ಕಾಪೋರೇಟರ್ಗಳ ಲಂಚಾವತಾರ ಬಯಲು >>
| ಬಿ.ಎಂ. ನರೇಶ್ಗೌಡ/ ವಿ. ಮುರಳೀಧರ
ಬೆಂಗಳೂರು: ಅಕ್ರಮ ಕಟ್ಟಡಗಳ ತೆರವಿನ ಹೊಣೆ ಹೊತ್ತಿರುವ ಬಿಬಿಎಂಪಿ ನಗರ ಯೋಜನೆ ಸ್ಥಾಯಿ ಸಮಿತಿ ಸದಸ್ಯರ ಲಂಚಾವತಾರ ಬಯಲಾಗಿದೆ. ನಕ್ಷೆ ಉಲ್ಲಂಘಿಸಿ ಮನೆ ನಿರ್ವಿುಸಿದ್ದ ವ್ಯಕ್ತಿಯೊಬ್ಬರ ಜತೆ ಸೇರಿ ದಿಗ್ವಿಜಯ ನ್ಯೂಸ್ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಅಕ್ರಮ ಸಕ್ರಮಕ್ಕೆ 10 ಲಕ್ಷ ರೂ.ಲಂಚ ಕೇಳಿದ್ದ ಮೂವರು ಕಾಪೋರೇಟರ್ಗಳ ಸಹಿತ ಐವರು ಸಿಕ್ಕಿಬಿದ್ದಿದ್ದಾರೆ.
ಜನಸೇವೆ ಮಾಡುವುದಾಗಿ ಭರವಸೆಗಳನ್ನು ಕೊಟ್ಟು ಅಧಿಕಾರದ ಚುಕ್ಕಾಣಿ ಹಿಡಿಯುವ ರಾಜಕಾರಣಿಗಳು, ಅಧಿಕಾರಕ್ಕೆ ಬಂದ ನಂತರ ಜನರನ್ನೇ ಸುಲಿಗೆ ಮಾಡುವ ಲಂಚಾವತಾರವನ್ನು ದಿಗ್ವಿಜಯ 247 ನ್ಯೂಸ್ ತಂಡ ಬಯಲಿಗೆಳೆದಿದೆ.
ಬಿಬಿಎಂಪಿ ನಗರ ಯೋಜನೆ ಸ್ಥಾಯಿ ಸಮಿತಿಯ ಅಧ್ಯಕ್ಷ ಹಾಗೂ ಭಾರತಿನಗರ ವಾರ್ಡ್ ಸದಸ್ಯ ಶಕೀಲ್ ಅಹಮದ್, ಯಶವಂತಪುರ ವಾರ್ಡ್ ಸದಸ್ಯ ಜಿ.ಕೆ. ವೆಂಕಟೇಶ್, ಬೈರಸಂದ್ರ ವಾರ್ಡ್ ಸದಸ್ಯ ಎನ್. ನಾಗರಾಜ್, ಅಧ್ಯಕ್ಷರ ಆಪ್ತ ಸಹಾಯಕ ಚಕ್ರವರ್ತಿ ಹಾಗೂ ಬಿಬಿಎಂಪಿ ನೌಕರ ಗುರುರಾಜ್ ತನಿಖಾ ತಂಡದ ಮುಂದೆ 5 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟು ಸಿಕ್ಕಿಬಿದ್ದಿದ್ದಾರೆ.
