ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ವಿಶ್ವ ಚಾಂಪಿಯನ್ ವೇಟ್ಲಿಫ್ಟರ್ ಮೀರಾಬಾಯಿ ಚಾನು ಈ ವರ್ಷದ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ರತ್ನ ಪ್ರಶಸ್ತಿಗೆ ಭಾಜನರಾಗಲಿದ್ದಾರೆ. ಈ ಕ್ರೀಡಾತಾರೆಯರ ಹೆಸರನ್ನು ದೇಶದ ಅತ್ಯುನ್ನತ ಕ್ರೀಡಾ ಗೌರವಕ್ಕೆ ಪ್ರಶಸ್ತಿ ಆಯ್ಕೆ ಸಮಿತಿ ಶಿಫಾರಸು ಮಾಡಿದೆ. ಜತೆಗೆ ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಮತ್ತು ಕರ್ನಾಟಕದ ಟೆನಿಸ್ ತಾರೆ ರೋಹನ್ ಬೋಪಣ್ಣ ಸಹಿತ 20 ಕ್ರೀಡಾಪಟುಗಳ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಕ್ರೀಡಾ ಸಚಿವಾಲಯದ ಒಪ್ಪಿಗೆ ಸಿಕ್ಕ ಬಳಿಕ ಪ್ರಶಸ್ತಿ ವಿಜೇತರ ಹೆಸರು ಅಧಿಕೃತವಾಗಿ ಘೋಷಣೆಯಾಗಲಿದೆ.
ಖೇಲ್ರತ್ನಕ್ಕೆ ಕೊಹ್ಲಿ ಮತ್ತು ಮೀರಾಬಾಯಿ ಹೆಸರು ಶಿಫಾರಸು ಮಾಡಿರುವುದನ್ನು ನಿವೃತ್ತ ನ್ಯಾಯಾಧೀಶ ಐ.ಕೆ. ಕೋಚರ್ ನೇತೃತ್ವದ ಪ್ರಶಸ್ತಿ ಆಯ್ಕೆ ಸಮಿತಿಯ ಮೂಲಗಳು ತಿಳಿಸಿವೆ. ಕೊಹ್ಲಿ ಹೆಸರು ಸತತ 3ನೇ ವರ್ಷ ಖೇಲ್ರತ್ನಕ್ಕೆ ಶಿಫಾರಸುಗೊಂಡಿತ್ತು. 2016ರಲ್ಲಿ ಅವರು ರಿಯೋ ಒಲಿಂಪಿಕ್ಸ್ ಸಾಧಕರ ಎದುರು ನಿರಾಸೆ ಅನುಭವಿಸಿದ್ದರೆ, ಕಳೆದ ವರ್ಷ ಹಾಕಿ ತಂಡದ ಮಾಜಿ ನಾಯಕ ಸರ್ದಾರ್ ಸಿಂಗ್ ಮತ್ತು ಪ್ಯಾರಾ ಅಥ್ಲೀಟ್ ದೇವೇಂದ್ರ ಜಜಾರಿಯಾ ಎದುರು ನಿರಾಸೆ ಅನುಭವಿಸಿದ್ದರು. ಈ ವರ್ಷ ಕೊನೆಗೂ ಕೊಹ್ಲಿಗೆ ಅದೃಷ್ಟ ಖುಲಾಯಿಸಿದೆ. -ಪಿಟಿಐ
ಶ್ರೀಕಾಂತ್ ಮೂರನೇ ಆಯ್ಕೆ
ಕಳೆದ ವರ್ಷ ಸೂಪರ್ ಸಿರೀಸ್ ಟೂರ್ನಿಗಳಲ್ಲಿ ಶ್ರೇಷ್ಠ ನಿರ್ವಹಣೆ ತೋರಿದ ಷಟ್ಲರ್ ಕಿಡಂಬಿ ಶ್ರೀಕಾಂತ್ ಹೆಸರು ಖೇಲ್ರತ್ನ ಪ್ರಶಸ್ತಿಯ ಪೈಪೋಟಿಯಲ್ಲಿತ್ತು. ಕೊನೆಕ್ಷಣದಲ್ಲಿ ಮೀರಾಬಾಯಿ ಎದುರು ಶ್ರೀಕಾಂತ್ ಹಿನ್ನಡೆ ಕಂಡರು. ಆದರೆ ಈ ವರ್ಷವೇ 3ನೇ ಖೇಲ್ರತ್ನ ಪ್ರಶಸ್ತಿ ನೀಡಲು ಅವಕಾಶವಿದ್ದರೆ ಅದನ್ನು ಶ್ರೀಕಾಂತ್ಗೆ ನೀಡಬೇಕೆಂದು ಕ್ರೀಡಾ ಸಚಿವಾಲಯಕ್ಕೆ ಪ್ರಶಸ್ತಿ ಆಯ್ಕೆ ಸಮಿತಿ ಶಿಫಾರಸು ಮಾಡಿದೆ. 2016ರ ಒಲಿಂಪಿಕ್ಸ್ ವರ್ಷದಲ್ಲಿ ನಾಲ್ವರಿಗೆ ಖೇಲ್ರತ್ನ ಪ್ರಶಸ್ತಿ ನೀಡಿದ ದೃಷ್ಟಾಂತವಿದೆ.
