ನವದೆಹಲಿ: ದೇಶದ ಲಕ್ಷಾಂತರ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಶುಶ್ರೂಷಕಿಯರಿಗೆ ಪ್ರಧಾನಿ ನರೇಂದ್ರ ಮೋದಿ ಗೌರಿ, ಗಣೇಶ ಹಬ್ಬದ ಭರ್ಜರಿ ಉಡುಗೊರೆ ಪ್ರಕಟಿಸಿದ್ದಾರೆ. ಮುಂದಿನ ತಿಂಗಳಿನಿಂದಲೇ ಜಾರಿ ಆಗುವಂತೆ ಗೌರವ ಧನ ಹೆಚ್ಚಳದ ಜತೆಗೆ ಆಶಾ ಕಾರ್ಯಕರ್ತೆಯರು, ಶುಶ್ರೂಷಕಿಯರನ್ನು ಸಾಮಾಜಿಕ ಭದ್ರತಾ ಯೋಜನೆ ಆದ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಹಾಗೂ ಸುರಕ್ಷಾ ವಿಮೆ ಯೋಜನೆ ವ್ಯಾಪ್ತಿಗೆ ತರುವ ನಿರ್ಧಾರ ಕೈಗೊಂಡಿದ್ದಾರೆ.
ಅ.1ರಿಂದ ಅನ್ವಯ: ಸದ್ಯ ಕರ್ನಾಟಕ ಸೇರಿ
ಬಹುತೇಕ ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ಗೌರವಧನ ಜತೆಗೆ ರಾಜ್ಯ ಸರ್ಕಾರ ಸಹಾಯಧನ ಸೇರಿಸಿ ಕೊಡುತ್ತದೆ. ವೇತನ ಏರಿಕೆ ಅ.1ರಿಂದ ಅನ್ವಯವಾಗಲಿದೆ. ಮಂಗಳವಾರ ದೇಶಾದ್ಯಂತ ವಿವಿಧ ಕೇಂದ್ರಗಳಲ್ಲಿ ನೆರೆದಿದ್ದ ಲಕ್ಷಾಂತರ ಕಾರ್ಯಕರ್ತೆಯರ ಜತೆಗಿನ ವಿಡಿಯೋ ಸಂವಾದದಲ್ಲಿ ಪ್ರಧಾನಿ ಮೋದಿ ಈ ಘೋಷಣೆ ಹೊರಡಿಸಿದರು.
ಪೋಷಕಾಂಶ ಮಾಸಿಕ ಅಭಿಯಾನ
ಸೆಪ್ಟೆಂಬರ್ನಲ್ಲಿ ಪೋಷಕಾಂಶ ಮಾಸಿಕ ಅಭಿಯಾನ ಕೈಗೊಳ್ಳಲಾಗಿದ್ದು, ಆಶಾ, ಅಂಗನವಾಡಿ ಹಾಗೂ ಎಎನ್ಎಂ ಕಾರ್ಯಕರ್ತೆಯರು ದೇಶದ ಪ್ರತಿಯೊಂದು ಬಡ ಜನರ ಮನೆಗೆ ಸರ್ಕಾರಿ ಯೋಜನೆ ಮುಟ್ಟುವಂತೆ ಕೆಲಸ ಮಾಡಬೇಕು. ವಿಶ್ವಸಂಸ್ಥೆಯೇ ಹೇಳಿದಂತೆ ಸ್ವಚ್ಛತಾ ಅಭಿಯಾನದಿಂದ 3 ಲಕ್ಷಕ್ಕೂ ಅಧಿಕ ಜನರ ಜೀವ ಉಳಿಯುತ್ತಿದೆ. ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಬೇಕು ಎಂದು ಮೋದಿ ಕರೆ ನೀಡಿದರು.