ನಕ್ಷೆ ಉಲ್ಲಂಘಿಸಿ ನಿರ್ವಿುಸಿದ ಕಟ್ಟಡಗಳನ್ನು ಪತ್ತೆ ಮಾಡಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ಕಟ್ಟಡ ತೆರವುಗೊಳಿಸುವುದು ಬಿಬಿಎಂಪಿ ನಗರ ಯೋಜನೆ ಸ್ಥಾಯಿ ಸಮಿತಿ ಕೆಲಸ. ಸಮಿತಿಯಲ್ಲಿ ಅಧ್ಯಕ್ಷರು ಸೇರಿ 11 ಮಂದಿ ಸದಸ್ಯರಿದ್ದಾರೆ. ಸಮಿತಿ ಅಧ್ಯಕ್ಷ ಶಕೀಲ್ ಆಪ್ತ ಸಹಾಯಕ ಚಕ್ರವರ್ತಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಚಕ್ರವರ್ತಿ ನೇತೃತ್ವದ ತಂಡ ನಿಯಮ ಮೀರಿ ನಿರ್ವಿುಸಿದ ಕಟ್ಟಡಗಳನ್ನು ಪತ್ತೆ ಮಾಡಿ ಮಾಲೀಕರಿಗೆ ಸಮಿತಿ ಅಧ್ಯಕ್ಷರ ವಿಸಿಟಿಂಗ್ ಕಾರ್ಡ್ ನೀಡಿ ಮಾತನಾಡುವಂತೆ ಸೂಚಿಸುತ್ತದೆ. ಈ ಹಂತದಲ್ಲೇ ಕೆಲವು ಬಾರಿ ಹಣ ವಸೂಲಿ ಮಾಡಲಾಗಿದೆ. ಮನೆ ಮಾಲೀಕರನ್ನು ಬೆದರಿಸಲೆಂದೇ 10 ಸಿಮ್ಾರ್ಡ್ ಬಳಸುತ್ತಿದ್ದುದು ಕಂಡುಬಂದಿದೆ.
ತನಿಖೆ ನಡೆದಿದ್ದು ಹೀಗೆ..
ತನಿಖಾ ತಂಡಕ್ಕೆ ಪರಿಚಯವಿದ್ದ ವ್ಯಕ್ತಿಯೊಬ್ಬರು ನಕ್ಷೆ ಉಲ್ಲಂಘಿಸಿ ಮನೆ ನಿರ್ವಿುಸಿದ್ದರು. ಇವರ ಜೊತೆ ದಿಗ್ವಿಜಯ ತನಿಖಾ ತಂಡ ಸೇರಿಕೊಂಡಿತ್ತು. ಇವರಿಗೆ ಹಣ ನೀಡುವಂತೆ ಚಕ್ರವರ್ತಿ ತಂಡ ಸೂಚಿಸಿತ್ತು. ಹಣ ನೀಡದ ಹಿನ್ನೆಲೆಯಲ್ಲಿ ಚಕ್ರವರ್ತಿ ಮನೆ ಮಾಲೀಕ ಎಂದು ಹೇಳಿಕೊಂಡಿದ್ದ ತನಿಖಾ ತಂಡದ ಸದಸ್ಯನನ್ನು ಅಧ್ಯಕ್ಷರ ಬಳಿಗೆ ಕರೆದೊಯ್ದರು. ಈ ವೇಳೆ ಅಧ್ಯಕ್ಷ ಶಕೀಲ್ ಅಹಮದ್ ಇತರರ ಜತೆ ಮಾತುಕತೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಸಮಿತಿಯ ಸದಸ್ಯ ರೊಂದಿಗೆ ಮಾತನಾಡು ವಂತೆ ಸೂಚಿಸಿದರು. ಅಧ್ಯಕ್ಷರ ಕೊಠಡಿಗೆ ಬೈರಸಂದ್ರ ವಾರ್ಡ್ ಸದಸ್ಯ ಎನ್. ನಾಗರಾಜ್ ಹಾಗೂ ಯಶವಂತಪುರ ವಾರ್ಡ್ ಸದಸ್ಯ ಜಿ.ಕೆ. ವೆಂಕಟೇಶ್ ಆಗಮಿಸಿದರು. ಈ ವೇಳೆ ಚಕ್ರವರ್ತಿ, ‘ಅಧ್ಯಕ್ಷರು 10 ಲಕ್ಷ ರೂ. ವಸೂಲಿ ಮಾಡಲು ಸೂಚಿಸಿದ್ದಾರೆ’ ಎಂದು ಸದಸ್ಯರಿಗೆ ಹೇಳಿದರು.