ಸೆಪ್ಟೆಂಬರ್ 25ಕ್ಕೆ ಪ್ರಶಸ್ತಿ ಪ್ರದಾನ
ಪ್ರತಿ ವರ್ಷ ರಾಷ್ಟ್ರೀಯ ಕ್ರೀಡಾ ದಿನವಾದ ಆ. 29ರಂದು ಕ್ರೀಡಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಅದೇ ಸಮಯದಲ್ಲಿ ನಡೆಯುತ್ತಿದ್ದ ಏಷ್ಯಾಡ್ನಿಂದಾಗಿ ಸೆ. 25ಕ್ಕೆ ಸಮಾರಂಭ ಮುಂದೂಡಲ್ಪಟ್ಟಿದೆ. ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಕೊಹ್ಲಿ ವಿಶ್ವ ನಂ. 1 ಟೆಸ್ಟ್, ಏಕದಿನ ಬ್ಯಾಟ್ಸ್ಮನ್
ಟೀಮ್ ಇಂಡಿಯಾ ನಾಯಕರಾಗಿ ವಿರಾಟ್ ಕೊಹ್ಲಿ ಇತ್ತೀಚೆಗೆ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಪ್ರವಾಸಗಳ ಟೆಸ್ಟ್ ಸರಣಿಗಳಲ್ಲಿ ಹೆಚ್ಚಿನ ಯಶಸ್ಸು ಕಾಣದಿದ್ದರೂ, ಬ್ಯಾಟ್ಸ್ ಮನ್ ಆಗಿ ವೈಯಕ್ತಿಕ ಯಶ ಕಂಡಿದ್ದಾರೆ. ಐಸಿಸಿ ಟೆಸ್ಟ್ ಮತ್ತು ಏಕದಿನ ರ್ಯಾಂಕಿಂಗ್ನಲ್ಲಿ ಅವರು ಹಾಲಿ ನಂ. 1 ಬ್ಯಾಟ್ಸ್ ಮನ್ ಆಗಿದ್ದಾರೆ. 29 ವರ್ಷದ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟು 58 ಶತಕ ಸಿಡಿಸಿದ್ದಾರೆ. ಕೊಹ್ಲಿ ಖೇಲ್ರತ್ನ ಪ್ರಶಸ್ತಿಗೆ ಭಾಜನರಾಗುತ್ತಿರುವ 3ನೇ ಕ್ರಿಕೆಟಿಗರಾಗಿದ್ದಾರೆ. ಸಚಿನ್ ತೆಂಡುಲ್ಕರ್ 1997 ಮತ್ತು ಮಹೇಂದ್ರ ಸಿಂಗ್ ಧೋನಿ 2007ರಲ್ಲಿ ಈ ಪ್ರಶಸ್ತಿ ಪಡೆದಿದ್ದರು.