ಸೆ.23ಕ್ಕೆ ಆಯುಷ್ಮಾನ್ ಉದ್ಘಾಟನೆ
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಆಯುಷ್ಮಾನ್ ಭಾರತ ಸೆ.23ರಂದು ಜಾರ್ಖಂಡ್ನಲ್ಲಿ ಉದ್ಘಾಟನೆಯಾಗಲಿದೆ. ಯೋಜನೆಯ ಫಲಾನುಭವಿಗಳನ್ನು ಈಗಾಗಲೇ ಗುರುತಿಸಲಾಗಿದೆ. ಆದಾಗ್ಯೂ ಯೋಜನೆ ನೋಂದಣಿಗಾಗಿ ಆಶಾ, ಅಂಗನವಾಡಿ ಹಾಗೂ ಎಎನ್ಎಂ ಕಾರ್ಯಕರ್ತೆಯರು ಸಹಕರಿಸಬೇಕು ಎಂದು ಪ್ರಧಾನಿ ಮನವಿ ಮಾಡಿದ್ದಾರೆ.
ಸಾಮಾಜಿಕ ಭದ್ರತೆ
ವೇತನ ಏರಿಕೆ ಜತೆಗೆ ಆಶಾ ಕಾರ್ಯಕರ್ತೆಯರು ಹಾಗೂ ಶುಶ್ರೂಷಕಿಯರು ಇನ್ನು ಸಾಮಾಜಿಕ ಭದ್ರತಾ ಯೋಜನೆ ವ್ಯಾಪ್ತಿಗೆ ಬರಲಿದ್ದಾರೆ. ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಹಾಗೂ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ಇವರಿಗೂ ಅನ್ವಯವಾಗಲಿದೆ. ಇದಕ್ಕಾಗಿ ಯಾವುದೇ ಪ್ರೀಮಿಯಂ ಕಟ್ಟಬೇಕಿಲ್ಲ. ಸರ್ಕಾರವೇ ಭರಿಸಲಿದೆ. ಪ್ರತಿಯಾಗಿ ಯಾವುದೇ ಅಹಿತಕರ ಘಟನೆ ನಡೆದರೆ ಸರ್ಕಾರದಿಂದ 4 ಲಕ್ಷ ರೂ.ಗಳವರೆಗೆ ವಿಮಾ ಹಣ ದೊರೆಯಲಿದೆ.
ಪ್ರೋತ್ಸಾಹ ಧನ ದ್ವಿಗುಣ
ಸದ್ಯ ಆಶಾ ಕಾರ್ಯಕರ್ತೆಯರಿಗೆ ವಿವಿಧ ಯೋಜನೆಗಳ ಮೂಲಕ ಕನಿಷ್ಠ 1 ಸಾವಿರ ರೂ. ಪ್ರೋತ್ಸಾಹಧನ ಸಿಗುತ್ತಿದೆ. ಇದೀಗ ಈ ಹಣವನ್ನು ದ್ವಿಗುಣಗೊಳಿಸಿರುವುದಾಗಿ ಪ್ರಧಾನಿ ತಿಳಿಸಿದ್ದಾರೆ. ಹಾಗೆಯೇ ಐಸಿಡಿಎಸ್-ಐಸಿಎಸ್ ತಂತ್ರಾಂಶ ಬಳಸುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರಿಗೆ 250-500 ರೂ.ಗಳವರೆಗೆ ಪ್ರೋತ್ಸಾಹಧನ ನೀಡಲು ನಿರ್ಧರಿಸಲಾಗಿದೆ.
ರಾಜ್ಯಕ್ಕೂ ಆಶಾಕಿರಣ
ಬೆಂಗಳೂರು: ಕೇಂದ್ರ ಸರ್ಕಾರದ ವೇತನ ಹೆಚ್ಚಳ ಹಾಗೂ ಉಚಿತ ವಿಮೆ ಸೌಲಭ್ಯ ರಾಜ್ಯಾದ್ಯಂತ 1.63 ಲಕ್ಷ ಕಾರ್ಯಕರ್ತೆಯರಿಗೆ ಸಿಗಲಿದೆ. ರಾಜ್ಯದಲ್ಲಿ 1.24 ಲಕ್ಷ ಅಂಗನವಾಡಿ ನೌಕರರಿದ್ದು, 39 ಸಾವಿರ ಆಶಾ ಕಾರ್ಯಕರ್ತೆಯರಿದ್ದಾರೆ. ಆಶಾ ಕಾರ್ಯಕರ್ತೆಯರ ನಿರಂತರ ಹೋರಾಟದ ನಂತರ 2017ರಲ್ಲಿ ರಾಜ್ಯ ಸರ್ಕಾರ ಗೌರವಧನವನ್ನು 3500 ರೂ.ಗೆ ಹೆಚ್ಚಿಸಿದೆ. ಆದರೆ ಕಾರ್ಯಕರ್ತೆಯರು 6 ಸಾವಿರ ರೂ.ಗೆ ಹೆಚ್ಚಿಸುವಂತೆ ಬೇಡಿಕೆ ಇಟ್ಟಿದ್ದಾರೆ. 12,500 ರೂ.ಗಳ ಕನಿಷ್ಠ ವೇತನ ನೀಡಬೇಕೆಂಬ ನಿಯಮವಿದೆ.
