ಭರತ್ರಾಜ್ ಸೊರಕೆ ಮಂಗಳೂರು
ಎಲ್ಲೆಲ್ಲಿ ಮಿಂಚು ಬರುವ ಸಾಧ್ಯತೆ ಇದೆ, ಯಾವ ಪ್ರದೇಶದಲ್ಲಿ ಗುಡುಗು ಸಂಭವಿಸಬಹುದು ಎಂಬ ಭವಿಷ್ಯವೀಗ ಅಂಗೈನಲ್ಲೇ ಸಿಗಲಿದೆ.!
ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಿಡಿಲು ಎಂಬ ಮೊಬೈಲ್ ಆ್ಯಪ್ನಲ್ಲಿ ಮಿಂಚು, ಗುಡುಗು ಸಾಧ್ಯತೆಗಳ ಬಗ್ಗೆ ಕ್ಷಣ ಕ್ಷಣದ ಅಲರ್ಟ್ ಸಿಗುತ್ತಿದೆ. ಈ ತಂತ್ರಜ್ಞಾನ ಮೂಲಕ ಸಂಭವನೀಯ ಅಪಾಯದಿಂದ ತಪ್ಪಿಸಿಕೊಳ್ಳಬಹುದಾಗಿದೆ. ಮಳೆ ಅಲರ್ಟ್ ಬಗ್ಗೆ ತಿಳಿದುಕೊಳ್ಳುವಂತೆಯೇ ಸಿಡಿಲು ಆ್ಯಪ್ನಲ್ಲಿ ಸಿಡಿಲಿನ ಮುನ್ಸೂಚನೆ ಪಡೆಯಬಹುದು. ಹವಾಮಾನ ಸಂಬಂಧಿತ ನೈಸರ್ಗಿಕ ಅಪಾಯಗಳ ನಿರ್ವಹಣೆ, ಮುನ್ಸೂಚನೆ, ಸ್ಥಳಗಳ ಗುರುತಿಸುವಿಕೆ ‘ಸಿಡಿಲು’ ಆ್ಯಪ್ನಲ್ಲಿ ಸಾಧ್ಯ. ವಿಪತ್ತು ನಿರ್ವಹಣೆ ವಿಜ್ಞಾನ ಮತ್ತು ತಂತ್ರಜ್ಞಾನದ ಮಾಹಿತಿ ಮೇಲೆ ಹೆಚ್ಚು ಅವಲಂಬಿತವಾಗಿ ಇರುವುದರಿಂದ ರೈತರಿಗೆ, ಜನಸಾಮಾನ್ಯರಿಗೆ ಪೂರ್ವಭಾವಿ ಮಾಹಿತಿ ಒದಗಿಸುವ ವೇದಿಕೆಯಾಗಿ ಸಿಡಿಲು ಆ್ಯಪ್ ಕಾರ್ಯನಿರ್ವಹಿಸುತ್ತದೆ.
ಮೂರು ಭಾಷೆಗಳಲ್ಲಿ ಮಾಹಿತಿ: ಆ್ಯಪ್ನಲ್ಲಿ ಹಿಂದಿ, ಇಂಗ್ಲಿಷ್, ಕನ್ನಡ ಈ ಮೂರು ಭಾಷೆಗಳಲ್ಲಿ ಮಾಹಿತಿ ಪಡೆಯಬಹುದು. ಆ್ಯಪ್ಗೆ ಪ್ರವೇಶಿಸುತ್ತಿದ್ದಂತೆ ಮಿಂಚು, ಗುಡುಗು, ಮಳೆ ಮೂರು ವಿಭಾಗಗಳು ತೆರೆದುಕೊಳ್ಳುತ್ತವೆ. ಪ್ರತಿ ವಿಭಾಗದಲ್ಲಿ ನಾವಿರುವ 5.ಕಿ.ಮೀ. ಮತ್ತು 15 ಕಿ.ಮೀ. ವ್ಯಾಪ್ತಿಯಲ್ಲಿನ ಎಚ್ಚರಿಕೆಗಳು ಪ್ರದರ್ಶನವಾಗುತ್ತವೆ. ಅದಕ್ಕಿಂತ ಹೊರಗಿನ ಎಚ್ಚರಿಕೆಗಳು ಸಹ ಅಪ್ಡೇಟ್ ಆಗುತ್ತವೆ. ವಿವಿಧ ಬಣ್ಣಗಳ ಮೂಲಕ ಸಿಡಿಲಿನ ಅಪಾಯದ ಮಟ್ಟ ತಿಳಿಯಲು ಸಾಧ್ಯ. ಮಾಹಿತಿ ವಿಭಾಗದಲ್ಲಿ ಸಿಡಿಲಾಘಾತವಾದಾಗ ಕೈಗೊಳ್ಳಬೇಕಾದ ಚಿಕಿತ್ಸೆ ಕುರಿತು ಮಾಹಿತಿಗಳಿವೆ. ಆಂಡ್ರಾಯ್ಡಾ ಮೊಬೈಲ್ಗಳಲ್ಲಿ ಪ್ಲೇಸ್ಟೋರ್ಗೆ ಹೋಗಿ ಸಿಡಿಲು ಆ್ಯಪ್ ಡೌನ್ಲೋಡ್ ಹಾಕಬಹುದು. ಡೌನ್ಲೋಡ್ ಹಾಕಿದಾಕ್ಷಣ ವ್ಯಕ್ತಿಯ ಮೊಬೈಲ್ ನಂಬರ್ ಹಾಕುವಂತೆ ಸೂಚನೆ ಬರುತ್ತದೆ. ಈ ಸಂಖ್ಯೆಗೆ ಬರುವ ಒಟಿಪಿಯನ್ನು ಎಂಟ್ರಿ ಮಾಡುತ್ತಿದ್ದಂತೆ ಆ್ಯಪ್ ತೆರೆದುಕೊಳ್ಳುತ್ತದೆ. ಜಿಪಿಎಸ್ ಮತ್ತು ಇಂಟರ್ನೆಟ್ ಸಂಪರ್ಕ ಏರ್ಪಟ್ಟು ಆ್ಯಪ್ ಕೆಲಸ ನಿರ್ವಹಿಸುತ್ತದೆ.
ಕಾರ್ಯನಿರ್ವಹಣೆ ಹೇಗೆ?: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಿಡಿಲು ಮುನ್ಸೂಚನೆಯ ಸೆನ್ಸರ್ಗಳಿವೆ. ಇವುಗಳು ಒಂದು ಗಂಟೆ ಮೊದಲೇ ಮಾಹಿತಿ ಪಡೆದು ಮುಖ್ಯ ಕಚೇರಿಗೆ ಮಾಹಿತಿ ರವಾನಿಸುತ್ತದೆ. ಇಲ್ಲಿಂದ ಆ್ಯಪ್ಗೆ ಮಾಹಿತಿ ಅಪ್ಲೋಡ್ ಆಗುತ್ತದೆ. ಅರ್ಧ, ಮುಕ್ಕಾಲು ಗಂಟೆ ಮೊದಲೇ ಜನರಿಗೆ ಮಾಹಿತಿ ರವಾನೆಯಾಗುವುದರಿಂದ ಮುಂದಾಗುವ ಹೆಚ್ಚಿನ ಅಪಾಯದಿಂದ ತಪ್ಪಿಸಿಕೊಳ್ಳಲು ಸಾಧ್ಯ.
ಸಿಡಿಲಿನಿಂದಾಗುವ ಅಪಾಯದ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಸಿಡಿಲು ಆ್ಯಪ್ ರಚಿಸಲಾಗಿದೆ. ಯಾವ ಪ್ರದೇಶದಲ್ಲಿ ಸಿಡಿಲಾಘಾತ ಸಂಭವಿಸಬಹುದು ಎಂಬ ಮಾಹಿತಿ ಇದರಲ್ಲಿ ಆಗಿಂದಾಗ್ಗೆ ಅಪ್ಡೇಟ್ ಆಗುತ್ತದೆ. ರೈತರಿಗೆ, ಜನಸಾಮಾನ್ಯರಿಗೆ ಇದು ಅತ್ಯಂತ ಸಹಕಾರಿಯಾಗುವ ತಂತ್ರಜ್ಞಾನ.
| ಡಾ.ಎಸ್.ಎಸ್.ಎಂ.ಗಾವಸ್ಕರ್, ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ
ಎಲ್ಲೆಲ್ಲಿ ಮಿಂಚು ಬರುವ ಸಾಧ್ಯತೆ ಇದೆ, ಯಾವ ಪ್ರದೇಶದಲ್ಲಿ ಗುಡುಗು ಸಂಭವಿಸಬಹುದು ಎಂಬ ಭವಿಷ್ಯವೀಗ ಅಂಗೈನಲ್ಲೇ ಸಿಗಲಿದೆ.!
ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಿಡಿಲು ಎಂಬ ಮೊಬೈಲ್ ಆ್ಯಪ್ನಲ್ಲಿ ಮಿಂಚು, ಗುಡುಗು ಸಾಧ್ಯತೆಗಳ ಬಗ್ಗೆ ಕ್ಷಣ ಕ್ಷಣದ ಅಲರ್ಟ್ ಸಿಗುತ್ತಿದೆ. ಈ ತಂತ್ರಜ್ಞಾನ ಮೂಲಕ ಸಂಭವನೀಯ ಅಪಾಯದಿಂದ ತಪ್ಪಿಸಿಕೊಳ್ಳಬಹುದಾಗಿದೆ. ಮಳೆ ಅಲರ್ಟ್ ಬಗ್ಗೆ ತಿಳಿದುಕೊಳ್ಳುವಂತೆಯೇ ಸಿಡಿಲು ಆ್ಯಪ್ನಲ್ಲಿ ಸಿಡಿಲಿನ ಮುನ್ಸೂಚನೆ ಪಡೆಯಬಹುದು. ಹವಾಮಾನ ಸಂಬಂಧಿತ ನೈಸರ್ಗಿಕ ಅಪಾಯಗಳ ನಿರ್ವಹಣೆ, ಮುನ್ಸೂಚನೆ, ಸ್ಥಳಗಳ ಗುರುತಿಸುವಿಕೆ ‘ಸಿಡಿಲು’ ಆ್ಯಪ್ನಲ್ಲಿ ಸಾಧ್ಯ. ವಿಪತ್ತು ನಿರ್ವಹಣೆ ವಿಜ್ಞಾನ ಮತ್ತು ತಂತ್ರಜ್ಞಾನದ ಮಾಹಿತಿ ಮೇಲೆ ಹೆಚ್ಚು ಅವಲಂಬಿತವಾಗಿ ಇರುವುದರಿಂದ ರೈತರಿಗೆ, ಜನಸಾಮಾನ್ಯರಿಗೆ ಪೂರ್ವಭಾವಿ ಮಾಹಿತಿ ಒದಗಿಸುವ ವೇದಿಕೆಯಾಗಿ ಸಿಡಿಲು ಆ್ಯಪ್ ಕಾರ್ಯನಿರ್ವಹಿಸುತ್ತದೆ.
ಮೂರು ಭಾಷೆಗಳಲ್ಲಿ ಮಾಹಿತಿ: ಆ್ಯಪ್ನಲ್ಲಿ ಹಿಂದಿ, ಇಂಗ್ಲಿಷ್, ಕನ್ನಡ ಈ ಮೂರು ಭಾಷೆಗಳಲ್ಲಿ ಮಾಹಿತಿ ಪಡೆಯಬಹುದು. ಆ್ಯಪ್ಗೆ ಪ್ರವೇಶಿಸುತ್ತಿದ್ದಂತೆ ಮಿಂಚು, ಗುಡುಗು, ಮಳೆ ಮೂರು ವಿಭಾಗಗಳು ತೆರೆದುಕೊಳ್ಳುತ್ತವೆ. ಪ್ರತಿ ವಿಭಾಗದಲ್ಲಿ ನಾವಿರುವ 5.ಕಿ.ಮೀ. ಮತ್ತು 15 ಕಿ.ಮೀ. ವ್ಯಾಪ್ತಿಯಲ್ಲಿನ ಎಚ್ಚರಿಕೆಗಳು ಪ್ರದರ್ಶನವಾಗುತ್ತವೆ. ಅದಕ್ಕಿಂತ ಹೊರಗಿನ ಎಚ್ಚರಿಕೆಗಳು ಸಹ ಅಪ್ಡೇಟ್ ಆಗುತ್ತವೆ. ವಿವಿಧ ಬಣ್ಣಗಳ ಮೂಲಕ ಸಿಡಿಲಿನ ಅಪಾಯದ ಮಟ್ಟ ತಿಳಿಯಲು ಸಾಧ್ಯ. ಮಾಹಿತಿ ವಿಭಾಗದಲ್ಲಿ ಸಿಡಿಲಾಘಾತವಾದಾಗ ಕೈಗೊಳ್ಳಬೇಕಾದ ಚಿಕಿತ್ಸೆ ಕುರಿತು ಮಾಹಿತಿಗಳಿವೆ. ಆಂಡ್ರಾಯ್ಡಾ ಮೊಬೈಲ್ಗಳಲ್ಲಿ ಪ್ಲೇಸ್ಟೋರ್ಗೆ ಹೋಗಿ ಸಿಡಿಲು ಆ್ಯಪ್ ಡೌನ್ಲೋಡ್ ಹಾಕಬಹುದು. ಡೌನ್ಲೋಡ್ ಹಾಕಿದಾಕ್ಷಣ ವ್ಯಕ್ತಿಯ ಮೊಬೈಲ್ ನಂಬರ್ ಹಾಕುವಂತೆ ಸೂಚನೆ ಬರುತ್ತದೆ. ಈ ಸಂಖ್ಯೆಗೆ ಬರುವ ಒಟಿಪಿಯನ್ನು ಎಂಟ್ರಿ ಮಾಡುತ್ತಿದ್ದಂತೆ ಆ್ಯಪ್ ತೆರೆದುಕೊಳ್ಳುತ್ತದೆ. ಜಿಪಿಎಸ್ ಮತ್ತು ಇಂಟರ್ನೆಟ್ ಸಂಪರ್ಕ ಏರ್ಪಟ್ಟು ಆ್ಯಪ್ ಕೆಲಸ ನಿರ್ವಹಿಸುತ್ತದೆ.
ಕಾರ್ಯನಿರ್ವಹಣೆ ಹೇಗೆ?: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಿಡಿಲು ಮುನ್ಸೂಚನೆಯ ಸೆನ್ಸರ್ಗಳಿವೆ. ಇವುಗಳು ಒಂದು ಗಂಟೆ ಮೊದಲೇ ಮಾಹಿತಿ ಪಡೆದು ಮುಖ್ಯ ಕಚೇರಿಗೆ ಮಾಹಿತಿ ರವಾನಿಸುತ್ತದೆ. ಇಲ್ಲಿಂದ ಆ್ಯಪ್ಗೆ ಮಾಹಿತಿ ಅಪ್ಲೋಡ್ ಆಗುತ್ತದೆ. ಅರ್ಧ, ಮುಕ್ಕಾಲು ಗಂಟೆ ಮೊದಲೇ ಜನರಿಗೆ ಮಾಹಿತಿ ರವಾನೆಯಾಗುವುದರಿಂದ ಮುಂದಾಗುವ ಹೆಚ್ಚಿನ ಅಪಾಯದಿಂದ ತಪ್ಪಿಸಿಕೊಳ್ಳಲು ಸಾಧ್ಯ.
ಸಿಡಿಲಿನಿಂದಾಗುವ ಅಪಾಯದ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಸಿಡಿಲು ಆ್ಯಪ್ ರಚಿಸಲಾಗಿದೆ. ಯಾವ ಪ್ರದೇಶದಲ್ಲಿ ಸಿಡಿಲಾಘಾತ ಸಂಭವಿಸಬಹುದು ಎಂಬ ಮಾಹಿತಿ ಇದರಲ್ಲಿ ಆಗಿಂದಾಗ್ಗೆ ಅಪ್ಡೇಟ್ ಆಗುತ್ತದೆ. ರೈತರಿಗೆ, ಜನಸಾಮಾನ್ಯರಿಗೆ ಇದು ಅತ್ಯಂತ ಸಹಕಾರಿಯಾಗುವ ತಂತ್ರಜ್ಞಾನ.
| ಡಾ.ಎಸ್.ಎಸ್.ಎಂ.ಗಾವಸ್ಕರ್, ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