80 ದಶಕದಲ್ಲಿ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ವೇಳೆ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ್ದ ಬೊಫೋರ್ಸ್ ಫಿರಂಗಿ ಖರೀದಿ ಹಗರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಅ. 12ರಂದು ವಿಚಾರಣೆ ಆರಂಭಿಸಲಿದೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಇತರರನ್ನು ದೆಹಲಿ ಹೈಕೋರ್ಟ್ 2004ರ ಫೆಬ್ರುವರಿಯಲ್ಲಿ ದೋಷಮುಕ್ತ ಗೊಳಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಮೇಲ್ಮನವಿ ವಿಚಾರಣೆಯನ್ನು ಸುಪ್ರೀಂAಕೋರ್ಟ್ ನಡೆಸಲಿದೆ. ದೆಹಲಿ ಹೈಕೋರ್ಟ್ ತೀರ್ಪು ನೀಡಿದ 14 ವರ್ಷಗಳ ನಂತರ ಈ ಪ್ರಕರಣ ಮತ್ತೆ ಕೋರ್ಟ್ ಮುಂದೆ ಬರುತ್ತಿದೆ.
ಆರೋಪಿಗಳಾದ ಹಿಂದುಜಾ ಸೋದರರ ವಿರುದ್ಧ ಪುರಾವೆಗಳು ದೊರೆತಿವೆ. ಆದ್ದರಿಂದ ಮೇಲ್ಮನವಿ ವಿಚಾರಣೆಯನ್ನು ಶೀಘ್ರ ಆರಂಭಿಸಬೇಕು ಎಂದು ಸಿಬಿಐ ಕೋರಿತ್ತು. ಬ್ರಿಟನ್ ಉದ್ಯಮಿಗಳಾದ ಶ್ರೀಚಂದ್, ಗೋಪಿಚಂದ್ ಮತ್ತು ಪ್ರಕಾಶ್ ಚಂದ್ ಹಿಂದುಜಾ ಸೋದರರ ಮೂಲಕ ಆಗಿನ ಪ್ರಧಾನಿ ರಾಜೀವ್ ಗಾಂಧಿಗೆ ಕಿಕ್ಬ್ಯಾಕ್ (ಲಂಚ) ನೀಡಲಾಗಿತ್ತು ಎಂದು ಆರೋಪಿಸಲಾಗಿದೆ.
ಸಿಬಿಐ ತಡೆದಿದ್ದ ಕಾಂಗ್ರೆಸ್: ದೆಹಲಿ ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಆಗ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ಅವಕಾಶ ನೀಡಿರಲಿಲ್ಲ. ಹೀಗಾಗಿ ಮೇಲ್ಮನವಿ ಸಲ್ಲಿಸಿರಲಿಲ್ಲ ಎಂದು ಸಿಬಿಐ ಹೇಳಿಕೊಂಡಿದೆ. ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳ ನಂತರ, ಅಂದರೆ ಕಳೆದ ಫೆಬ್ರುವರಿಯಲ್ಲಿ ಸಿಬಿಐ ಮೇಲ್ಮನವಿ ಸಲ್ಲಿಸಿತ್ತು.
