ನವದೆಹಲಿ: ಚೀನಾದ ಮಹತ್ವಾಕಾಂಕ್ಷೆಯ ಮೂಲಸೌಕರ್ಯ ಯೋಜನೆ ಒನ್ ಬೆಲ್ಟ್ ಒನ್ ರೋಡ್ (ಒಬಿಒಆರ್) ವಿರುದ್ಧ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ಷೇಪಣೆಗಳು ಕೇಳತೊಡಗಿವೆ. ಯೋಜನೆ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರಗಳಿಗೆ ಹೆಚ್ಚಿನ ಬಡ್ಡಿದರದಲ್ಲಿ ಅಪಾರ ಮೊತ್ತದ ಸಾಲ ನೀಡುವ ಮೂಲಕ, ಆ ದೇಶವನ್ನು ಸಾಲದ ಸುಳಿಗೆ ಸಿಲುಕಿಸಲು ಚೀನಾ ಮುಂದಾಗಿದೆ ಎಂಬ ಟೀಕೆಗಳು ವ್ಯಾಪಕವಾಗಿವೆ.
ಯೋಜನೆ ಆರಂಭವಾದಾಗಿನಿಂದಲೂ ಭಾರತ ಇದನ್ನು ವಿರೋಧಿಸುತ್ತ ಬಂದಿದೆ. ಈಗ ಜಾಗತಿಕ ಮಟ್ಟದಲ್ಲಿ ಒಬಿಒಆರ್ ವಿರುದ್ಧ ಆಕ್ಷೇಪಣೆ ಕೇಳಿಬರುತ್ತಿರುವುದು ಭಾರತಕ್ಕೆ ಪರೋಕ್ಷವಾಗಿ ಅನುಕೂಲವಾಗಲಿದೆ.
2013ರಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಈ ಯೋಜನೆಯನ್ನು ಘೋಷಿಸಿದ್ದರು. ನ್ಯೂ ಸಿಲ್ಕ್ ರೋಡ್ ಎಂದೂ ಈ ಯೋಜನೆಯನ್ನು ಕರೆಯಲಾಗುತ್ತಿದೆ. ವಿಶ್ವದಾದ್ಯಂತ ಸಂಪರ್ಕ ಕಲ್ಪಿಸಲು ಹೊಸ ರಸ್ತೆ, ರೈಲು, ಬಂದರುಗಳನ್ನು ನಿರ್ವಿುಸುವುದು ಈ ಯೋಜನೆಯ ಉದ್ದೇಶವಾಗಿತ್ತು. ಈ ಯೋಜನೆಯಲ್ಲಿ ಭಾಗಿಯಾಗುವ ದೇಶಗಳಿಗೆ ಹಲವು ಲಕ್ಷ ಕೋಟಿ ರೂಪಾಯಿಯನ್ನು ಸಾಲ ರೂಪದಲ್ಲಿ ನೀಡುವುದಾಗಿ ಚೀನಾ ಹೇಳಿತ್ತು.
ಯೋಜನೆ ಘೋಷಣೆಯಾಗಿ ಐದು ವರ್ಷ ಪೂರ್ಣಗೊಳ್ಳುತ್ತಿರುವ ಬೆನ್ನಲ್ಲೇ ಒಬಿಒಆರ್ಗೆ ಆಕ್ಷೇಪಣೆಗಳು ಹೆಚ್ಚಾಗುತ್ತಿವೆ. ಅತ್ಯಧಿಕ ಬಡ್ಡಿದರದಲ್ಲಿ ಚೀನಾ ನೀಡುವ ದೀರ್ಘಾವಧಿ ಸಾಲವನ್ನು ತೀರಿಸಲು ಸಣ್ಣ ರಾಷ್ಟ್ರಗಳಿಗೆ ಸಾಧ್ಯವೇ ಆಗುವುದಿಲ್ಲ. ಹೀಗಾಗಿ ಇಂಥ ರಾಷ್ಟ್ರಗಳು ಭವಿಷ್ಯದಲ್ಲಿ ಚೀನಾದ ಗುಲಾಮನಾಗುವ ಸ್ಥಿತಿ ನಿರ್ವಣವಾಗಲಿದೆ ಎಂದು ಆರ್ಥಿಕ ತಜ್ಞರು, ಹಲವು ರಾಷ್ಟ್ರಗಳ ನಾಯಕರು ಬಹಿರಂಗವಾಗಿ ಹೇಳಲಾರಂಭಿಸಿದ್ದಾರೆ.ಇಂಥ ಆರೋಪಗಳನ್ನು ಚೀನಾ ಅಧ್ಯಕ್ಷ ಜಿನ್ಪಿಂಗ್ ನಿರಾಕರಿಸುತ್ತ ಬಂದಿದ್ದಾರೆ. ಯೋಜನೆಗೆ ಭಾರಿ ಮೊತ್ತ ವೆಚ್ಚ ಮಾಡಬೇಕಾಗುತ್ತದೆ. ಆದರೆ ಇದರಿಂದ ಅಷ್ಟೇ ಪ್ರಮಾಣದ ಆದಾಯವೂ ಬರಲಿದೆ ಎಂದು ಇತ್ತೀಚೆಗೆ ಸ್ಪಷ್ಟೀಕರಣ ನೀಡುವ ಮೂಲಕ ವಿವಾದವನ್ನು ತಿಳಿಗೊಳಿಸಲು ಯತ್ನಿಸಿದ್ದಾರೆ.