ಮೀರಾಬಾಯಿ ಚಾನು ವಿಶ್ವ ಚಾಂಪಿಯನ್ ವೇಟ್ಲಿಫ್ಟರ್
ಮಣಿಪುರದ 24 ವರ್ಷದ ಮೀರಾಬಾಯಿ ಚಾನು ವೇಟ್ಲಿಫ್ಟಿಂಗ್ನಲ್ಲಿ 48 ಕೆಜಿ ವಿಭಾಗದ ಹಾಲಿ ವಿಶ್ವ ಚಾಂಪಿಯನ್ ಆಗಿದ್ದಾರೆ. ಕಳೆದ ವರ್ಷ ಚಿನ್ನದ ಪದಕ ಗೆಲ್ಲುವ ಮೂಲಕ ಅವರು ಕರ್ಣಂ ಮಲ್ಲೇಶ್ವರಿ (1995) ಬಳಿಕ ವಿಶ್ವ ಚಾಂಪಿಯನ್ಷಿಪ್ ಸ್ವರ್ಣ ಗೆದ್ದ ಮೊದಲ ಭಾರತೀಯ ವೇಟ್ಲಿಫ್ಟರ್ ಎನಿಸಿದ್ದರು. ಈ ವರ್ಷ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನ ಗೆದ್ದಿದ್ದ ಚಾನು, ಬೆನ್ನು ನೋವಿನ ಸಮಸ್ಯೆಯಿಂದಾಗಿ ಕಳೆದ ಏಷ್ಯನ್ ಗೇಮ್ಸ್ನಿಂದ ಹೊರಗುಳಿದಿದ್ದರು. 2020ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತದ ಪ್ರಮುಖ ಪದಕದ ಆಕಾಂಕ್ಷಿಯೂ ಅವರಾಗಿದ್ದಾರೆ.
ಬೋಪಣ್ಣ, ನೀರಜ್, ಹಿಮಾಗೆ ಅರ್ಜುನ
ಕನ್ನಡಿಗ ರೋಹನ್ ಬೋಪಣ್ಣ, ಅಥ್ಲೆಟಿಕ್ಸ್ನ ಯುವ ತಾರೆಯರಾದ ನೀರಜ್ ಚೋಪ್ರಾ, ಹಿಮಾ ದಾಸ್, ಮಹಿಳಾ ಕ್ರಿಕೆಟರ್ ಸ್ಮೃತಿ ಮಂದನಾ, ಟೇಬಲ್ ಟೆನಿಸ್ ತಾರೆ ಮನಿಕಾ ಬಾತ್ರಾ, ಮಹಿಳಾ ಹಾಕಿ ತಂಡದ ಗೋಲ್ ಕೀಪರ್ ಸವಿತಾ ಸಹಿತ 20 ಕ್ರೀಡಾಪಟುಗಳ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಏಷ್ಯಾಡ್ ಸ್ವರ್ಣ ವಿಜೇತ ಬಾಕ್ಸರ್ ಅಮಿತ್ ಪಾಂಗಲ್ ಹೆಸರು ಅರ್ಜುನಕ್ಕೆ ಶಿಫಾರಸುಗೊಂಡಿದ್ದರೂ, 2012ರಲ್ಲಿ ಅವರು ಉದ್ದೀಪನ ಪರೀಕ್ಷೆಯಲ್ಲಿ ವಿಫಲರಾಗಿರುವ ಹಿನ್ನೆಲೆಯಲ್ಲಿ ತಿರಸ್ಕೃತಗೊಂಡಿದ್ದಾರೆ. ಕ್ರಿಕೆಟ್ನಲ್ಲಿ ಎಡಗೈ ಬ್ಯಾಟ್ಸ್ಮನ್ ಶಿಖರ್ ಧವನ್ ಹೆಸರು ಅರ್ಜುನಕ್ಕೆ ಶಿಫಾರಸುಗೊಂಡಿದ್ದರೂ, ಅವರು ನಿರಾಸೆ ಅನುಭವಿಸಿದ್ದಾರೆ.
ಪ್ರಶಸ್ತಿಯಲ್ಲಿ ಏನೇನಿದೆ?