ಅದರಂತೆ ರಾಜ್ಯ ಸರ್ಕಾರ 6 ಸಾವಿರ ರೂ.ಗಳ ಗೌರವಧನ ನೀಡಿದಲ್ಲಿ, ಕೇಂದ್ರದಿಂದ ಬರುವ ಪ್ರೋತ್ಸಾಹಧನವನ್ನು ಹೆಚ್ಚಿಸುವುದಕ್ಕೆ ಬೇಡಿಕೆ ಇಡುವುದಾಗಿ ಕಾರ್ಯಕರ್ತೆಯರು ಹೇಳಿದ್ದರು. ಇದಲ್ಲದೇ ರಾಜ್ಯ ಸರ್ಕಾರ ಸುವರ್ಣ ಆರೋಗ್ಯ ಸುರಕ್ಷತಾ ಟ್ರಸ್ಟ್ ಅಡಿಯಲ್ಲಿ ಆರೋಗ್ಯ ಕಾರ್ಡ್ ವಿತರಿಸುವ ಭರವಸೆಯನ್ನು ನೀಡಿತ್ತು. ಅದು ಕೂಡ ಭರವಸೆ ಆಗೇ ಉಳಿದಿದೆ. ಅಂಗನವಾಡಿ ನೌಕಕರಿಗೆ ಕ್ಷೇಮಾಭಿವೃದ್ಧಿ ಸ್ಥಾಪಿಸಲಾಗಿದ್ದು, ಅದೇ ಮಾದರಿಯನ್ನು ಆಶಾ ಕಾರ್ಯಕತೆರ್ಯರಿಗೂ ಒದಗಿಸಬೇಕೆಂಬ ಕೂಗು ಕೇಳಿ ಬಂದಿತ್ತು. ಅದರ ಮೂಲಕ ಅಪಘಾತಕ್ಕೊಳಗಾಗುವ ಕಾರ್ಯಕರ್ತೆಯರಿಗೆ 2 ಲಕ್ಷ ರೂ.ಗಳ ಮೊತ್ತವನ್ನು ದೊರಕಿಸುವಂತೆ ನಿಧಿ ಸ್ಥಾಪಿಸಬೇಕೆಂದು ಒತ್ತಾಯಿಸಿದರು. ಇದೀಗ ಕೇಂದ್ರ ಸರ್ಕಾರದ ನಿರ್ಧಾರದಿಂದ ಬಹುತೇಕ ಸೌಲಭ್ಯಗಳು ದೊರೆಯುವ ನಿರೀಕ್ಷೆಯಿದೆ.
ಕೇಂದ್ರ ಸರ್ಕಾರ ಅಂಗನವಾಡಿ ನೌಕರರಿಗೆ 7ನೇ ವೇತನ ಆಯೋಗದ ಪ್ರಕಾರ ಕನಿಷ್ಠ ವೇತನವನ್ನು ಹೆಚ್ಚಿಸಬೇಕಿದೆ. ಅದರಂತೆ ಕೇಂದ್ರ ಸರ್ಕಾರದಿಂದ ಕನಿಷ್ಠ 10 ಸಾವಿರ ರೂ. ವೇತನ ದೊರೆಯಬೇಕು. ಆದರೆ ಸರ್ಕಾರ ಅಲ್ಪ ಮೊತ್ತವನ್ನಷ್ಟೇ ಹೆಚ್ಚಿಸಿದೆ. ನಮ್ಮ ಬೇಡಿಕೆಗಳಿಗೆ ಇನ್ನೂ ಸ್ಪಂದನೆ ದೊರೆಯಬೇಕಿದೆ.