ಮಲೇಷ್ಯಾ ಬಚಾವ್
ಚೀನಾ ಜತೆ ಆಪ್ತವಾಗಿದ್ದ ಮಲೇಷ್ಯಾ ಇದೇ ಮೊದಲ ಬಾರಿಗೆ ಶಾಕ್ ನೀಡಿದೆ. ಇತ್ತೀಚೆಗೆ ಚೀನಾಕ್ಕೆ ಭೇಟಿ ನೀಡಿದ್ದ ಮಲೇಷ್ಯಾ ಪ್ರಧಾನಿ ಮಹತೀರ್ ಮಹಮ್ಮದ್, ಚೀನಾ ಬೆಂಬಲಿತ ಮೂರು ಯೋಜನೆಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದಾರೆ. -ಠಿ; 1.4 ಲಕ್ಷ ಕೋಟಿ ಮೊತ್ತದ ರೈಲ್ವೆ ಯೋಜನೆ ಕೂಡ ಇದರಲ್ಲಿ ಸೇರಿದೆ. ಈ ಮೂಲಕ ಚೀನಾದ ಸಾಲದ ಸುಳಿಯಿಂದ ಅವರು ಜಾರಿಕೊಂಡಿದ್ದಾರೆ. ಜಾಗತಿಕ ಸಂಪರ್ಕ ಸಾಧಿಸಲು ಹಾಗೂ ದಕ್ಷಿಣ ಚೀನಾ ಸಮುದ್ರದಲ್ಲಿ ಪ್ರಾಬಲ್ಯ ಸಾಧಿಸಲು ಮಹತ್ವದ ರಾಷ್ಟ್ರವಾಗಿರುವ ಮಲೇಷ್ಯಾ ಯೋಜನೆಯಿಂದ ಹಿಂದೆ ಸರಿದಿರುವುದು ಚೀನಾಕ್ಕೆ ದೊಡ್ಡ ಹಿನ್ನಡೆಯಾಗಿದೆ.
ಪಾಕ್ನಲ್ಲೂ ತಳಮಳ
ಪಾಕಿಸ್ತಾನ -ಚೀನಾ ಆರ್ಥಿಕ ಕಾರಿಡಾರ್ ಯೋಜನೆಯಿಂದಾಗಿ ಈಗಾಗಲೇ ಪಾಕ್ ಸಾಲದ ಸುಳಿಯಲ್ಲಿ ಸಿಲುಕಿದೆ. ಈ ಸಾಲವನ್ನು ಮರುಪಾವತಿ ಮಾಡುವುದು ಸವಾಲಿನ ಸಂಗತಿಯಾಗಿದೆ. ಇದಲ್ಲದೇ ಪಾಕಿಸ್ತಾನದ ಇನ್ನೂ ಹಲವು ಯೋಜನೆಗಳಿಗೆ ಚೀನಾ ಆರ್ಥಿಕ ನೆರವು ನೀಡಿದೆ. ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ್ಗೆ ಇದು ತಲೆನೋವು ಉಂಟುಮಾಡಿದೆ. ಕಾರಿಡಾರ್ ಯೋಜನೆ ಇನ್ನಷ್ಟು ಪಾರದರ್ಶಕವಾಗಿ ನಡೆಯಬೇಕಿದೆ ಎಂದು ಅವರು ಇತ್ತೀಚೆಗೆ ಆತಂಕ ಹೊರಹಾಕಿದ್ದಾರೆ. ಈ ಯೋಜನೆಯಲ್ಲಿ ಹೆಚ್ಚಿನ ವೆಚ್ಚ ಭದ್ರತೆ ಹಾಗೂ ಭ್ರಷ್ಟಾಚಾರಕ್ಕೆ ವ್ಯಯವಾಗಿದೆ ಎಂಬ ಆರೋಪವೂ ಕೇಳಿಬರುತ್ತಿದೆ.