1991-92ರಲ್ಲಿ ಆರಂಭಗೊಂಡ ಖೇಲ್ರತ್ನ ಪ್ರಶಸ್ತಿ ಈಗ 7.5 ಲಕ್ಷ ರೂ. ಬಹುಮಾನ ಒಳಗೊಂಡಿದೆ. ಜತೆಗೆ ಒಂದು ಪದಕ, ಪ್ರಮಾಣಪತ್ರವನ್ನೂ ರಾಷ್ಟ್ರಪತಿ ವಿತರಿಸಲಿದ್ದಾರೆ. ಅರ್ಜುನ ಪ್ರಶಸ್ತಿ 5 ಲಕ್ಷ ರೂ. ನಗದು ಬಹುಮಾನ ಮತ್ತು ಅರ್ಜುನನ ಪ್ರತಿಮೆಯನ್ನು ಒಳಗೊಂಡಿದೆ.
# ಅರ್ಜುನ ಪ್ರಶಸ್ತಿಗೆ ಶಿಫಾರಸುಗೊಂಡವರು: ಸ್ಮೃತಿ ಮಂದನಾ (ಕ್ರಿಕೆಟ್), ರೋಹನ್ ಬೋಪಣ್ಣ (ಟೆನಿಸ್), ನೀರಜ್ ಚೋಪ್ರಾ, ಜಿನ್ಸನ್ ಜಾನ್ಸನ್, ಹಿಮಾ ದಾಸ್ (ಅಥ್ಲೆಟಿಕ್ಸ್), ಶುಭಾಂಕರ್ ಶರ್ಮ (ಗಾಲ್ಪ್), ಸತೀಶ್ ಕುಮಾರ್ (ಬಾಕ್ಸಿಂಗ್), ಸಿಕ್ಕಿ ರೆಡ್ಡಿ (ಬ್ಯಾಡ್ಮಿಂಟನ್), ಮನ್ಪ್ರೀತ್ ಸಿಂಗ್, ಸವಿತಾ (ಹಾಕಿ), ರವಿ ರಾಥೋಡ್ (ಪೋಲೋ), ರಾಹಿ ಸನೋಬಾಟ್, ಅಂಕುರ್ ಮಿತ್ತಲ್, ಶ್ರೇಯಸಿ ಸಿಂಗ್ (ಶೂಟಿಂಗ್), ಮನಿಕಾ ಬಾತ್ರಾ, ಜಿ. ಸತ್ಯನ್ (ಟೇಬಲ್ ಟೆನಿಸ್), ಸುಮಿತ್ (ಕುಸ್ತಿ), ಪೂಜಾ ಕದಿಯನ್ (ವುಶು), ಅಂಕುರ್ ಧಾಮ (ಪ್ಯಾರಾ ಅಥ್ಲೆಟಿಕ್ಸ್), ಮನೋಜ್ ಸರ್ಕಾರ್ (ಪ್ಯಾರಾ ಬ್ಯಾಡ್ಮಿಂಟನ್).
# ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸುಗೊಂಡವರು: ಜೀವನ್ಜೋತ್ ಸಿಂಗ್ ತೇಜಾ (ಆರ್ಚರಿ), ಎಸ್ಎಸ್ ಪನ್ನು (ಅಥ್ಲೆಟಿಕ್ಸ್), ಸಿಎ ಕುಟ್ಟಪ್ಪ (ಬಾಕ್ಸಿಂಗ್), ವಿಜಯ್ ಶರ್ಮ (ವೇಟ್ಲಿಫ್ಟಿಂಗ್), ಶ್ರೀನಿವಾಸ ರಾವ್ (ಟೇಬಲ್ ಟೆನಿಸ್); ಜೀವಮಾನ ಸಾಧನೆ ವಿಭಾಗದಲ್ಲಿ: ಕ್ಲಾರೆನ್ಸ್ ಲೋಬೋ (ಹಾಕಿ), ತಾರಕ್ ಸಿನ್ಹಾ (ಕ್ರಿಕೆಟ್), ಜೀವನ್ಕುಮಾರ್ ಶರ್ಮ (ಜುಡೋ), ವಿಆರ್ ಬೀಡು (ಅಥ್ಲೆಟಿಕ್ಸ್).