|ವರಲಕ್ಷ್ಮೀ, ಸಿಐಟಿಯು ರಾಜಾಧ್ಯಕ್ಷೆ
ಕೇಂದ್ರ ಸರ್ಕಾರದ ಈ ನಿರ್ಧಾರ ಖುಷಿ ನೀಡಿದೆ. ಎಲ್ಲ ಸೌಲಭ್ಯಗಳನ್ನು ಒದಗಿಸುತ್ತಿರುವುದು ಸಂತಸದ ವಿಚಾರ. ಆದರೆ ಸದ್ಯಕ್ಕೆ ಪ್ರೋತ್ಸಾಹಧನದ ಮೊತ್ತವು 1,500 ರೂ.ಗಳಿದ್ದು, ಈ ಮೊತ್ತವನ್ನು ಕನಿಷ್ಠ 6 ಸಾವಿರಕ್ಕೆ ಹೆಚ್ಚಿಸಬೇಕು. ಈ ನಿಟ್ಟಿನಲ್ಲಿಯೂ ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಬೇಕು.
| ರಮಾ ಸಲಹೆಗಾರರು, ಆಶಾ ಸಂಘ(ಎಐಯುಟಿಯುಸಿ)
ಮಲ್ಲಮ್ಮನ ಜತೆ ಮೋದಿ ಮಾತು
ಪ್ರಧಾನಿ ನರೇಂದ್ರ ಮೋದಿ ಯಾದಗಿರಿ ಜಿಲ್ಲೆ ಕಡೇಚೂರಿನ ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿ ಮಲ್ಲಮ್ಮ ಜತೆ ವಿಡಿಯೋ ಕಾನ್ಪರೆನ್ಸ್ನಲ್ಲಿ ಮಾತನಾಡಿದರು. ‘ಯಾದಗಿರಿ ಜಿಲ್ಲೆಯ ಜನತೆಗೆ ನನ್ನ ನಮಸ್ಕಾರಗಳು… ನಿಮಗೆ ನನ್ನ ಹಾರ್ದಿಕ ಶುಭಾಶಯಗಳು’ ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಮೋದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸೇವೆಗೆ ಶ್ಲಾಘನೆ ವ್ಯಕ್ತಪಡಿಸಿದರು. ‘ದೇಶದ ಪ್ರಧಾನಿ ಜತೆ ಮಾತನಾಡಲು ಅವಕಾಶ ಸಿಕ್ಕಿದ್ದು ನನ್ನ ಸುದೈವ’ ಎಂದು ಮಲ್ಲಮ್ಮ ಹರ್ಷ ವ್ಯಕ್ತಪಡಿಸಿದರು.
ಅ.1ರಿಂದ ಅನ್ವಯ: ಸದ್ಯ ಕರ್ನಾಟಕ ಸೇರಿ
ಬಹುತೇಕ ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ಗೌರವಧನ ಜತೆಗೆ ರಾಜ್ಯ ಸರ್ಕಾರ ಸಹಾಯಧನ ಸೇರಿಸಿ ಕೊಡುತ್ತದೆ. ವೇತನ ಏರಿಕೆ ಅ.1ರಿಂದ ಅನ್ವಯವಾಗಲಿದೆ. ಮಂಗಳವಾರ ದೇಶಾದ್ಯಂತ ವಿವಿಧ ಕೇಂದ್ರಗಳಲ್ಲಿ ನೆರೆದಿದ್ದ ಲಕ್ಷಾಂತರ ಕಾರ್ಯಕರ್ತೆಯರ ಜತೆಗಿನ ವಿಡಿಯೋ ಸಂವಾದದಲ್ಲಿ ಪ್ರಧಾನಿ ಮೋದಿ ಈ ಘೋಷಣೆ ಹೊರಡಿಸಿದರು.
