮಾರತ್ಹಳ್ಳಿ
ಬೆಳಗಿನ ಜಾವ ಪತ್ರಿಕೆ ಹಾಕಲು ತೆರಳು ವಾಗ ಅವಘಡ ವಾಗುವ ಸಾಧ್ಯತೆ ಇರುತ್ತದೆ. ದಟ್ಟವಾದ ಮಂಜು ಕವಿದಾಗ ಎದುರಿಗೆ ಬರುವ ವಾಹನ ಕಾಣದು. ಆದ್ದರಿಂದ ವಿಮೆ ಸೌಲಭ್ಯ ಇದ್ದರೆ ಒಳ್ಳೆಯದು.
| ಉಮಾಶಂಕರ್ ಹೊಸಹಳ್ಳಿ
ಪತ್ರಿಕಾ ವಿತರಕರಿಗೆ ಜೀವನ ಭದ್ರತೆ ಇಲ್ಲ. ಕಮಿಷನ್ ಆಧಾರದಲ್ಲಿ ದುಡಿದು ಜೀವನ ನಡೆಸಬೇಕಿದೆ. ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಸಿಗಬೇಕು. ಸರ್ಕಾರದಿಂದ ಪ್ರತಿ ವರ್ಷ ಪತ್ರಿಕಾ ವಿತರಕರ ಪ್ರತಿಭಾವಂತ ಮಕ್ಕಳನ್ನು ಪ್ರೋತ್ಸಾಹಿಸಬೇಕು.
| ಅನಂತ್ ನವರಂಗ್
ಜಾಗತೀಕರಣ, ಆಧುನಿಕತೆ ಎಷ್ಟೇ ಮುಂದುವರಿದರೂ ವಿತರಣೆ ವ್ಯವಸ್ಥೆ ಮಾತ್ರ ಹಳೇ ಪದ್ದತಿಯಲ್ಲೇ ಇದೆ. ಇಂದಿಗೂ ಸೈಕಲ್ ಮೇಲೆ ವಿತರಕರು ಮನೆಗಳಿಗೆ ಪತ್ರಿಕೆ ಹಾಕುತ್ತಿದ್ದಾರೆ. ಇದಕ್ಕೆ ಪರ್ಯಾಯ ವ್ಯವಸ್ಥೆ ತರಬೇಕಿದೆ. ಪತ್ರಿಕೆ ವಿತರಣೆ ಕಷ್ಟದ ಕೆಲಸವಾದರೂ ಸಮಾಜದಲ್ಲಿ ಅವರಿಗೆ ವೃತ್ತಿ ಗೌರವ ಹೆಚ್ಚಿದೆ. ಬಹುತೇಕ ಬಡ ಕುಟುಂಬದ ಮಕ್ಕಳು ಇಂದಿಗೂ ಬೆಳಗ್ಗೆ ಎದ್ದು ಪತ್ರಿಕೆ ಹಾಕುವ ಕೆಲಸ ಮಾಡಿಕೊಂಡು ವಿದ್ಯಾಭ್ಯಾಸ ಮಾಡಿ ಬದುಕು ಕಟ್ಟಿಕೊಂಡಿರುವ ನಿದರ್ಶನಗಳು ನಮ್ಮ ಮುಂದೆ ಸಾಕಷ್ಟಿವೆ.
ಹೊಸಬರು ಈ ವೃತ್ತಿಗೆ ಬರುವಂತೆ ಆಕರ್ಷಿಸಲು ಸರ್ಕಾರ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಬೇಕು. ಬೆಳಗಿನ ಜಾವ 5 ಗಂಟೆಗೆ ಕರ್ತವ್ಯಕ್ಕೆ ಹಾಜರಾಗುವ ಪತ್ರಿಕಾ ವಿತರಕರು ಕೆಲವೊಮ್ಮೆ ಅನಾಹುತಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಆಗ ನೆರವಿಗೆ ಬರಬೇಕು ಎನ್ನುತ್ತಾರೆ ಯಶವಂತಪುರ ವಿತರಕ ಚಂದ್ರಶೇಖರ್.
ಅನುದಾನ ಹೆಚ್ಚಿಸಲಿ: ಪತ್ರಿಕಾ ವಿತರಕರ ಸಮಸ್ಯೆಗಳನ್ನು ನಿವಾರಿಸಲು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಜೆಟ್ನಲ್ಲಿ 2 ಕೋಟಿ ರೂ. ಅನುದಾನ ಘೋಷಿಸಿದೆ. ರಾಜ್ಯಮಟ್ಟದಲ್ಲಿ ಒಂದು ಸಂಘವನ್ನು ಆರಂಭಿಸಿ ಅದರ ಮೂಲಕ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಬೇಕು. ಇದರಿಂದಾಗಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿದಂತಾಗುತ್ತದೆ. ಬರುವ ಬಜೆಟ್ನಲ್ಲಿ ಕ್ಷೇಮ ನಿಧಿಗೆ ಹೆಚ್ಚು ಅನುದಾನ ನೀಡಬೇಕು ಎಂದು ಮಹಾಲಕ್ಷ್ಮಿ ಲೇಔಟ್ ಪತ್ರಿಕಾ ವಿತರಕ ಶಂಭು ಹೇಳಿದರು.
ವಿತರಕರ ಬೇಡಿಕೆಗಳೇನು?
ವಿತರಕರನ್ನು ಗುರುತಿಸಿ ಐಡಿ ಕಾರ್ಡ್ ನೀಡಿ
ಪತ್ರಿಕೆ ಸಂಗ್ರಹಣೆಗಾಗಿ ನಿಗದಿತ ಸ್ಥಳ ಕಲ್ಪಿಸಿ
ದ್ವಿಚಕ್ರ ವಾಹನ ಖರೀದಿಗೆ ಸಬ್ಸಿಡಿ
ಕಡಿಮೆ ಬಡ್ಡಿ ದರದಲ್ಲಿ ಸಾಲ ವ್ಯವಸ್ಥೆ
ವಿತರಕರ ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವು
ಆರೋಗ್ಯಕ್ಕಾಗಿ ಕಾರ್ಯಕ್ರಮ
ಪಿಂಚಣಿ ಸೌಲಭ್ಯ
ವಿತರಕರನ್ನು ಗುರುತಿಸುವ ಕೆಲಸವಾಗಲಿ
ಮನೆ-ಮನೆಗಳಿಗೆ ಪತ್ರಿಕೆ ಹಾಕುತ್ತಿರುವ ವಿತರಕರನ್ನು ಗುರುತಿಸಿ ಅಸಂಘಟಿತದಿಂದ ಸಂಘಟಿತ ವಲಯಕ್ಕೆ ತರುವ ಕೆಲಸವಾಗಬೇಕಿದೆ. ರಾಜ್ಯದಲ್ಲಿ ಅಂದಾಜು 40ಸಾವಿರ ಪತ್ರಿಕಾ ವಿತರಕರಿದ್ದು, ಗುರುತಿನ ಚೀಟಿ ನೀಡಿದರೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗಬಹುದು. ಪ್ರತಿ ಜಿಲ್ಲೆಗೆ ಸರ್ಕಾರದ ವತಿಯಿಂದ ಉಸ್ತುವಾರಿ ಅಧಿಕಾರಿಯನ್ನು ನೇಮಿಸಬೇಕು. ಅದಕ್ಕಿಂತ ಮುಂಚೆ ವಿತರಕರನ್ನು ಗುರುತಿಸುವ ಕೆಲಸವಾಗಬೇಕು.
ನಿಧಿ ನಿರ್ವಹಣೆ ಮಾಧ್ಯಮ ಅಕಾಡೆಮಿಗೆ
ಪತ್ರಿಕಾ ವಿತರಕರ ಕ್ಷೇಮ ನಿಧಿಗೆ ಸರ್ಕಾರ ಘೋಷಿಸಿರುವ 2 ಕೋಟಿ ರೂ.ಗಳನ್ನು ಕರ್ನಾಟಕ ಮಾಧ್ಯಮ ಅಕಾಡೆಮಿಗೆ ನೀಡಲು ತೀರ್ವನಿಸಲಾಗಿದೆ. ಚಲನಚಿತ್ರ ಅಕಾಡೆಮಿಯಲ್ಲಿ ಕಾರ್ವಿುಕರಿಗಾಗಿ 10 ಕೋಟಿ ರೂ. ನಿಧಿ ಇಡಲಾಗಿದ್ದು, ಅದನ್ನು ನಿಭಾಯಿಸುತ್ತಿರುವ ಮಾದರಿಯಲ್ಲಿಯೇ ಪತ್ರಿಕಾ ವಿತರಕರ ಕ್ಷೇಮ ನಿಧಿ ಬಳಸಲು ಮಾರ್ಗಸೂಚಿ ಸಿದ್ಧಪಡಿಸಲಾಗುತ್ತಿದೆ. ಮುಂದೆ ಇನ್ನೂ ಹೆಚ್ಚಿನ ನೆರವನ್ನು ಸರ್ಕಾರ ನೀಡಲಿದೆ ಎಂದು ಸಿಎಂ ಮಾಧ್ಯಮ ಕಾರ್ಯದರ್ಶಿ ಎಚ್.ಬಿ. ದಿನೇಶ್ ತಿಳಿಸಿದ್ದಾರೆ.
ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿಗೆ ಹಿಂದಿನ ಸರ್ಕಾರ ಅನುದಾನ ನೀಡಿದ್ದು, ಫಲಾನುಭವಿಗಳಿಗೆ ತಲುಪಿಸುವ ಕೆಲಸ ಆಗುತ್ತಿಲ್ಲ. ಈಗಿನ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು.
| ಮುಕುಂದ ಮಾರತ್ಹಳ್ಳಿ
ಬೆಳಗಿನ ಜಾವ ಪತ್ರಿಕೆ ಹಾಕಲು ತೆರಳು ವಾಗ ಅವಘಡ ವಾಗುವ ಸಾಧ್ಯತೆ ಇರುತ್ತದೆ. ದಟ್ಟವಾದ ಮಂಜು ಕವಿದಾಗ ಎದುರಿಗೆ ಬರುವ ವಾಹನ ಕಾಣದು. ಆದ್ದರಿಂದ ವಿಮೆ ಸೌಲಭ್ಯ ಇದ್ದರೆ ಒಳ್ಳೆಯದು.
| ಉಮಾಶಂಕರ್ ಹೊಸಹಳ್ಳಿ
ಪತ್ರಿಕಾ ವಿತರಕರಿಗೆ ಜೀವನ ಭದ್ರತೆ ಇಲ್ಲ. ಕಮಿಷನ್ ಆಧಾರದಲ್ಲಿ ದುಡಿದು ಜೀವನ ನಡೆಸಬೇಕಿದೆ. ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಸಿಗಬೇಕು. ಸರ್ಕಾರದಿಂದ ಪ್ರತಿ ವರ್ಷ ಪತ್ರಿಕಾ ವಿತರಕರ ಪ್ರತಿಭಾವಂತ ಮಕ್ಕಳನ್ನು ಪ್ರೋತ್ಸಾಹಿಸಬೇಕು.
| ಅನಂತ್ ನವರಂಗ್
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