# ಧ್ಯಾನ್ಚಂದ್ ಪ್ರಶಸ್ತಿಗೆ ಶಿಫಾರಸುಗೊಂಡವರು: ಸತ್ಯದೇವ್ ಪ್ರಸಾದ್ (ಆರ್ಚರಿ), ಭರತ್ ಛೇಟ್ರಿ (ಹಾಕಿ), ಬಾಬಿ ಅಲೋಶಿಯಸ್, ಚೌಗಲೆ ದಾದು ದತ್ತಾತ್ರೇಯ (ಕುಸ್ತಿ).
ಖೇಲ್ರತ್ನಕ್ಕೆ ಕೊಹ್ಲಿ ಮತ್ತು ಮೀರಾಬಾಯಿ ಹೆಸರು ಶಿಫಾರಸು ಮಾಡಿರುವುದನ್ನು ನಿವೃತ್ತ ನ್ಯಾಯಾಧೀಶ ಐ.ಕೆ. ಕೋಚರ್ ನೇತೃತ್ವದ ಪ್ರಶಸ್ತಿ ಆಯ್ಕೆ ಸಮಿತಿಯ ಮೂಲಗಳು ತಿಳಿಸಿವೆ. ಕೊಹ್ಲಿ ಹೆಸರು ಸತತ 3ನೇ ವರ್ಷ ಖೇಲ್ರತ್ನಕ್ಕೆ ಶಿಫಾರಸುಗೊಂಡಿತ್ತು. 2016ರಲ್ಲಿ ಅವರು ರಿಯೋ ಒಲಿಂಪಿಕ್ಸ್ ಸಾಧಕರ ಎದುರು ನಿರಾಸೆ ಅನುಭವಿಸಿದ್ದರೆ, ಕಳೆದ ವರ್ಷ ಹಾಕಿ ತಂಡದ ಮಾಜಿ ನಾಯಕ ಸರ್ದಾರ್ ಸಿಂಗ್ ಮತ್ತು ಪ್ಯಾರಾ ಅಥ್ಲೀಟ್ ದೇವೇಂದ್ರ ಜಜಾರಿಯಾ ಎದುರು ನಿರಾಸೆ ಅನುಭವಿಸಿದ್ದರು. ಈ ವರ್ಷ ಕೊನೆಗೂ ಕೊಹ್ಲಿಗೆ ಅದೃಷ್ಟ ಖುಲಾಯಿಸಿದೆ. -ಪಿಟಿಐ
ಶ್ರೀಕಾಂತ್ ಮೂರನೇ ಆಯ್ಕೆ
ಕಳೆದ ವರ್ಷ ಸೂಪರ್ ಸಿರೀಸ್ ಟೂರ್ನಿಗಳಲ್ಲಿ ಶ್ರೇಷ್ಠ ನಿರ್ವಹಣೆ ತೋರಿದ ಷಟ್ಲರ್ ಕಿಡಂಬಿ ಶ್ರೀಕಾಂತ್ ಹೆಸರು ಖೇಲ್ರತ್ನ ಪ್ರಶಸ್ತಿಯ ಪೈಪೋಟಿಯಲ್ಲಿತ್ತು. ಕೊನೆಕ್ಷಣದಲ್ಲಿ ಮೀರಾಬಾಯಿ ಎದುರು ಶ್ರೀಕಾಂತ್ ಹಿನ್ನಡೆ ಕಂಡರು. ಆದರೆ ಈ ವರ್ಷವೇ 3ನೇ ಖೇಲ್ರತ್ನ ಪ್ರಶಸ್ತಿ ನೀಡಲು ಅವಕಾಶವಿದ್ದರೆ ಅದನ್ನು ಶ್ರೀಕಾಂತ್ಗೆ ನೀಡಬೇಕೆಂದು ಕ್ರೀಡಾ ಸಚಿವಾಲಯಕ್ಕೆ ಪ್ರಶಸ್ತಿ ಆಯ್ಕೆ ಸಮಿತಿ ಶಿಫಾರಸು ಮಾಡಿದೆ. 2016ರ ಒಲಿಂಪಿಕ್ಸ್ ವರ್ಷದಲ್ಲಿ ನಾಲ್ವರಿಗೆ ಖೇಲ್ರತ್ನ ಪ್ರಶಸ್ತಿ ನೀಡಿದ ದೃಷ್ಟಾಂತವಿದೆ.