17 ನಿಮಿಷ ಮಾತುಕತೆ ನಡೆದು ಕೊನೆಗೆ 3 ದಿನದಲ್ಲಿ 5 ಲಕ್ಷ ರೂ. ನೀಡುವಂತೆ ಇಬ್ಬರು ಸದಸ್ಯರು ಹೇಳಿದರು. ಮನೆ ಮಾಲೀಕ ಎಂದು ಹೇಳಿಕೊಂಡಿದ್ದ ತನಿಖಾ ತಂಡದ ವರದಿಗಾರನ ಮೊಬೈಲ್ ಸಂಖ್ಯೆಯನ್ನು ನೌಕರ ಗುರುರಾಜ್ ಪಡೆದರು. ತಂಡ ಕೋಟಿಗಟ್ಟಲೆ ಹಣ ವಸೂಲಿ ಮಾಡಿರುವ ಶಂಕೆಯಿದ್ದು, ಸಂಪೂರ್ಣ ತನಿಖೆಯಾಗಬೇಕಿದೆ.
ಸಿಎಂ ಮಾತನ್ನೂ ಕೇಳಲ್ಲ…
ನಗರ ಸ್ಥಾಯಿ ಸಮಿತಿ ಸದಸ್ಯರು ಲಂಚಕ್ಕೆ ಬೇಡಿಕೆ ಸಲ್ಲಿಸುವ ವೇಳೆ, ‘ಸಿಎಂ ಕುಮಾರಸ್ವಾಮಿ ಹೇಳಿದರೂ ನಾವು ಕೇಳುವುದಿಲ್ಲ. ನಮಗೆ ಹಣ ನೀಡಲೇಬೇಕು. ಚುನಾವಣೆಯಲ್ಲಿ ಕೋಟಿಗಟ್ಟಲೆ ಹಣ ಖರ್ಚು ಮಾಡಿ ಗೆದ್ದಿದ್ದೇವೆ. 3 ದಿನದಲ್ಲಿ ಹಣ ಪಾವತಿ ಮಾಡದಿದ್ದರೆ ಮನೆಯ ವಿದ್ಯುತ್ ಹಾಗೂ ಕಾವೇರಿ ನೀರು ಸಂಪರ್ಕ ಕಡಿತ ಮಾಡಲು ಬೆಸ್ಕಾಂ ಹಾಗೂ ಜಲಮಂಡಳಿಗೆ ಸೂಚನೆ ನಿಡುತ್ತೇವೆ’ ಎಂದು ಬೆದರಿಸಿದರು. ಇಬ್ಬರು ಸದಸ್ಯರು ಲಂಚಕ್ಕೆ ಬೇಡಿಕೆ ಇಟ್ಟ ದೃಶ್ಯ ಸಂಪೂರ್ಣ ಚಿತ್ರೀಕರಣವಾಗಿದೆ.
ಲಂಚಾವತಾರದಲ್ಲಿ ಸಿಕ್ಕಿಬಿದ್ದ ಕಾಪೋರೇಟರ್ಗಳ ಕೃತ್ಯ ಎಲ್ಲ ಸದಸ್ಯರು ತಲೆತಗ್ಗಿಸುವಂತೆ ಮಾಡಿದೆ. ಹೈಕಮಾಂಡ್ ಇವರ ವಿರುದ್ಧ ವರದಿ ಕೇಳಿದೆ. ಆರೋಪ ಸಾಬೀತಾದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು.
| ಸಂಪತ್ರಾಜ್, ಮೇಯರ್
ದಿಗ್ವಿಜಯ ತನಿಖಾ ತಂಡ ಬಿಬಿಎಂಪಿಯ ನಗರ ಯೋಜನೆ ಸ್ಥಾಯಿ ಸಮಿತಿಯ ಭ್ರಷ್ಟಾಚಾರ ಬಯಲಿಗೆ ಎಳೆದಿರುವುದು ಶ್ಲಾಘನೀಯ. ಭ್ರಷ್ಟರು ಅಧಿಕಾರದಲ್ಲಿ ಮುಂದುವರಿಯಲು ಯೋಗ್ಯರಲ್ಲ. ಮೂವರು ಸದಸ್ಯರೂ ರಾಜೀನಾಮೆ ನೀಡಬೇಕು.