ಹಗರಣದ ಹಿನ್ನೆಲೆ: 1986ರಲ್ಲಿ ಸ್ವೀಡನ್ನ ಸೇನಾ ಶಸ್ತ್ರ ತಯಾರಿಕಾ ಕಂಪನಿ ಎಬಿ ಬೊಫೋರ್ಸ್ನಿಂದ 155 ಎಂಎಂನ 410 ಬೊಫೋರ್ಸ್ ಫಿರಂಗಿಗಳನ್ನು ಭಾರತ ಖರೀದಿಸಿತ್ತು. ಇದು ಆಗಿನ ಕಾಲದಲ್ಲಿ ಸ್ವೀಡನ್ಗೆ ಲಭಿಸಿದ ಅತಿ ದೊಡ್ಡ ರಕ್ಷಣಾ ಸಲಕರಣೆ ಪೂರೈಕೆ ಒಪ್ಪಂದ ಆಗಿತ್ತು. ಎಬಿ ಬೊಫೋರ್ಸ್ ಕಂಪನಿ ಭಾರತ ಮತ್ತು ಸ್ವೀಡನ್ ಸರ್ಕಾರಗಳ ಪ್ರಮುಖರಿಗೆ ಲಂಚ (ಕಿಕ್ಬ್ಯಾಕ್) ನೀಡಿ, ಈ ಗುತ್ತಿಗೆ ಪಡೆದಿತ್ತು ಎಂಬ ವಿಚಾರ ಬೆಳಕಿಗೆ ಬಂದಿತ್ತು. ಭಾರತದ ಆಗಿನ ಪ್ರಧಾನಿ ರಾಜೀವ್ ಗಾಂಧಿ, ಹಿಂದುಜಾ ಸೋದರರು ಸೇರಿ ಇನ್ನಿತರರಿಗೆ -ಠಿ; 64 ಕೋಟಿ ಸಂದಾಯವಾಗಿದೆ ಎಂಬುದು ಹಗರಣದ ತಿರುಳು. ರಾಜೀವ್ ಗಾಂಧಿ ಕುಟುಂಬಕ್ಕೆ ಆಪ್ತರಾಗಿದ್ದ ಇಟಲಿ ಮೂಲದ ವ್ಯಾಪಾರಸ್ಥ ಒಟ್ಟಾವಿಯೋ ಕ್ವಾಟ್ರೋಚಿ ಒಪ್ಪಂದದ ಮಧ್ಯವರ್ತಿಯಾಗಿದ್ದವರು. ಇವರ ಮೂಲಕ ಭಾರತದ ಪ್ರಮುಖರಿಗೆ ಕಿಕ್ಬ್ಯಾಕ್ ಸಂದಾಯವಾಗಿತ್ತು ಎಂದು ಆರೋಪಿಸಲಾಗಿತ್ತು.
2004ರ ತೀರ್ಪು ಏನಿತ್ತು..?
ಹಿಂದುಜಾ ಸೋದರರು ಲಂಚ ನೀಡಿದ್ದಾರೆಂಬ ಆರೋಪವನ್ನು ಸಾಬೀತು ಪಡಿಸಲು ತನಿಖಾ ಸಂಸ್ಥೆ ವಿಫಲವಾಗಿದೆ. ಆದ್ದರಿಂದ ಆರೋಪಿಗಳನ್ನು ದೋಷಮುಕ್ತಗೊಳಿಸಲಾಗಿದೆ ಎಂದು ದೆಹಲಿ ಹೈಕೋರ್ಟ್ 2004ರ ತೀರ್ಪಿನಲ್ಲಿ ಹೇಳಿತ್ತು. ಈ ತೀರ್ಪನ್ನು ಪ್ರಶ್ನಿಸಿ ವಕೀಲ ಅಜಯ್ ಅಗರ್ವಾಲ್ ಅರ್ಜಿ ಸಲ್ಲಿಸಿದ್ದರು. ಅಗರ್ವಾಲ್ 2014ರ ಚುನಾವಣೆಯಲ್ಲಿ ರಾಯ್ ಬರೇಲಿ ಕ್ಷೇತ್ರದಲ್ಲಿ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸಿದ್ದರು.
ಚುನಾವಣಾ ವಿಷಯ
ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಘೋಷಣೆಯಾದ ಬೆನ್ನಿಗೆ ಬೊಫೋರ್ಸ್ ಹಗರಣದ ಮೇಲ್ಮನವಿ ವಿಚಾರಣೆಗೆ ಬರುತ್ತಿರುವುದು ರಾಜಕೀಯ ಮಹತ್ವ ಪಡೆದುಕೊಂಡಿದೆ. ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಗೆ ಇದು ಪ್ರಮುಖ ವಿಷಯವಾಗುವ ಸಾಧ್ಯತೆ ಇದೆ. ಕಾಂಗ್ರೆಸ್ ನಾಯಕರು ರಫೇಲ್ ಪ್ರಕರಣವನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತಿದ್ದು, ಇದಕ್ಕೆ ಪ್ರತಿಯಾಗಿ ಬಿಜೆಪಿಯವರು ಬೊಫೋರ್ಸ್ ಮೇಲ್ಮನವಿ ವಿಚಾರಣೆ ವಿಚಾರ ಮುಂದಿಟ್ಟುಕೊಂಡು ವಾಗ್ದಾಳಿ ನಡೆಸುವ ಸಾಧ್ಯತೆಯಿದೆ. ಬೊಫೋರ್ಸ್ ಹಗರಣದ ಪರಿಣಾಮ 1989ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು.