ಸೆಪ್ಟೆಂಬರ್ 25ಕ್ಕೆ ಪ್ರಶಸ್ತಿ ಪ್ರದಾನ
ಪ್ರತಿ ವರ್ಷ ರಾಷ್ಟ್ರೀಯ ಕ್ರೀಡಾ ದಿನವಾದ ಆ. 29ರಂದು ಕ್ರೀಡಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಅದೇ ಸಮಯದಲ್ಲಿ ನಡೆಯುತ್ತಿದ್ದ ಏಷ್ಯಾಡ್ನಿಂದಾಗಿ ಸೆ. 25ಕ್ಕೆ ಸಮಾರಂಭ ಮುಂದೂಡಲ್ಪಟ್ಟಿದೆ. ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಕೊಹ್ಲಿ ವಿಶ್ವ ನಂ. 1 ಟೆಸ್ಟ್, ಏಕದಿನ ಬ್ಯಾಟ್ಸ್ಮನ್
ಟೀಮ್ ಇಂಡಿಯಾ ನಾಯಕರಾಗಿ ವಿರಾಟ್ ಕೊಹ್ಲಿ ಇತ್ತೀಚೆಗೆ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಪ್ರವಾಸಗಳ ಟೆಸ್ಟ್ ಸರಣಿಗಳಲ್ಲಿ ಹೆಚ್ಚಿನ ಯಶಸ್ಸು ಕಾಣದಿದ್ದರೂ, ಬ್ಯಾಟ್ಸ್ ಮನ್ ಆಗಿ ವೈಯಕ್ತಿಕ ಯಶ ಕಂಡಿದ್ದಾರೆ. ಐಸಿಸಿ ಟೆಸ್ಟ್ ಮತ್ತು ಏಕದಿನ ರ್ಯಾಂಕಿಂಗ್ನಲ್ಲಿ ಅವರು ಹಾಲಿ ನಂ. 1 ಬ್ಯಾಟ್ಸ್ ಮನ್ ಆಗಿದ್ದಾರೆ. 29 ವರ್ಷದ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟು 58 ಶತಕ ಸಿಡಿಸಿದ್ದಾರೆ. ಕೊಹ್ಲಿ ಖೇಲ್ರತ್ನ ಪ್ರಶಸ್ತಿಗೆ ಭಾಜನರಾಗುತ್ತಿರುವ 3ನೇ ಕ್ರಿಕೆಟಿಗರಾಗಿದ್ದಾರೆ. ಸಚಿನ್ ತೆಂಡುಲ್ಕರ್ 1997 ಮತ್ತು ಮಹೇಂದ್ರ ಸಿಂಗ್ ಧೋನಿ 2007ರಲ್ಲಿ ಈ ಪ್ರಶಸ್ತಿ ಪಡೆದಿದ್ದರು.
