ಹಿಂದಿನ ಅಂಕಣವೊಂದರಲ್ಲಿ ಕಷಾಯ ಮಾಡುವುದು ಹಾಗೂ ಕಷಾಯದ ಮಹತ್ವವೇನು ಎಂಬುದರ ಬಗ್ಗೆ ತಿಳಿದುಕೊಂಡಿದ್ದೆವು. ಗಿಡಮೂಲಿಕೆ ಅಥವಾ ಔಷಧೀಯ ವಸ್ತುಗಳನ್ನು ಉಪಯೋಗಿಸಿ ಸಮಸ್ಯೆಗೆ ತಕ್ಕಂತೆ ಸರಿಯಾದ ಪ್ರಮಾಣದಲ್ಲಿ ಪದಾರ್ಥಗಳ ಬಳಕೆ ಮಾಡಿ ಪರಿಣಾಮಕಾರಿಯಾದ ಫಲಿತಾಂಶವನ್ನು ಪಡೆಯಲು ಕಷಾಯ ಅನುಕೂಲ ಮಾಡಿಕೊಡುತ್ತದೆ. ಆದರೆ ಮಾಡುವ ವಿಧಾನದ ಬಗೆಗೆ ಸರಿಯಾದ ಜ್ಞಾನವಿರುವುದು ಅಗತ್ಯ. ಇಂದಿನ ಅಂಕಣದಲ್ಲಿ ಒಂದು ಪರಿಣಾಮಕಾರಿ ಕಷಾಯದ ಬಗೆಗೆ ತಿಳಿದುಕೊಳ್ಳೋಣ.
ಬೇಕಾಗುವ ಪದಾರ್ಥಗಳು: ನೆಗ್ಗಿನ (ಗೋಕ್ಷುರ) ಮುಳ್ಳು, ಸೊಗದೆ ಬೇರು, ಕೊತ್ತಂಬರಿ ಕಾಳು.
ಮಾಡುವ ವಿಧಾನ: ಒಂದು ಚಮಚ ಕೊತ್ತಂಬರಿ ಕಾಳು, ಸೊಗದೆಬೇರಿನ ಎರಡು ಚೂರುಗಳು, ನಾಲ್ಕು ನೆಗ್ಗಿನ ಮುಳ್ಳು ಸೇರಿಸಿ ಪುಡಿ ಮಾಡಿಕೊಳ್ಳಬೇಕು. ಒಂದು ಲೋಟ ನೀರನ್ನು ಬಿಸಿಗಿರಿಸಿಕೊಂಡು ಅದಕ್ಕೆ ಪುಡಿ ಮಾಡಿಕೊಂಡ ಎಲ್ಲವನ್ನೂ ಹಾಕಿ ಚೆನ್ನಾಗಿ ಮಂದವಾದ ಉರಿಯಲ್ಲಿ ಕುದಿಸಿ ಕಷಾಯ ಮಾಡಿ ಸೋಸಿ ಕುಡಿಯಬೇಕು. ಊಟವಾದ ಒಂದು ಗಂಟೆಯ ನಂತರ ಇದನ್ನು ತೆಗೆದುಕೊಳ್ಳಬೇಕು.
ಮಹತ್ವ: ಇದು ಮೂತ್ರಸಂಬಂಧಿ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೂತ್ರ ಮಾಡುವಾಗ ಉರಿ, ತುರಿಕೆ ಇನ್ನಿತರ ಸಮಸ್ಯೆಗಳ ನಿವಾರಣೆಗೆ ಸಹಕಾರಿ. ಕಿಡ್ನಿಯಲ್ಲಿ ಕಲ್ಲು ಆಗದಂತೆ ತಡೆಯಲು ಉಪಯುಕ್ತ. 10 ಮಿಲಿ ಮೀಟರ್ಗಿಂತ ಕಡಿಮೆ ಗಾತ್ರದ ಕಿಡ್ನಿ ಕಲ್ಲುಗಳನ್ನು ನಿವಾರಿಸಲು ಈ ಕಷಾಯವನ್ನು ದಿನಕ್ಕೆ 3-4 ಬಾರಿ ಕುಡಿಯಬೇಕು. ಜೊತೆಯಲ್ಲಿ ಬಾರ್ಲಿ ನೀರು, ಬಾಳೆದಿಂಡಿನ ರಸ ಮುಂತಾದ ಮೂತ್ರವರ್ಧಕಗಳನ್ನು ಹೆಚ್ಚು ಕುಡಿಯುವುದು ಉತ್ತಮ.
ಬೇಕಾಗುವ ಪದಾರ್ಥಗಳು: ನೆಗ್ಗಿನ (ಗೋಕ್ಷುರ) ಮುಳ್ಳು, ಸೊಗದೆ ಬೇರು, ಕೊತ್ತಂಬರಿ ಕಾಳು.
ಮಾಡುವ ವಿಧಾನ: ಒಂದು ಚಮಚ ಕೊತ್ತಂಬರಿ ಕಾಳು, ಸೊಗದೆಬೇರಿನ ಎರಡು ಚೂರುಗಳು, ನಾಲ್ಕು ನೆಗ್ಗಿನ ಮುಳ್ಳು ಸೇರಿಸಿ ಪುಡಿ ಮಾಡಿಕೊಳ್ಳಬೇಕು. ಒಂದು ಲೋಟ ನೀರನ್ನು ಬಿಸಿಗಿರಿಸಿಕೊಂಡು ಅದಕ್ಕೆ ಪುಡಿ ಮಾಡಿಕೊಂಡ ಎಲ್ಲವನ್ನೂ ಹಾಕಿ ಚೆನ್ನಾಗಿ ಮಂದವಾದ ಉರಿಯಲ್ಲಿ ಕುದಿಸಿ ಕಷಾಯ ಮಾಡಿ ಸೋಸಿ ಕುಡಿಯಬೇಕು. ಊಟವಾದ ಒಂದು ಗಂಟೆಯ ನಂತರ ಇದನ್ನು ತೆಗೆದುಕೊಳ್ಳಬೇಕು.
ಮಹತ್ವ: ಇದು ಮೂತ್ರಸಂಬಂಧಿ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೂತ್ರ ಮಾಡುವಾಗ ಉರಿ, ತುರಿಕೆ ಇನ್ನಿತರ ಸಮಸ್ಯೆಗಳ ನಿವಾರಣೆಗೆ ಸಹಕಾರಿ. ಕಿಡ್ನಿಯಲ್ಲಿ ಕಲ್ಲು ಆಗದಂತೆ ತಡೆಯಲು ಉಪಯುಕ್ತ. 10 ಮಿಲಿ ಮೀಟರ್ಗಿಂತ ಕಡಿಮೆ ಗಾತ್ರದ ಕಿಡ್ನಿ ಕಲ್ಲುಗಳನ್ನು ನಿವಾರಿಸಲು ಈ ಕಷಾಯವನ್ನು ದಿನಕ್ಕೆ 3-4 ಬಾರಿ ಕುಡಿಯಬೇಕು. ಜೊತೆಯಲ್ಲಿ ಬಾರ್ಲಿ ನೀರು, ಬಾಳೆದಿಂಡಿನ ರಸ ಮುಂತಾದ ಮೂತ್ರವರ್ಧಕಗಳನ್ನು ಹೆಚ್ಚು ಕುಡಿಯುವುದು ಉತ್ತಮ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