ಮಾಲ್ಡೀವ್ಸ್ ವಿರೋಧ
ದ್ವೀಪ ರಾಷ್ಟ್ರ ಮಾಲ್ಡೀವ್ಸ್ ತನ್ನ ಅಭಿವೃದ್ಧಿ ಯೋಜನೆಗಳಿಗೆ ಒಟ್ಟು ಮೊತ್ತದ ಶೇ. 80ನ್ನು ಚೀನಾದಿಂದ ಸಾಲದ ರೂಪದಲ್ಲಿ ಪಡೆದಿದೆ. ಈಗ ಮಾಲ್ಡೀವ್ಸ್ ನಾಯಕರು ಚೀನಾದ ನೀತಿಯನ್ನು ವಿರೋಧಿಸುತ್ತಿದ್ದಾರೆ. ದಕ್ಷಿಣ ಚೀನಾ ಸಮುದ್ರದ ದ್ವೀಪ ಸಮೂಹವನ್ನು ಒತ್ತುವರಿ ಮಾಡಲು ಚೀನಾ ಹವಣಿಸುತ್ತಿದೆ. ಇದು ವಸಾಹತುಶಾಹಿ ನೀತಿಯನ್ನು ತೋರಿಸುತ್ತದೆ ಎಂದು ಮಾಲ್ಡೀವ್ಸ್ನ ಪದಚ್ಯುತ ನಾಯಕ ಮೊಹಮ್ಮದ್ ಆರೋಪಿಸಿದ್ದಾರೆ.
ಅಡಕತ್ತರಿಯಲ್ಲಿ ಶ್ರೀಲಂಕಾ
ವಿವಿಧ ಯೋಜನೆಗಳಿಗೆ ಅಪಾರ ಸಾಲ ಮಾಡಿಕೊಂಡಿರುವ ಶ್ರೀಲಂಕಾ, ಅದನ್ನು ಮರುಪಾವತಿ ಮಾಡಲಾಗದೇ ಈಗ ಅಡಕತ್ತರಿಯಲ್ಲಿ ಸಿಲುಕಿದೆ. ಸುಮಾರು -ಠಿ; 10,000 ಕೋಟಿ ಸಾಲ ತೀರಿಸಲು ಸಾಧ್ಯವಾಗದೇ ಕಳೆದ ವರ್ಷ ಒಂದು ಬಂದರನ್ನು ಚೀನಾಕ್ಕೆ 99 ವರ್ಷ ಭೋಗ್ಯಕ್ಕೆ ನೀಡಿದೆ. ಭದ್ರತೆ ದೃಷ್ಟಿಯಿಂದ ಈ ಬಂದರು ಮಹತ್ವದ್ದಾಗಿದೆ. ಈಗ ಇದು ಚೀನಾದ ಕೈಗೆ ಸಿಕ್ಕಿರುವುದು ಭಾರತಕ್ಕೆ ಭದ್ರತಾ ಆತಂಕ ತಂದೊಡ್ಡಿದೆ.
ಚೀನಾಕ್ಕೆ ಮಾತ್ರ ಲಾಭ
ಅಪಾರ ಸಾಲ ನೀಡಿಕೆಯಿಂದ ಚೀನಾಕ್ಕೆ ದೊಡ್ಡ ಪ್ರಮಾಣದಲ್ಲಿ ಅನುಕೂಲವಾಗುತ್ತಿದೆ. ಸಾಲದ ಮೇಲೆ ದೊಡ್ಡ ಪ್ರಮಾಣದ ಬಡ್ಡಿ ವಿಧಿಸುವ ಮೂಲಕ ಅಪಾರ ಲಾಭಗಳಿಸಬಹುದು, ಸಾಲ ಪಡೆದ ರಾಷ್ಟ್ರಗಳನ್ನು ತನಗೆ ಬೇಕಾದಂತೆ ಬಳಸಿಕೊಳ್ಳಬಹುದು. ವಿವಿಧ ದೇಶಗಳಲ್ಲಿನ ಅಭಿವೃದ್ಧಿ ಕಾಮಗಾರಿಗೆ ಚೀನಾದಲ್ಲಿನ ಅಪಾರ ಕಚ್ಚಾ ವಸ್ತುಗಳು, ಮಾನವ ಸಂಪನ್ಮೂಲ, ತಂತ್ರಜ್ಞಾನ ಬಳಕೆಯಾಗುತ್ತದೆ. ಇದರಿಂದಲೂ ಚೀನಾ ದೊಡ್ಡ ಪ್ರಮಾಣದಲ್ಲಿ ಹಣ ಗಳಿಸುತ್ತದೆ.
ಭಾರತದ ವಿರೋಧ ಏಕೆ?
ದಕ್ಷಿಣ ಚೀನಾ ಸಮುದ್ರದ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಲು ಚೀನಾ ಯತ್ನಿಸುತ್ತಿದೆ. ಇದಕ್ಕೆ ಒಬಿಒಆರ್ ಯೋಜನೆಯನ್ನು ದಾಳವಾಗಿ ಬಳಕೆ ಮಾಡಿಕೊಳ್ಳುತ್ತಿದೆ. ಹೀಗಾಗಿ ಭಾರತ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ. ಪಾಕ್-ಚೀನಾ ಕಾರಿಡಾರ್ ಯೋಜನೆ ಈಗಾಗಲೇ ಜಾರಿಯಾಗಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಇದು ಹಾದುಹೋಗುತ್ತದೆ. ಹೀಗಾಗಿ ಭಾರತಕ್ಕೆ ಭದ್ರತಾ ಆತಂಕ ಏದುರಾಗಿದೆ. ಹಲವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತ ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದೆ.