ತನಿಖೆ ಹಾದಿ
ಪ್ರಕರಣ ತನಿಖೆ ನಡೆಸಿದ ಸಿಬಿಐ, 1999ರ ಅಕ್ಟೋಬರ್ನಲ್ಲಿ ಮೊದಲ ಆರೋಪ ಪಟ್ಟಿ ಸಲ್ಲಿಸಿತು. ಇದರಲ್ಲಿ ಕ್ವಾಟ್ರೋಚಿ, ಹಿಂದುಜಾ ಸೋದರರು, ವಿನ್ ಛಡ್ಡಾ, ರಾಜೀವ್ ಗಾಂಧಿ, ರಕ್ಷಣಾ ಕಾರ್ಯದರ್ಶಿ ಎಸ್.ಕೆ.ಭಟ್ನಾಗರ್ ಮತ್ತು ಇತರರನ್ನು ಹೆಸರಿಸಲಾಗಿತ್ತು. 2001ರಲ್ಲಿ ವಿನ್ ಛಡ್ಡಾ ಮತ್ತು ಭಟ್ನಾಗಾರ್ ಮೃತಪಟ್ಟರು. ಸಿಬಿಐ ಆರೋಪ ಪಟ್ಟಿ ಸಲ್ಲಿಸುವುದಕ್ಕೂ 8 ವರ್ಷ (1991ರ ಮೇ) ಮೊದಲು ಎಲ್ಟಿಟಿಇ ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ರಾಜೀವ್ ಗಾಂಧಿ ಹತ್ಯೆಗೀಡಾಗಿದ್ದರು.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಇತರರನ್ನು ದೆಹಲಿ ಹೈಕೋರ್ಟ್ 2004ರ ಫೆಬ್ರುವರಿಯಲ್ಲಿ ದೋಷಮುಕ್ತ ಗೊಳಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಮೇಲ್ಮನವಿ ವಿಚಾರಣೆಯನ್ನು ಸುಪ್ರೀಂAಕೋರ್ಟ್ ನಡೆಸಲಿದೆ. ದೆಹಲಿ ಹೈಕೋರ್ಟ್ ತೀರ್ಪು ನೀಡಿದ 14 ವರ್ಷಗಳ ನಂತರ ಈ ಪ್ರಕರಣ ಮತ್ತೆ ಕೋರ್ಟ್ ಮುಂದೆ ಬರುತ್ತಿದೆ.
ಆರೋಪಿಗಳಾದ ಹಿಂದುಜಾ ಸೋದರರ ವಿರುದ್ಧ ಪುರಾವೆಗಳು ದೊರೆತಿವೆ. ಆದ್ದರಿಂದ ಮೇಲ್ಮನವಿ ವಿಚಾರಣೆಯನ್ನು ಶೀಘ್ರ ಆರಂಭಿಸಬೇಕು ಎಂದು ಸಿಬಿಐ ಕೋರಿತ್ತು. ಬ್ರಿಟನ್ ಉದ್ಯಮಿಗಳಾದ ಶ್ರೀಚಂದ್, ಗೋಪಿಚಂದ್ ಮತ್ತು ಪ್ರಕಾಶ್ ಚಂದ್ ಹಿಂದುಜಾ ಸೋದರರ ಮೂಲಕ ಆಗಿನ ಪ್ರಧಾನಿ ರಾಜೀವ್ ಗಾಂಧಿಗೆ ಕಿಕ್ಬ್ಯಾಕ್ (ಲಂಚ) ನೀಡಲಾಗಿತ್ತು ಎಂದು ಆರೋಪಿಸಲಾಗಿದೆ.