ಪೋಷಕಾಂಶ ಮಾಸಿಕ ಅಭಿಯಾನ
ಸೆಪ್ಟೆಂಬರ್ನಲ್ಲಿ ಪೋಷಕಾಂಶ ಮಾಸಿಕ ಅಭಿಯಾನ ಕೈಗೊಳ್ಳಲಾಗಿದ್ದು, ಆಶಾ, ಅಂಗನವಾಡಿ ಹಾಗೂ ಎಎನ್ಎಂ ಕಾರ್ಯಕರ್ತೆಯರು ದೇಶದ ಪ್ರತಿಯೊಂದು ಬಡ ಜನರ ಮನೆಗೆ ಸರ್ಕಾರಿ ಯೋಜನೆ ಮುಟ್ಟುವಂತೆ ಕೆಲಸ ಮಾಡಬೇಕು. ವಿಶ್ವಸಂಸ್ಥೆಯೇ ಹೇಳಿದಂತೆ ಸ್ವಚ್ಛತಾ ಅಭಿಯಾನದಿಂದ 3 ಲಕ್ಷಕ್ಕೂ ಅಧಿಕ ಜನರ ಜೀವ ಉಳಿಯುತ್ತಿದೆ. ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಬೇಕು ಎಂದು ಮೋದಿ ಕರೆ ನೀಡಿದರು.
ಸೆ.23ಕ್ಕೆ ಆಯುಷ್ಮಾನ್ ಉದ್ಘಾಟನೆ
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಆಯುಷ್ಮಾನ್ ಭಾರತ ಸೆ.23ರಂದು ಜಾರ್ಖಂಡ್ನಲ್ಲಿ ಉದ್ಘಾಟನೆಯಾಗಲಿದೆ. ಯೋಜನೆಯ ಫಲಾನುಭವಿಗಳನ್ನು ಈಗಾಗಲೇ ಗುರುತಿಸಲಾಗಿದೆ. ಆದಾಗ್ಯೂ ಯೋಜನೆ ನೋಂದಣಿಗಾಗಿ ಆಶಾ, ಅಂಗನವಾಡಿ ಹಾಗೂ ಎಎನ್ಎಂ ಕಾರ್ಯಕರ್ತೆಯರು ಸಹಕರಿಸಬೇಕು ಎಂದು ಪ್ರಧಾನಿ ಮನವಿ ಮಾಡಿದ್ದಾರೆ.
ಸಾಮಾಜಿಕ ಭದ್ರತೆ
ವೇತನ ಏರಿಕೆ ಜತೆಗೆ ಆಶಾ ಕಾರ್ಯಕರ್ತೆಯರು ಹಾಗೂ ಶುಶ್ರೂಷಕಿಯರು ಇನ್ನು ಸಾಮಾಜಿಕ ಭದ್ರತಾ ಯೋಜನೆ ವ್ಯಾಪ್ತಿಗೆ ಬರಲಿದ್ದಾರೆ. ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಹಾಗೂ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ಇವರಿಗೂ ಅನ್ವಯವಾಗಲಿದೆ. ಇದಕ್ಕಾಗಿ ಯಾವುದೇ ಪ್ರೀಮಿಯಂ ಕಟ್ಟಬೇಕಿಲ್ಲ. ಸರ್ಕಾರವೇ ಭರಿಸಲಿದೆ. ಪ್ರತಿಯಾಗಿ ಯಾವುದೇ ಅಹಿತಕರ ಘಟನೆ ನಡೆದರೆ ಸರ್ಕಾರದಿಂದ 4 ಲಕ್ಷ ರೂ.ಗಳವರೆಗೆ ವಿಮಾ ಹಣ ದೊರೆಯಲಿದೆ.
ಪ್ರೋತ್ಸಾಹ ಧನ ದ್ವಿಗುಣ
ಸದ್ಯ ಆಶಾ ಕಾರ್ಯಕರ್ತೆಯರಿಗೆ ವಿವಿಧ ಯೋಜನೆಗಳ ಮೂಲಕ ಕನಿಷ್ಠ 1 ಸಾವಿರ ರೂ. ಪ್ರೋತ್ಸಾಹಧನ ಸಿಗುತ್ತಿದೆ. ಇದೀಗ ಈ ಹಣವನ್ನು ದ್ವಿಗುಣಗೊಳಿಸಿರುವುದಾಗಿ ಪ್ರಧಾನಿ ತಿಳಿಸಿದ್ದಾರೆ. ಹಾಗೆಯೇ ಐಸಿಡಿಎಸ್-ಐಸಿಎಸ್ ತಂತ್ರಾಂಶ ಬಳಸುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರಿಗೆ 250-500 ರೂ.ಗಳವರೆಗೆ ಪ್ರೋತ್ಸಾಹಧನ ನೀಡಲು ನಿರ್ಧರಿಸಲಾಗಿದೆ.
