ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಪ್ರಚಲಿತಗಳು 20

1. ಕ್ಯಾಪ್ಟನ್ ಅಜಿತ್ ವಾಡೇಕರ್ ಇತ್ತೀಚೆಗೆ ನಿಧನರಾಗಿದ್ದಾರೆ. ಇವರು ಕೆಳಗಿನ ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ?
1. ಕ್ರೀಡೆ
2. ರಾಜಕೀಯ
3. ಕಲೆ
4. ವಿಜ್ಞಾನ
Correct Answer: option1
Justification: ಭಾರತೀಯ ಕ್ರಿಕೆಟ್ ರಂಗ ಕಂಡ ಕುಶಾಗ್ರಮತಿ ಕ್ಯಾಪ್ಟನ್ ಅಜಿತ್ ವಾಡೇಕರ ನಿಧನರಾಗಿದ್ದಾರೆ.
1966ರಿಂದ 1974 ಭಾರತ ತಂಡದಲ್ಲಿ ಆಡಿದ ಅವಧಿ
ಇವರು ಕಾಯಂ ಸದಸ್ಯರಾಗಿ ತಂಡದ ನಾಯಕನಾಗಿ ತರಬೇತುದಾರನಾಗಿ ಆಯ್ಕೆ ಸಮಿತಿ ಸದಸ್ಯರಾಗಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
2. ಇತ್ತೀಚೆಗೆ ನಿಧನರಾದ ಚೆಮ್ಮನಮ್ ಚಾಕೊ ಕೆಳಗಿನ ಯಾವ ರಾಜ್ಯದವರು?
1. ಕೇರಳ
2. ಕರ್ನಾಟಕ
3. ಮಹಾರಾಷ್ಟ್ರ
4. ತಮಿಳುನಾಡು
Correct Answer: option1
Justification: ಮಲಯಾಳುನ ಹೆಸರಾಂತ ಕವಿ ಚೆಮ್ಮನಮ್ ಚಾಕೊ ನಿಧನರಾದರು. ಕೇರಳ ಸಮಕಾಲಿನ ಸಮಾಜಿಕ ರಾಜಕೀಯ ವಿಚಾರಗಳಿಗೆ ಚಾಕೊ ತಮ್ಮ ಕಡಿತೆಗಳ ಮೂಲಕ ತೀಕ್ಷಣವಾಗಿ ಪ್ರತಿ ಕ್ರಿಯಿಸುತ್ತಿದ್ದರು.
3. ಬೆಂಗಳೂರು FC ತಂಡದ ಒಡೆತನ ಹೊಂದಿರುವ JSW ಸ್ಟಿಲ್ಸ್ ಲಿ. ಸಂಸ್ಥೆಯು , ಸಂಪೂರ್ಣ ಖಾಸಗಿ ಮಾಲೀಕತ್ವದ ಕ್ರೀಡಾ ತರಬೇತಿ ಸಂಸ್ಥೆಯನ್ನು ಕೆಳಗಿನ ಯಾವ ಜಿಲ್ಲೆಯಲ್ಲಿ ಪ್ರಾರಂಭಿಸಿದೆ.
1. ಬೆಂಗಳೂರು ನಗರ
2. ಮೈಸೂರು
3. ಬಳ್ಳಾರಿ
4. ಶಿವಮೊಗ್ಗ
Correct Answer: option3
Justification: ಬೆಂಗಳೂರು FC ತಂಡದ ಒಡೆತನ ಹೊಂದಿರುವ JSW ಸ್ಟೀಲ್ಸ್‍ಲಿ. ಸಂಸ್ಥೆಯು ಸಂಪೂರ್ಣ ಖಾಸಗಿ ಮಾಲಿಕತ್ವದ ಕ್ರೀಡಾ ತರಬೇತಿ ಸಂಸ್ಥೆಯನ್ನು ಬಳ್ಳಾರಿಯ ವಿಜಯನಗರದಲ್ಲಿ ಆರಂಭಿಸಿದ JSW ಸಮೂಹ ಸಂಸ್ಥೆಯು ತನ್ನ CSR (ಕಾಪೋರೆಟ್ ಸೋಷಿಯಲ್ ರೆಸ್ಟಾನ್ಸಿಬೀಲಿಟಿ) ನಿಧಿಯಿದ ನಿರ್ಮಿಸಿದೆ.