| ಬಿ.ಎಸ್. ಯಡಿಯೂರಪ್ಪ, ವಿಧಾನಸಭೆ ವಿಪಕ್ಷ ನಾಯಕ
| ಬಿ.ಎಂ. ನರೇಶ್ಗೌಡ/ ವಿ. ಮುರಳೀಧರ
ಬೆಂಗಳೂರು: ಅಕ್ರಮ ಕಟ್ಟಡಗಳ ತೆರವಿನ ಹೊಣೆ ಹೊತ್ತಿರುವ ಬಿಬಿಎಂಪಿ ನಗರ ಯೋಜನೆ ಸ್ಥಾಯಿ ಸಮಿತಿ ಸದಸ್ಯರ ಲಂಚಾವತಾರ ಬಯಲಾಗಿದೆ. ನಕ್ಷೆ ಉಲ್ಲಂಘಿಸಿ ಮನೆ ನಿರ್ವಿುಸಿದ್ದ ವ್ಯಕ್ತಿಯೊಬ್ಬರ ಜತೆ ಸೇರಿ ದಿಗ್ವಿಜಯ ನ್ಯೂಸ್ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಅಕ್ರಮ ಸಕ್ರಮಕ್ಕೆ 10 ಲಕ್ಷ ರೂ.ಲಂಚ ಕೇಳಿದ್ದ ಮೂವರು ಕಾಪೋರೇಟರ್ಗಳ ಸಹಿತ ಐವರು ಸಿಕ್ಕಿಬಿದ್ದಿದ್ದಾರೆ.
ಜನಸೇವೆ ಮಾಡುವುದಾಗಿ ಭರವಸೆಗಳನ್ನು ಕೊಟ್ಟು ಅಧಿಕಾರದ ಚುಕ್ಕಾಣಿ ಹಿಡಿಯುವ ರಾಜಕಾರಣಿಗಳು, ಅಧಿಕಾರಕ್ಕೆ ಬಂದ ನಂತರ ಜನರನ್ನೇ ಸುಲಿಗೆ ಮಾಡುವ ಲಂಚಾವತಾರವನ್ನು ದಿಗ್ವಿಜಯ 247 ನ್ಯೂಸ್ ತಂಡ ಬಯಲಿಗೆಳೆದಿದೆ.
ಬಿಬಿಎಂಪಿ ನಗರ ಯೋಜನೆ ಸ್ಥಾಯಿ ಸಮಿತಿಯ ಅಧ್ಯಕ್ಷ ಹಾಗೂ ಭಾರತಿನಗರ ವಾರ್ಡ್ ಸದಸ್ಯ ಶಕೀಲ್ ಅಹಮದ್, ಯಶವಂತಪುರ ವಾರ್ಡ್ ಸದಸ್ಯ ಜಿ.ಕೆ. ವೆಂಕಟೇಶ್, ಬೈರಸಂದ್ರ ವಾರ್ಡ್ ಸದಸ್ಯ ಎನ್. ನಾಗರಾಜ್, ಅಧ್ಯಕ್ಷರ ಆಪ್ತ ಸಹಾಯಕ ಚಕ್ರವರ್ತಿ ಹಾಗೂ ಬಿಬಿಎಂಪಿ ನೌಕರ ಗುರುರಾಜ್ ತನಿಖಾ ತಂಡದ ಮುಂದೆ 5 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟು ಸಿಕ್ಕಿಬಿದ್ದಿದ್ದಾರೆ.