ಸಾಲದ ಸುಳಿಯಲ್ಲಿ ದೇಶಗಳು
ಪಾಕಿಸ್ತಾನ
ಜಿಬೌಟಿ
ಮಾಲ್ಡೀವ್ಸ್
ಮಂಗೋಲಿಯಾ
ಲಾವೋಸ್
ಮಾಂಟೆನೆಗ್ರೋ
ತಜಕಿಸ್ತಾನ
ಕಿರ್ಗಿಸ್ತಾನ
ಶ್ರೀಲಂಕಾ
ತಾಲಿಬಾನ್ಪರ ಪಾಕಿಸ್ತಾನಕ್ಕೆ ಅನುದಾನ ಕಡಿತದ ಶಾಕ್
ವಾಷಿಂಗ್ಟನ್: ತಾಲಿಬಾನ್ ಉಗ್ರರನ್ನು ಸದೆ ಬಡಿಯುವಂತೆ ಪದೇಪದೆ ಎಚ್ಚರಿಸಿದರೂ ಕ್ರಮಕೈಗೊಳ್ಳದ ಪಾಕಿಸ್ತಾನಕ್ಕೆ -ಠಿ; 2130 ಕೋಟಿ ನೆರವು ರದ್ದು ಮಾಡಲು ಅಮೆರಿಕ ನಿರ್ಧರಿಸಿದೆ.
ಉಗ್ರರ ವಿರುದ್ಧ ಕ್ರಮಕೈಗೊಳ್ಳದೆ ಕಳ್ಳಾಟವಾಡುತ್ತಿರುವ ಪಾಕ್ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿ ಸಂಯೋಜಿತ ಬೆಂಬಲ ನಿಧಿ (ಸಿಎಸ್ಎಫ್)ಯ ನೆರವನ್ನು ತಡೆಹಿಡಿಯುವಂತೆ ಈ ವರ್ಷದ ಆರಂಭದಲ್ಲಿ ಸೂಚಿಸಿದ್ದರು. ಈಗ ಇದನ್ನು ರದ್ದು ಮಾಡಲು ಅಮೆರಿಕ ಸೇನೆ ನಿರ್ಧರಿಸಿದೆ. ಈ ಹಣವನ್ನು ಇನ್ನಿತರ ತುರ್ತು ಆದ್ಯತೆಯ ವಿಷಯಗಳಿಗೆ ಖರ್ಚು ಮಾಡಲಾಗುವುದು ಎಂದು ಅಮೆರಿಕದ
ರಕ್ಷಣಾ ಕಾರ್ಯಾಲಯ ಪೆಂಟಗಾನ್ ತಿಳಿಸಿದೆ.ಈ ಬೇಸಿಗೆಯಲ್ಲಿ ಪಾಕಿಸ್ತಾನಕ್ಕೆ ಸಿಎಸ್ಎಫ್ ನೆರವು ಬಿಡುಗಡೆಯಾಗಬೇಕಿತ್ತು. ಆದರೆ, ಆ ರಾಷ್ಟ್ರ ಉಗ್ರರ ವಿಷಯದಲ್ಲಿ ಮೃದುವಾಗಿರುವ ಕಾರಣ ನೆರವು ರದ್ದು ಮಾಡದೆ ಅನ್ಯ ಮಾರ್ಗವಿಲ್ಲ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ಹೇಳಿದ್ದಾರೆ. ಒಂದೂವರೆ ದಶಕಕ್ಕೂ ಹೆಚ್ಚು ಕಾಲದಿಂದ ಅಫ್ಘಾನಿಸ್ತಾನದಲ್ಲಿ ಉಗ್ರರ ವಿರುದ್ಧ ಅಮೆರಿಕ ಹೋರಾಟ ಮಾಡುತ್ತಿದೆ. ಆದರೆ, ಪಾಕ್ನಲ್ಲಿ ಆಶ್ರಯ ಪಡೆದಿರುವ ಭಯೋತ್ಪಾದಕರು ಮತ್ತೆ ಮತ್ತೆ ಆಫ್ಘನ್ನಲ್ಲಿ ವಿಧ್ವಂಸಕ ಕೃತ್ಯ ನಡೆಸುತ್ತಿದ್ದಾರೆ. ಈ ಉಗ್ರರನ್ನು ಮಟ್ಟಹಾಕಲು ಪಾಕ್ ನೆರವು ಪಡೆಯುತ್ತಿದೆ. ಆದರೆ ಕ್ರಮ ಕೈಗೊಳ್ಳುತ್ತಿಲ್ಲ. ಇದೇ ಧೋರಣೆ ಮುಂದುವರಿದರೆ ಎಲ್ಲ ರೀತಿಯ ಸಹಾಯವನ್ನು ನಿಲ್ಲಿಸಬೇಕಾಗುತ್ತದೆ ಎಂದು ಅಧ್ಯಕ್ಷ ಟ್ರಂಪ್ ಆಡಳಿತ ಮೊದಲಿನಿಂದಲೂ ಹೇಳುತ್ತಿದೆ. -ಏಜೆನ್ಸೀಸ್
ಯೋಜನೆ ಆರಂಭವಾದಾಗಿನಿಂದಲೂ ಭಾರತ ಇದನ್ನು ವಿರೋಧಿಸುತ್ತ ಬಂದಿದೆ. ಈಗ ಜಾಗತಿಕ ಮಟ್ಟದಲ್ಲಿ ಒಬಿಒಆರ್ ವಿರುದ್ಧ ಆಕ್ಷೇಪಣೆ ಕೇಳಿಬರುತ್ತಿರುವುದು ಭಾರತಕ್ಕೆ ಪರೋಕ್ಷವಾಗಿ ಅನುಕೂಲವಾಗಲಿದೆ.