4. ಇತ್ತೀಚೆಗೆ ಫಾರ್ಮುಲಾ- 1 ವಿಶ್ವ ಚಾಂಪಿಯನ ಫರ್ನಾಂಡೊ ಅಲಾನ್ಸೊ ನಿವೃತ್ತಿ ಘೋಷಿದ್ದಾರೆ. ಇವರು ಕೆಳಗಿನ ಯಾವ ರಾಷ್ಟ್ರದವರು?
1. ಫ್ರಾನ್ಸ್
2. ಸ್ಪೇನ್
3. ಜರ್ಮನಿ
4. ಅಮೇರಿಕಾ
Correct Answer: option2
Justification: ಎರಡು ಬಾರಿಯ ಫಾರ್ಮುಲಾ-1 ವಿಶ್ವ ಚಾಂಪಿಯನ್ ಸ್ಟೇನನ ಅನುಭವಿ ಚಾಲಕ ಫರ್ನಾಂಡೆ ಅಲಾನ್ಸೊ ಪ್ರಸಕ್ತ ಸಾಲಿನ ರೇಸಗಳ ಮುಕ್ತಾಯದೊಂದಿಗೆ ಈ-1 ವೃತ್ತಿ ಬದುಕಿನಿಂದ ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದಾರೆ.
5. ಈ ಕೆಳಗಿನ ಯಾವ ಕರ್ನಾಟಕದ ತಜ್ಞರಿಗೆ ರಾಷ್ಟ್ರಪತಿ ಗೌರವ ಪ್ರಮಾಣ ಪತ್ರ ಹಾಗೂ ಮಹರ್ಷಿ ಬಾದರಾಯಣ ವ್ಯಾಸ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ?
1. ಡಾ. ಚಿದಾನದಂದ ಮಾರ್ತಿ 2. ಶೆಟ್ಟರ್
3. ಡಾ.ಟಿ.ವಿ. ವೆಂಕಟಾಚಾಲ ಶಾಸ್ತ್ರಿ 4. ಡಿ. ಮುಂಜುನಾಥ
1. 1ಮತ್ತು 2
2. 1 ಮಾತ್ರ
3. 1,2, ಮತ್ತು 3
4. ಮೇಲಿನ ಎಲ್ಲವು
Correct Answer: option4
Justification: ಖ್ಯಾತ ಸಂಶೋಧನ ಡಾ.ಚಿದಾನಂದ ಮೂರ್ತಿ ಸೇರಿ ಕರ್ನಾಟಕದ 6 ತಜ್ಞರಿಗೆ ರಾಷ್ಟಪತಿ ಗೌರವ ಪ್ರಮಾಣಪತ್ರ ಹಾಗೂ ಮಹರ್ಷಿ ಬಾದಾರಾಯಣ ವ್ಯಾಸ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ.
ಶಾಸ್ತ್ರೀಯ ಕನ್ನಡ ವಿಭಾಗದಲ್ಲಿ ಡಾ.ಚಿದಾನಂದ ಮೂರ್ತಿ ಅವರಿಗೆ 2018ನೇ ಸಾಲಿನ ರಾಷ್ಟ್ರಪತಿ ಗೌರವ ಪ್ರಮಾಣಪತ್ರ ಘೋಷಿಸಿದೆ.
2016 ಹಾಗೂ 2017ನೇ ಸಾಲಿನಲ್ಲಿ ಇದೇ ಪ್ರಶಸ್ತಿಯನ್ನು ಕ್ರಮವಾಗಿ ಪೋ.ಎಸ್. ಶೆಟ್ಟರ್ ಹಾಗೂ ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿ ಅವರಿಗೆ ಪ್ರಧಾನ ಮಡಲಾಗುತ್ತದೆ. 2016ನೇ ಸಾಲಿನ ಮಹರ್ಷಿ ಬಾದರಾಯಣ ವ್ಯಾಸ ಪ್ರಶಸ್ತಿಯನ್ನು ಡಿ. ಮಂಜುನಾಥ ಅವರಿಗೆ ನೀಡಲು ನಿರ್ಧರಿಸಲಾಗುತ್ತದೆ. 2017ನೇ ಸಾಲಿನ ಸಂಸ್ಕೃತ ಭಾಷೆಯ ರಾಷ್ಟ್ರಪತಿ ಗೌರವ ಪ್ರಮಾನ ಪತ್ರವು ಭುವನಗಿರಿ ಆನಂತ ಶರ್ಮಾ 2018ನೇ ಸಾಲಿನಲ್ಲಿ ವಿನಾಯಕ ಉಡುಪಗೆ ಪ್ರಾಪ್ತವಾಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....