ನಕ್ಷೆ ಉಲ್ಲಂಘಿಸಿ ನಿರ್ವಿುಸಿದ ಕಟ್ಟಡಗಳನ್ನು ಪತ್ತೆ ಮಾಡಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ಕಟ್ಟಡ ತೆರವುಗೊಳಿಸುವುದು ಬಿಬಿಎಂಪಿ ನಗರ ಯೋಜನೆ ಸ್ಥಾಯಿ ಸಮಿತಿ ಕೆಲಸ. ಸಮಿತಿಯಲ್ಲಿ ಅಧ್ಯಕ್ಷರು ಸೇರಿ 11 ಮಂದಿ ಸದಸ್ಯರಿದ್ದಾರೆ. ಸಮಿತಿ ಅಧ್ಯಕ್ಷ ಶಕೀಲ್ ಆಪ್ತ ಸಹಾಯಕ ಚಕ್ರವರ್ತಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಚಕ್ರವರ್ತಿ ನೇತೃತ್ವದ ತಂಡ ನಿಯಮ ಮೀರಿ ನಿರ್ವಿುಸಿದ ಕಟ್ಟಡಗಳನ್ನು ಪತ್ತೆ ಮಾಡಿ ಮಾಲೀಕರಿಗೆ ಸಮಿತಿ ಅಧ್ಯಕ್ಷರ ವಿಸಿಟಿಂಗ್ ಕಾರ್ಡ್ ನೀಡಿ ಮಾತನಾಡುವಂತೆ ಸೂಚಿಸುತ್ತದೆ. ಈ ಹಂತದಲ್ಲೇ ಕೆಲವು ಬಾರಿ ಹಣ ವಸೂಲಿ ಮಾಡಲಾಗಿದೆ. ಮನೆ ಮಾಲೀಕರನ್ನು ಬೆದರಿಸಲೆಂದೇ 10 ಸಿಮ್ಾರ್ಡ್ ಬಳಸುತ್ತಿದ್ದುದು ಕಂಡುಬಂದಿದೆ.
ತನಿಖೆ ನಡೆದಿದ್ದು ಹೀಗೆ..
ತನಿಖಾ ತಂಡಕ್ಕೆ ಪರಿಚಯವಿದ್ದ ವ್ಯಕ್ತಿಯೊಬ್ಬರು ನಕ್ಷೆ ಉಲ್ಲಂಘಿಸಿ ಮನೆ ನಿರ್ವಿುಸಿದ್ದರು. ಇವರ ಜೊತೆ ದಿಗ್ವಿಜಯ ತನಿಖಾ ತಂಡ ಸೇರಿಕೊಂಡಿತ್ತು. ಇವರಿಗೆ ಹಣ ನೀಡುವಂತೆ ಚಕ್ರವರ್ತಿ ತಂಡ ಸೂಚಿಸಿತ್ತು. ಹಣ ನೀಡದ ಹಿನ್ನೆಲೆಯಲ್ಲಿ ಚಕ್ರವರ್ತಿ ಮನೆ ಮಾಲೀಕ ಎಂದು ಹೇಳಿಕೊಂಡಿದ್ದ ತನಿಖಾ ತಂಡದ ಸದಸ್ಯನನ್ನು ಅಧ್ಯಕ್ಷರ ಬಳಿಗೆ ಕರೆದೊಯ್ದರು. ಈ ವೇಳೆ ಅಧ್ಯಕ್ಷ ಶಕೀಲ್ ಅಹಮದ್ ಇತರರ ಜತೆ ಮಾತುಕತೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಸಮಿತಿಯ ಸದಸ್ಯ ರೊಂದಿಗೆ ಮಾತನಾಡು ವಂತೆ ಸೂಚಿಸಿದರು. ಅಧ್ಯಕ್ಷರ ಕೊಠಡಿಗೆ ಬೈರಸಂದ್ರ ವಾರ್ಡ್ ಸದಸ್ಯ ಎನ್. ನಾಗರಾಜ್ ಹಾಗೂ ಯಶವಂತಪುರ ವಾರ್ಡ್ ಸದಸ್ಯ ಜಿ.ಕೆ. ವೆಂಕಟೇಶ್ ಆಗಮಿಸಿದರು. ಈ ವೇಳೆ ಚಕ್ರವರ್ತಿ, ‘ಅಧ್ಯಕ್ಷರು 10 ಲಕ್ಷ ರೂ. ವಸೂಲಿ ಮಾಡಲು ಸೂಚಿಸಿದ್ದಾರೆ’ ಎಂದು ಸದಸ್ಯರಿಗೆ ಹೇಳಿದರು.