ಮೀರಾಬಾಯಿ ಚಾನು ವಿಶ್ವ ಚಾಂಪಿಯನ್ ವೇಟ್ಲಿಫ್ಟರ್
ಮಣಿಪುರದ 24 ವರ್ಷದ ಮೀರಾಬಾಯಿ ಚಾನು ವೇಟ್ಲಿಫ್ಟಿಂಗ್ನಲ್ಲಿ 48 ಕೆಜಿ ವಿಭಾಗದ ಹಾಲಿ ವಿಶ್ವ ಚಾಂಪಿಯನ್ ಆಗಿದ್ದಾರೆ. ಕಳೆದ ವರ್ಷ ಚಿನ್ನದ ಪದಕ ಗೆಲ್ಲುವ ಮೂಲಕ ಅವರು ಕರ್ಣಂ ಮಲ್ಲೇಶ್ವರಿ (1995) ಬಳಿಕ ವಿಶ್ವ ಚಾಂಪಿಯನ್ಷಿಪ್ ಸ್ವರ್ಣ ಗೆದ್ದ ಮೊದಲ ಭಾರತೀಯ ವೇಟ್ಲಿಫ್ಟರ್ ಎನಿಸಿದ್ದರು. ಈ ವರ್ಷ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನ ಗೆದ್ದಿದ್ದ ಚಾನು, ಬೆನ್ನು ನೋವಿನ ಸಮಸ್ಯೆಯಿಂದಾಗಿ ಕಳೆದ ಏಷ್ಯನ್ ಗೇಮ್ಸ್ನಿಂದ ಹೊರಗುಳಿದಿದ್ದರು. 2020ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತದ ಪ್ರಮುಖ ಪದಕದ ಆಕಾಂಕ್ಷಿಯೂ ಅವರಾಗಿದ್ದಾರೆ.
ಬೋಪಣ್ಣ, ನೀರಜ್, ಹಿಮಾಗೆ ಅರ್ಜುನ
ಕನ್ನಡಿಗ ರೋಹನ್ ಬೋಪಣ್ಣ, ಅಥ್ಲೆಟಿಕ್ಸ್ನ ಯುವ ತಾರೆಯರಾದ ನೀರಜ್ ಚೋಪ್ರಾ, ಹಿಮಾ ದಾಸ್, ಮಹಿಳಾ ಕ್ರಿಕೆಟರ್ ಸ್ಮೃತಿ ಮಂದನಾ, ಟೇಬಲ್ ಟೆನಿಸ್ ತಾರೆ ಮನಿಕಾ ಬಾತ್ರಾ, ಮಹಿಳಾ ಹಾಕಿ ತಂಡದ ಗೋಲ್ ಕೀಪರ್ ಸವಿತಾ ಸಹಿತ 20 ಕ್ರೀಡಾಪಟುಗಳ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಏಷ್ಯಾಡ್ ಸ್ವರ್ಣ ವಿಜೇತ ಬಾಕ್ಸರ್ ಅಮಿತ್ ಪಾಂಗಲ್ ಹೆಸರು ಅರ್ಜುನಕ್ಕೆ ಶಿಫಾರಸುಗೊಂಡಿದ್ದರೂ, 2012ರಲ್ಲಿ ಅವರು ಉದ್ದೀಪನ ಪರೀಕ್ಷೆಯಲ್ಲಿ ವಿಫಲರಾಗಿರುವ ಹಿನ್ನೆಲೆಯಲ್ಲಿ ತಿರಸ್ಕೃತಗೊಂಡಿದ್ದಾರೆ. ಕ್ರಿಕೆಟ್ನಲ್ಲಿ ಎಡಗೈ ಬ್ಯಾಟ್ಸ್ಮನ್ ಶಿಖರ್ ಧವನ್ ಹೆಸರು ಅರ್ಜುನಕ್ಕೆ ಶಿಫಾರಸುಗೊಂಡಿದ್ದರೂ, ಅವರು ನಿರಾಸೆ ಅನುಭವಿಸಿದ್ದಾರೆ.
ಪ್ರಶಸ್ತಿಯಲ್ಲಿ ಏನೇನಿದೆ?
1991-92ರಲ್ಲಿ ಆರಂಭಗೊಂಡ ಖೇಲ್ರತ್ನ ಪ್ರಶಸ್ತಿ ಈಗ 7.5 ಲಕ್ಷ ರೂ. ಬಹುಮಾನ ಒಳಗೊಂಡಿದೆ. ಜತೆಗೆ ಒಂದು ಪದಕ, ಪ್ರಮಾಣಪತ್ರವನ್ನೂ ರಾಷ್ಟ್ರಪತಿ ವಿತರಿಸಲಿದ್ದಾರೆ. ಅರ್ಜುನ ಪ್ರಶಸ್ತಿ 5 ಲಕ್ಷ ರೂ. ನಗದು ಬಹುಮಾನ ಮತ್ತು ಅರ್ಜುನನ ಪ್ರತಿಮೆಯನ್ನು ಒಳಗೊಂಡಿದೆ.