2013ರಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಈ ಯೋಜನೆಯನ್ನು ಘೋಷಿಸಿದ್ದರು. ನ್ಯೂ ಸಿಲ್ಕ್ ರೋಡ್ ಎಂದೂ ಈ ಯೋಜನೆಯನ್ನು ಕರೆಯಲಾಗುತ್ತಿದೆ. ವಿಶ್ವದಾದ್ಯಂತ ಸಂಪರ್ಕ ಕಲ್ಪಿಸಲು ಹೊಸ ರಸ್ತೆ, ರೈಲು, ಬಂದರುಗಳನ್ನು ನಿರ್ವಿುಸುವುದು ಈ ಯೋಜನೆಯ ಉದ್ದೇಶವಾಗಿತ್ತು. ಈ ಯೋಜನೆಯಲ್ಲಿ ಭಾಗಿಯಾಗುವ ದೇಶಗಳಿಗೆ ಹಲವು ಲಕ್ಷ ಕೋಟಿ ರೂಪಾಯಿಯನ್ನು ಸಾಲ ರೂಪದಲ್ಲಿ ನೀಡುವುದಾಗಿ ಚೀನಾ ಹೇಳಿತ್ತು.
ಯೋಜನೆ ಘೋಷಣೆಯಾಗಿ ಐದು ವರ್ಷ ಪೂರ್ಣಗೊಳ್ಳುತ್ತಿರುವ ಬೆನ್ನಲ್ಲೇ ಒಬಿಒಆರ್ಗೆ ಆಕ್ಷೇಪಣೆಗಳು ಹೆಚ್ಚಾಗುತ್ತಿವೆ. ಅತ್ಯಧಿಕ ಬಡ್ಡಿದರದಲ್ಲಿ ಚೀನಾ ನೀಡುವ ದೀರ್ಘಾವಧಿ ಸಾಲವನ್ನು ತೀರಿಸಲು ಸಣ್ಣ ರಾಷ್ಟ್ರಗಳಿಗೆ ಸಾಧ್ಯವೇ ಆಗುವುದಿಲ್ಲ. ಹೀಗಾಗಿ ಇಂಥ ರಾಷ್ಟ್ರಗಳು ಭವಿಷ್ಯದಲ್ಲಿ ಚೀನಾದ ಗುಲಾಮನಾಗುವ ಸ್ಥಿತಿ ನಿರ್ವಣವಾಗಲಿದೆ ಎಂದು ಆರ್ಥಿಕ ತಜ್ಞರು, ಹಲವು ರಾಷ್ಟ್ರಗಳ ನಾಯಕರು ಬಹಿರಂಗವಾಗಿ ಹೇಳಲಾರಂಭಿಸಿದ್ದಾರೆ.ಇಂಥ ಆರೋಪಗಳನ್ನು ಚೀನಾ ಅಧ್ಯಕ್ಷ ಜಿನ್ಪಿಂಗ್ ನಿರಾಕರಿಸುತ್ತ ಬಂದಿದ್ದಾರೆ. ಯೋಜನೆಗೆ ಭಾರಿ ಮೊತ್ತ ವೆಚ್ಚ ಮಾಡಬೇಕಾಗುತ್ತದೆ. ಆದರೆ ಇದರಿಂದ ಅಷ್ಟೇ ಪ್ರಮಾಣದ ಆದಾಯವೂ ಬರಲಿದೆ ಎಂದು ಇತ್ತೀಚೆಗೆ ಸ್ಪಷ್ಟೀಕರಣ ನೀಡುವ ಮೂಲಕ ವಿವಾದವನ್ನು ತಿಳಿಗೊಳಿಸಲು ಯತ್ನಿಸಿದ್ದಾರೆ.