ರಾಜ್ಯಕ್ಕೂ ಆಶಾಕಿರಣ
ಬೆಂಗಳೂರು: ಕೇಂದ್ರ ಸರ್ಕಾರದ ವೇತನ ಹೆಚ್ಚಳ ಹಾಗೂ ಉಚಿತ ವಿಮೆ ಸೌಲಭ್ಯ ರಾಜ್ಯಾದ್ಯಂತ 1.63 ಲಕ್ಷ ಕಾರ್ಯಕರ್ತೆಯರಿಗೆ ಸಿಗಲಿದೆ. ರಾಜ್ಯದಲ್ಲಿ 1.24 ಲಕ್ಷ ಅಂಗನವಾಡಿ ನೌಕರರಿದ್ದು, 39 ಸಾವಿರ ಆಶಾ ಕಾರ್ಯಕರ್ತೆಯರಿದ್ದಾರೆ. ಆಶಾ ಕಾರ್ಯಕರ್ತೆಯರ ನಿರಂತರ ಹೋರಾಟದ ನಂತರ 2017ರಲ್ಲಿ ರಾಜ್ಯ ಸರ್ಕಾರ ಗೌರವಧನವನ್ನು 3500 ರೂ.ಗೆ ಹೆಚ್ಚಿಸಿದೆ. ಆದರೆ ಕಾರ್ಯಕರ್ತೆಯರು 6 ಸಾವಿರ ರೂ.ಗೆ ಹೆಚ್ಚಿಸುವಂತೆ ಬೇಡಿಕೆ ಇಟ್ಟಿದ್ದಾರೆ. 12,500 ರೂ.ಗಳ ಕನಿಷ್ಠ ವೇತನ ನೀಡಬೇಕೆಂಬ ನಿಯಮವಿದೆ.
ಅದರಂತೆ ರಾಜ್ಯ ಸರ್ಕಾರ 6 ಸಾವಿರ ರೂ.ಗಳ ಗೌರವಧನ ನೀಡಿದಲ್ಲಿ, ಕೇಂದ್ರದಿಂದ ಬರುವ ಪ್ರೋತ್ಸಾಹಧನವನ್ನು ಹೆಚ್ಚಿಸುವುದಕ್ಕೆ ಬೇಡಿಕೆ ಇಡುವುದಾಗಿ ಕಾರ್ಯಕರ್ತೆಯರು ಹೇಳಿದ್ದರು. ಇದಲ್ಲದೇ ರಾಜ್ಯ ಸರ್ಕಾರ ಸುವರ್ಣ ಆರೋಗ್ಯ ಸುರಕ್ಷತಾ ಟ್ರಸ್ಟ್ ಅಡಿಯಲ್ಲಿ ಆರೋಗ್ಯ ಕಾರ್ಡ್ ವಿತರಿಸುವ ಭರವಸೆಯನ್ನು ನೀಡಿತ್ತು. ಅದು ಕೂಡ ಭರವಸೆ ಆಗೇ ಉಳಿದಿದೆ. ಅಂಗನವಾಡಿ ನೌಕಕರಿಗೆ ಕ್ಷೇಮಾಭಿವೃದ್ಧಿ ಸ್ಥಾಪಿಸಲಾಗಿದ್ದು, ಅದೇ ಮಾದರಿಯನ್ನು ಆಶಾ ಕಾರ್ಯಕತೆರ್ಯರಿಗೂ ಒದಗಿಸಬೇಕೆಂಬ ಕೂಗು ಕೇಳಿ ಬಂದಿತ್ತು. ಅದರ ಮೂಲಕ ಅಪಘಾತಕ್ಕೊಳಗಾಗುವ ಕಾರ್ಯಕರ್ತೆಯರಿಗೆ 2 ಲಕ್ಷ ರೂ.ಗಳ ಮೊತ್ತವನ್ನು ದೊರಕಿಸುವಂತೆ ನಿಧಿ ಸ್ಥಾಪಿಸಬೇಕೆಂದು ಒತ್ತಾಯಿಸಿದರು. ಇದೀಗ ಕೇಂದ್ರ ಸರ್ಕಾರದ ನಿರ್ಧಾರದಿಂದ ಬಹುತೇಕ ಸೌಲಭ್ಯಗಳು ದೊರೆಯುವ ನಿರೀಕ್ಷೆಯಿದೆ.