17 ನಿಮಿಷ ಮಾತುಕತೆ ನಡೆದು ಕೊನೆಗೆ 3 ದಿನದಲ್ಲಿ 5 ಲಕ್ಷ ರೂ. ನೀಡುವಂತೆ ಇಬ್ಬರು ಸದಸ್ಯರು ಹೇಳಿದರು. ಮನೆ ಮಾಲೀಕ ಎಂದು ಹೇಳಿಕೊಂಡಿದ್ದ ತನಿಖಾ ತಂಡದ ವರದಿಗಾರನ ಮೊಬೈಲ್ ಸಂಖ್ಯೆಯನ್ನು ನೌಕರ ಗುರುರಾಜ್ ಪಡೆದರು. ತಂಡ ಕೋಟಿಗಟ್ಟಲೆ ಹಣ ವಸೂಲಿ ಮಾಡಿರುವ ಶಂಕೆಯಿದ್ದು, ಸಂಪೂರ್ಣ ತನಿಖೆಯಾಗಬೇಕಿದೆ.
ಸಿಎಂ ಮಾತನ್ನೂ ಕೇಳಲ್ಲ…
ನಗರ ಸ್ಥಾಯಿ ಸಮಿತಿ ಸದಸ್ಯರು ಲಂಚಕ್ಕೆ ಬೇಡಿಕೆ ಸಲ್ಲಿಸುವ ವೇಳೆ, ‘ಸಿಎಂ ಕುಮಾರಸ್ವಾಮಿ ಹೇಳಿದರೂ ನಾವು ಕೇಳುವುದಿಲ್ಲ. ನಮಗೆ ಹಣ ನೀಡಲೇಬೇಕು. ಚುನಾವಣೆಯಲ್ಲಿ ಕೋಟಿಗಟ್ಟಲೆ ಹಣ ಖರ್ಚು ಮಾಡಿ ಗೆದ್ದಿದ್ದೇವೆ. 3 ದಿನದಲ್ಲಿ ಹಣ ಪಾವತಿ ಮಾಡದಿದ್ದರೆ ಮನೆಯ ವಿದ್ಯುತ್ ಹಾಗೂ ಕಾವೇರಿ ನೀರು ಸಂಪರ್ಕ ಕಡಿತ ಮಾಡಲು ಬೆಸ್ಕಾಂ ಹಾಗೂ ಜಲಮಂಡಳಿಗೆ ಸೂಚನೆ ನಿಡುತ್ತೇವೆ’ ಎಂದು ಬೆದರಿಸಿದರು. ಇಬ್ಬರು ಸದಸ್ಯರು ಲಂಚಕ್ಕೆ ಬೇಡಿಕೆ ಇಟ್ಟ ದೃಶ್ಯ ಸಂಪೂರ್ಣ ಚಿತ್ರೀಕರಣವಾಗಿದೆ.
ಲಂಚಾವತಾರದಲ್ಲಿ ಸಿಕ್ಕಿಬಿದ್ದ ಕಾಪೋರೇಟರ್ಗಳ ಕೃತ್ಯ ಎಲ್ಲ ಸದಸ್ಯರು ತಲೆತಗ್ಗಿಸುವಂತೆ ಮಾಡಿದೆ. ಹೈಕಮಾಂಡ್ ಇವರ ವಿರುದ್ಧ ವರದಿ ಕೇಳಿದೆ. ಆರೋಪ ಸಾಬೀತಾದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು.
| ಸಂಪತ್ರಾಜ್, ಮೇಯರ್
ದಿಗ್ವಿಜಯ ತನಿಖಾ ತಂಡ ಬಿಬಿಎಂಪಿಯ ನಗರ ಯೋಜನೆ ಸ್ಥಾಯಿ ಸಮಿತಿಯ ಭ್ರಷ್ಟಾಚಾರ ಬಯಲಿಗೆ ಎಳೆದಿರುವುದು ಶ್ಲಾಘನೀಯ. ಭ್ರಷ್ಟರು ಅಧಿಕಾರದಲ್ಲಿ ಮುಂದುವರಿಯಲು ಯೋಗ್ಯರಲ್ಲ. ಮೂವರು ಸದಸ್ಯರೂ ರಾಜೀನಾಮೆ ನೀಡಬೇಕು.
| ಬಿ.ಎಸ್. ಯಡಿಯೂರಪ್ಪ, ವಿಧಾನಸಭೆ ವಿಪಕ್ಷ ನಾಯಕ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