ಮಲೇಷ್ಯಾ ಬಚಾವ್
ಚೀನಾ ಜತೆ ಆಪ್ತವಾಗಿದ್ದ ಮಲೇಷ್ಯಾ ಇದೇ ಮೊದಲ ಬಾರಿಗೆ ಶಾಕ್ ನೀಡಿದೆ. ಇತ್ತೀಚೆಗೆ ಚೀನಾಕ್ಕೆ ಭೇಟಿ ನೀಡಿದ್ದ ಮಲೇಷ್ಯಾ ಪ್ರಧಾನಿ ಮಹತೀರ್ ಮಹಮ್ಮದ್, ಚೀನಾ ಬೆಂಬಲಿತ ಮೂರು ಯೋಜನೆಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದಾರೆ. -ಠಿ; 1.4 ಲಕ್ಷ ಕೋಟಿ ಮೊತ್ತದ ರೈಲ್ವೆ ಯೋಜನೆ ಕೂಡ ಇದರಲ್ಲಿ ಸೇರಿದೆ. ಈ ಮೂಲಕ ಚೀನಾದ ಸಾಲದ ಸುಳಿಯಿಂದ ಅವರು ಜಾರಿಕೊಂಡಿದ್ದಾರೆ. ಜಾಗತಿಕ ಸಂಪರ್ಕ ಸಾಧಿಸಲು ಹಾಗೂ ದಕ್ಷಿಣ ಚೀನಾ ಸಮುದ್ರದಲ್ಲಿ ಪ್ರಾಬಲ್ಯ ಸಾಧಿಸಲು ಮಹತ್ವದ ರಾಷ್ಟ್ರವಾಗಿರುವ ಮಲೇಷ್ಯಾ ಯೋಜನೆಯಿಂದ ಹಿಂದೆ ಸರಿದಿರುವುದು ಚೀನಾಕ್ಕೆ ದೊಡ್ಡ ಹಿನ್ನಡೆಯಾಗಿದೆ.
ಪಾಕ್ನಲ್ಲೂ ತಳಮಳ
ಪಾಕಿಸ್ತಾನ -ಚೀನಾ ಆರ್ಥಿಕ ಕಾರಿಡಾರ್ ಯೋಜನೆಯಿಂದಾಗಿ ಈಗಾಗಲೇ ಪಾಕ್ ಸಾಲದ ಸುಳಿಯಲ್ಲಿ ಸಿಲುಕಿದೆ. ಈ ಸಾಲವನ್ನು ಮರುಪಾವತಿ ಮಾಡುವುದು ಸವಾಲಿನ ಸಂಗತಿಯಾಗಿದೆ. ಇದಲ್ಲದೇ ಪಾಕಿಸ್ತಾನದ ಇನ್ನೂ ಹಲವು ಯೋಜನೆಗಳಿಗೆ ಚೀನಾ ಆರ್ಥಿಕ ನೆರವು ನೀಡಿದೆ. ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ್ಗೆ ಇದು ತಲೆನೋವು ಉಂಟುಮಾಡಿದೆ. ಕಾರಿಡಾರ್ ಯೋಜನೆ ಇನ್ನಷ್ಟು ಪಾರದರ್ಶಕವಾಗಿ ನಡೆಯಬೇಕಿದೆ ಎಂದು ಅವರು ಇತ್ತೀಚೆಗೆ ಆತಂಕ ಹೊರಹಾಕಿದ್ದಾರೆ. ಈ ಯೋಜನೆಯಲ್ಲಿ ಹೆಚ್ಚಿನ ವೆಚ್ಚ ಭದ್ರತೆ ಹಾಗೂ ಭ್ರಷ್ಟಾಚಾರಕ್ಕೆ ವ್ಯಯವಾಗಿದೆ ಎಂಬ ಆರೋಪವೂ ಕೇಳಿಬರುತ್ತಿದೆ.
ಮಾಲ್ಡೀವ್ಸ್ ವಿರೋಧ
ದ್ವೀಪ ರಾಷ್ಟ್ರ ಮಾಲ್ಡೀವ್ಸ್ ತನ್ನ ಅಭಿವೃದ್ಧಿ ಯೋಜನೆಗಳಿಗೆ ಒಟ್ಟು ಮೊತ್ತದ ಶೇ. 80ನ್ನು ಚೀನಾದಿಂದ ಸಾಲದ ರೂಪದಲ್ಲಿ ಪಡೆದಿದೆ. ಈಗ ಮಾಲ್ಡೀವ್ಸ್ ನಾಯಕರು ಚೀನಾದ ನೀತಿಯನ್ನು ವಿರೋಧಿಸುತ್ತಿದ್ದಾರೆ. ದಕ್ಷಿಣ ಚೀನಾ ಸಮುದ್ರದ ದ್ವೀಪ ಸಮೂಹವನ್ನು ಒತ್ತುವರಿ ಮಾಡಲು ಚೀನಾ ಹವಣಿಸುತ್ತಿದೆ. ಇದು ವಸಾಹತುಶಾಹಿ ನೀತಿಯನ್ನು ತೋರಿಸುತ್ತದೆ ಎಂದು ಮಾಲ್ಡೀವ್ಸ್ನ ಪದಚ್ಯುತ ನಾಯಕ ಮೊಹಮ್ಮದ್ ಆರೋಪಿಸಿದ್ದಾರೆ.