ಕೇಂದ್ರ ಸರ್ಕಾರ ಅಂಗನವಾಡಿ ನೌಕರರಿಗೆ 7ನೇ ವೇತನ ಆಯೋಗದ ಪ್ರಕಾರ ಕನಿಷ್ಠ ವೇತನವನ್ನು ಹೆಚ್ಚಿಸಬೇಕಿದೆ. ಅದರಂತೆ ಕೇಂದ್ರ ಸರ್ಕಾರದಿಂದ ಕನಿಷ್ಠ 10 ಸಾವಿರ ರೂ. ವೇತನ ದೊರೆಯಬೇಕು. ಆದರೆ ಸರ್ಕಾರ ಅಲ್ಪ ಮೊತ್ತವನ್ನಷ್ಟೇ ಹೆಚ್ಚಿಸಿದೆ. ನಮ್ಮ ಬೇಡಿಕೆಗಳಿಗೆ ಇನ್ನೂ ಸ್ಪಂದನೆ ದೊರೆಯಬೇಕಿದೆ.
|ವರಲಕ್ಷ್ಮೀ, ಸಿಐಟಿಯು ರಾಜಾಧ್ಯಕ್ಷೆ
ಕೇಂದ್ರ ಸರ್ಕಾರದ ಈ ನಿರ್ಧಾರ ಖುಷಿ ನೀಡಿದೆ. ಎಲ್ಲ ಸೌಲಭ್ಯಗಳನ್ನು ಒದಗಿಸುತ್ತಿರುವುದು ಸಂತಸದ ವಿಚಾರ. ಆದರೆ ಸದ್ಯಕ್ಕೆ ಪ್ರೋತ್ಸಾಹಧನದ ಮೊತ್ತವು 1,500 ರೂ.ಗಳಿದ್ದು, ಈ ಮೊತ್ತವನ್ನು ಕನಿಷ್ಠ 6 ಸಾವಿರಕ್ಕೆ ಹೆಚ್ಚಿಸಬೇಕು. ಈ ನಿಟ್ಟಿನಲ್ಲಿಯೂ ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಬೇಕು.
| ರಮಾ ಸಲಹೆಗಾರರು, ಆಶಾ ಸಂಘ(ಎಐಯುಟಿಯುಸಿ)
ಮಲ್ಲಮ್ಮನ ಜತೆ ಮೋದಿ ಮಾತು
ಪ್ರಧಾನಿ ನರೇಂದ್ರ ಮೋದಿ ಯಾದಗಿರಿ ಜಿಲ್ಲೆ ಕಡೇಚೂರಿನ ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿ ಮಲ್ಲಮ್ಮ ಜತೆ ವಿಡಿಯೋ ಕಾನ್ಪರೆನ್ಸ್ನಲ್ಲಿ ಮಾತನಾಡಿದರು. ‘ಯಾದಗಿರಿ ಜಿಲ್ಲೆಯ ಜನತೆಗೆ ನನ್ನ ನಮಸ್ಕಾರಗಳು… ನಿಮಗೆ ನನ್ನ ಹಾರ್ದಿಕ ಶುಭಾಶಯಗಳು’ ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಮೋದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸೇವೆಗೆ ಶ್ಲಾಘನೆ ವ್ಯಕ್ತಪಡಿಸಿದರು. ‘ದೇಶದ ಪ್ರಧಾನಿ ಜತೆ ಮಾತನಾಡಲು ಅವಕಾಶ ಸಿಕ್ಕಿದ್ದು ನನ್ನ ಸುದೈವ’ ಎಂದು ಮಲ್ಲಮ್ಮ ಹರ್ಷ ವ್ಯಕ್ತಪಡಿಸಿದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