# ಅರ್ಜುನ ಪ್ರಶಸ್ತಿಗೆ ಶಿಫಾರಸುಗೊಂಡವರು: ಸ್ಮೃತಿ ಮಂದನಾ (ಕ್ರಿಕೆಟ್), ರೋಹನ್ ಬೋಪಣ್ಣ (ಟೆನಿಸ್), ನೀರಜ್ ಚೋಪ್ರಾ, ಜಿನ್ಸನ್ ಜಾನ್ಸನ್, ಹಿಮಾ ದಾಸ್ (ಅಥ್ಲೆಟಿಕ್ಸ್), ಶುಭಾಂಕರ್ ಶರ್ಮ (ಗಾಲ್ಪ್), ಸತೀಶ್ ಕುಮಾರ್ (ಬಾಕ್ಸಿಂಗ್), ಸಿಕ್ಕಿ ರೆಡ್ಡಿ (ಬ್ಯಾಡ್ಮಿಂಟನ್), ಮನ್ಪ್ರೀತ್ ಸಿಂಗ್, ಸವಿತಾ (ಹಾಕಿ), ರವಿ ರಾಥೋಡ್ (ಪೋಲೋ), ರಾಹಿ ಸನೋಬಾಟ್, ಅಂಕುರ್ ಮಿತ್ತಲ್, ಶ್ರೇಯಸಿ ಸಿಂಗ್ (ಶೂಟಿಂಗ್), ಮನಿಕಾ ಬಾತ್ರಾ, ಜಿ. ಸತ್ಯನ್ (ಟೇಬಲ್ ಟೆನಿಸ್), ಸುಮಿತ್ (ಕುಸ್ತಿ), ಪೂಜಾ ಕದಿಯನ್ (ವುಶು), ಅಂಕುರ್ ಧಾಮ (ಪ್ಯಾರಾ ಅಥ್ಲೆಟಿಕ್ಸ್), ಮನೋಜ್ ಸರ್ಕಾರ್ (ಪ್ಯಾರಾ ಬ್ಯಾಡ್ಮಿಂಟನ್).
# ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸುಗೊಂಡವರು: ಜೀವನ್ಜೋತ್ ಸಿಂಗ್ ತೇಜಾ (ಆರ್ಚರಿ), ಎಸ್ಎಸ್ ಪನ್ನು (ಅಥ್ಲೆಟಿಕ್ಸ್), ಸಿಎ ಕುಟ್ಟಪ್ಪ (ಬಾಕ್ಸಿಂಗ್), ವಿಜಯ್ ಶರ್ಮ (ವೇಟ್ಲಿಫ್ಟಿಂಗ್), ಶ್ರೀನಿವಾಸ ರಾವ್ (ಟೇಬಲ್ ಟೆನಿಸ್); ಜೀವಮಾನ ಸಾಧನೆ ವಿಭಾಗದಲ್ಲಿ: ಕ್ಲಾರೆನ್ಸ್ ಲೋಬೋ (ಹಾಕಿ), ತಾರಕ್ ಸಿನ್ಹಾ (ಕ್ರಿಕೆಟ್), ಜೀವನ್ಕುಮಾರ್ ಶರ್ಮ (ಜುಡೋ), ವಿಆರ್ ಬೀಡು (ಅಥ್ಲೆಟಿಕ್ಸ್).
# ಧ್ಯಾನ್ಚಂದ್ ಪ್ರಶಸ್ತಿಗೆ ಶಿಫಾರಸುಗೊಂಡವರು: ಸತ್ಯದೇವ್ ಪ್ರಸಾದ್ (ಆರ್ಚರಿ), ಭರತ್ ಛೇಟ್ರಿ (ಹಾಕಿ), ಬಾಬಿ ಅಲೋಶಿಯಸ್, ಚೌಗಲೆ ದಾದು ದತ್ತಾತ್ರೇಯ (ಕುಸ್ತಿ).
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