ಅಡಕತ್ತರಿಯಲ್ಲಿ ಶ್ರೀಲಂಕಾ
ವಿವಿಧ ಯೋಜನೆಗಳಿಗೆ ಅಪಾರ ಸಾಲ ಮಾಡಿಕೊಂಡಿರುವ ಶ್ರೀಲಂಕಾ, ಅದನ್ನು ಮರುಪಾವತಿ ಮಾಡಲಾಗದೇ ಈಗ ಅಡಕತ್ತರಿಯಲ್ಲಿ ಸಿಲುಕಿದೆ. ಸುಮಾರು -ಠಿ; 10,000 ಕೋಟಿ ಸಾಲ ತೀರಿಸಲು ಸಾಧ್ಯವಾಗದೇ ಕಳೆದ ವರ್ಷ ಒಂದು ಬಂದರನ್ನು ಚೀನಾಕ್ಕೆ 99 ವರ್ಷ ಭೋಗ್ಯಕ್ಕೆ ನೀಡಿದೆ. ಭದ್ರತೆ ದೃಷ್ಟಿಯಿಂದ ಈ ಬಂದರು ಮಹತ್ವದ್ದಾಗಿದೆ. ಈಗ ಇದು ಚೀನಾದ ಕೈಗೆ ಸಿಕ್ಕಿರುವುದು ಭಾರತಕ್ಕೆ ಭದ್ರತಾ ಆತಂಕ ತಂದೊಡ್ಡಿದೆ.
ಚೀನಾಕ್ಕೆ ಮಾತ್ರ ಲಾಭ
ಅಪಾರ ಸಾಲ ನೀಡಿಕೆಯಿಂದ ಚೀನಾಕ್ಕೆ ದೊಡ್ಡ ಪ್ರಮಾಣದಲ್ಲಿ ಅನುಕೂಲವಾಗುತ್ತಿದೆ. ಸಾಲದ ಮೇಲೆ ದೊಡ್ಡ ಪ್ರಮಾಣದ ಬಡ್ಡಿ ವಿಧಿಸುವ ಮೂಲಕ ಅಪಾರ ಲಾಭಗಳಿಸಬಹುದು, ಸಾಲ ಪಡೆದ ರಾಷ್ಟ್ರಗಳನ್ನು ತನಗೆ ಬೇಕಾದಂತೆ ಬಳಸಿಕೊಳ್ಳಬಹುದು. ವಿವಿಧ ದೇಶಗಳಲ್ಲಿನ ಅಭಿವೃದ್ಧಿ ಕಾಮಗಾರಿಗೆ ಚೀನಾದಲ್ಲಿನ ಅಪಾರ ಕಚ್ಚಾ ವಸ್ತುಗಳು, ಮಾನವ ಸಂಪನ್ಮೂಲ, ತಂತ್ರಜ್ಞಾನ ಬಳಕೆಯಾಗುತ್ತದೆ. ಇದರಿಂದಲೂ ಚೀನಾ ದೊಡ್ಡ ಪ್ರಮಾಣದಲ್ಲಿ ಹಣ ಗಳಿಸುತ್ತದೆ.
ಭಾರತದ ವಿರೋಧ ಏಕೆ?
ದಕ್ಷಿಣ ಚೀನಾ ಸಮುದ್ರದ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಲು ಚೀನಾ ಯತ್ನಿಸುತ್ತಿದೆ. ಇದಕ್ಕೆ ಒಬಿಒಆರ್ ಯೋಜನೆಯನ್ನು ದಾಳವಾಗಿ ಬಳಕೆ ಮಾಡಿಕೊಳ್ಳುತ್ತಿದೆ. ಹೀಗಾಗಿ ಭಾರತ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ. ಪಾಕ್-ಚೀನಾ ಕಾರಿಡಾರ್ ಯೋಜನೆ ಈಗಾಗಲೇ ಜಾರಿಯಾಗಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಇದು ಹಾದುಹೋಗುತ್ತದೆ. ಹೀಗಾಗಿ ಭಾರತಕ್ಕೆ ಭದ್ರತಾ ಆತಂಕ ಏದುರಾಗಿದೆ. ಹಲವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತ ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದೆ.
ಸಾಲದ ಸುಳಿಯಲ್ಲಿ ದೇಶಗಳು
ಪಾಕಿಸ್ತಾನ
ಜಿಬೌಟಿ
ಮಾಲ್ಡೀವ್ಸ್
ಮಂಗೋಲಿಯಾ
ಲಾವೋಸ್
ಮಾಂಟೆನೆಗ್ರೋ
ತಜಕಿಸ್ತಾನ
ಕಿರ್ಗಿಸ್ತಾನ
ಶ್ರೀಲಂಕಾ
ತಾಲಿಬಾನ್ಪರ ಪಾಕಿಸ್ತಾನಕ್ಕೆ ಅನುದಾನ ಕಡಿತದ ಶಾಕ್
ವಾಷಿಂಗ್ಟನ್: ತಾಲಿಬಾನ್ ಉಗ್ರರನ್ನು ಸದೆ ಬಡಿಯುವಂತೆ ಪದೇಪದೆ ಎಚ್ಚರಿಸಿದರೂ ಕ್ರಮಕೈಗೊಳ್ಳದ ಪಾಕಿಸ್ತಾನಕ್ಕೆ -ಠಿ; 2130 ಕೋಟಿ ನೆರವು ರದ್ದು ಮಾಡಲು ಅಮೆರಿಕ ನಿರ್ಧರಿಸಿದೆ.
ಉಗ್ರರ ವಿರುದ್ಧ ಕ್ರಮಕೈಗೊಳ್ಳದೆ ಕಳ್ಳಾಟವಾಡುತ್ತಿರುವ ಪಾಕ್ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿ ಸಂಯೋಜಿತ ಬೆಂಬಲ ನಿಧಿ (ಸಿಎಸ್ಎಫ್)ಯ ನೆರವನ್ನು ತಡೆಹಿಡಿಯುವಂತೆ ಈ ವರ್ಷದ ಆರಂಭದಲ್ಲಿ ಸೂಚಿಸಿದ್ದರು. ಈಗ ಇದನ್ನು ರದ್ದು ಮಾಡಲು ಅಮೆರಿಕ ಸೇನೆ ನಿರ್ಧರಿಸಿದೆ. ಈ ಹಣವನ್ನು ಇನ್ನಿತರ ತುರ್ತು ಆದ್ಯತೆಯ ವಿಷಯಗಳಿಗೆ ಖರ್ಚು ಮಾಡಲಾಗುವುದು ಎಂದು ಅಮೆರಿಕದ
ರಕ್ಷಣಾ ಕಾರ್ಯಾಲಯ ಪೆಂಟಗಾನ್ ತಿಳಿಸಿದೆ.ಈ ಬೇಸಿಗೆಯಲ್ಲಿ ಪಾಕಿಸ್ತಾನಕ್ಕೆ ಸಿಎಸ್ಎಫ್ ನೆರವು ಬಿಡುಗಡೆಯಾಗಬೇಕಿತ್ತು. ಆದರೆ, ಆ ರಾಷ್ಟ್ರ ಉಗ್ರರ ವಿಷಯದಲ್ಲಿ ಮೃದುವಾಗಿರುವ ಕಾರಣ ನೆರವು ರದ್ದು ಮಾಡದೆ ಅನ್ಯ ಮಾರ್ಗವಿಲ್ಲ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ಹೇಳಿದ್ದಾರೆ. ಒಂದೂವರೆ ದಶಕಕ್ಕೂ ಹೆಚ್ಚು ಕಾಲದಿಂದ ಅಫ್ಘಾನಿಸ್ತಾನದಲ್ಲಿ ಉಗ್ರರ ವಿರುದ್ಧ ಅಮೆರಿಕ ಹೋರಾಟ ಮಾಡುತ್ತಿದೆ. ಆದರೆ, ಪಾಕ್ನಲ್ಲಿ ಆಶ್ರಯ ಪಡೆದಿರುವ ಭಯೋತ್ಪಾದಕರು ಮತ್ತೆ ಮತ್ತೆ ಆಫ್ಘನ್ನಲ್ಲಿ ವಿಧ್ವಂಸಕ ಕೃತ್ಯ ನಡೆಸುತ್ತಿದ್ದಾರೆ. ಈ ಉಗ್ರರನ್ನು ಮಟ್ಟಹಾಕಲು ಪಾಕ್ ನೆರವು ಪಡೆಯುತ್ತಿದೆ. ಆದರೆ ಕ್ರಮ ಕೈಗೊಳ್ಳುತ್ತಿಲ್ಲ. ಇದೇ ಧೋರಣೆ ಮುಂದುವರಿದರೆ ಎಲ್ಲ ರೀತಿಯ ಸಹಾಯವನ್ನು ನಿಲ್ಲಿಸಬೇಕಾಗುತ್ತದೆ ಎಂದು ಅಧ್ಯಕ್ಷ ಟ್ರಂಪ್ ಆಡಳಿತ ಮೊದಲಿನಿಂದಲೂ ಹೇಳುತ್ತಿದೆ. -ಏಜೆನ್ಸೀಸ್
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