ಸಿಬಿಐ ತಡೆದಿದ್ದ ಕಾಂಗ್ರೆಸ್: ದೆಹಲಿ ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಆಗ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ಅವಕಾಶ ನೀಡಿರಲಿಲ್ಲ. ಹೀಗಾಗಿ ಮೇಲ್ಮನವಿ ಸಲ್ಲಿಸಿರಲಿಲ್ಲ ಎಂದು ಸಿಬಿಐ ಹೇಳಿಕೊಂಡಿದೆ. ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳ ನಂತರ, ಅಂದರೆ ಕಳೆದ ಫೆಬ್ರುವರಿಯಲ್ಲಿ ಸಿಬಿಐ ಮೇಲ್ಮನವಿ ಸಲ್ಲಿಸಿತ್ತು.
ಹಗರಣದ ಹಿನ್ನೆಲೆ: 1986ರಲ್ಲಿ ಸ್ವೀಡನ್ನ ಸೇನಾ ಶಸ್ತ್ರ ತಯಾರಿಕಾ ಕಂಪನಿ ಎಬಿ ಬೊಫೋರ್ಸ್ನಿಂದ 155 ಎಂಎಂನ 410 ಬೊಫೋರ್ಸ್ ಫಿರಂಗಿಗಳನ್ನು ಭಾರತ ಖರೀದಿಸಿತ್ತು. ಇದು ಆಗಿನ ಕಾಲದಲ್ಲಿ ಸ್ವೀಡನ್ಗೆ ಲಭಿಸಿದ ಅತಿ ದೊಡ್ಡ ರಕ್ಷಣಾ ಸಲಕರಣೆ ಪೂರೈಕೆ ಒಪ್ಪಂದ ಆಗಿತ್ತು. ಎಬಿ ಬೊಫೋರ್ಸ್ ಕಂಪನಿ ಭಾರತ ಮತ್ತು ಸ್ವೀಡನ್ ಸರ್ಕಾರಗಳ ಪ್ರಮುಖರಿಗೆ ಲಂಚ (ಕಿಕ್ಬ್ಯಾಕ್) ನೀಡಿ, ಈ ಗುತ್ತಿಗೆ ಪಡೆದಿತ್ತು ಎಂಬ ವಿಚಾರ ಬೆಳಕಿಗೆ ಬಂದಿತ್ತು. ಭಾರತದ ಆಗಿನ ಪ್ರಧಾನಿ ರಾಜೀವ್ ಗಾಂಧಿ, ಹಿಂದುಜಾ ಸೋದರರು ಸೇರಿ ಇನ್ನಿತರರಿಗೆ -ಠಿ; 64 ಕೋಟಿ ಸಂದಾಯವಾಗಿದೆ ಎಂಬುದು ಹಗರಣದ ತಿರುಳು. ರಾಜೀವ್ ಗಾಂಧಿ ಕುಟುಂಬಕ್ಕೆ ಆಪ್ತರಾಗಿದ್ದ ಇಟಲಿ ಮೂಲದ ವ್ಯಾಪಾರಸ್ಥ ಒಟ್ಟಾವಿಯೋ ಕ್ವಾಟ್ರೋಚಿ ಒಪ್ಪಂದದ ಮಧ್ಯವರ್ತಿಯಾಗಿದ್ದವರು. ಇವರ ಮೂಲಕ ಭಾರತದ ಪ್ರಮುಖರಿಗೆ ಕಿಕ್ಬ್ಯಾಕ್ ಸಂದಾಯವಾಗಿತ್ತು ಎಂದು ಆರೋಪಿಸಲಾಗಿತ್ತು.
2004ರ ತೀರ್ಪು ಏನಿತ್ತು..?
ಹಿಂದುಜಾ ಸೋದರರು ಲಂಚ ನೀಡಿದ್ದಾರೆಂಬ ಆರೋಪವನ್ನು ಸಾಬೀತು ಪಡಿಸಲು ತನಿಖಾ ಸಂಸ್ಥೆ ವಿಫಲವಾಗಿದೆ. ಆದ್ದರಿಂದ ಆರೋಪಿಗಳನ್ನು ದೋಷಮುಕ್ತಗೊಳಿಸಲಾಗಿದೆ ಎಂದು ದೆಹಲಿ ಹೈಕೋರ್ಟ್ 2004ರ ತೀರ್ಪಿನಲ್ಲಿ ಹೇಳಿತ್ತು. ಈ ತೀರ್ಪನ್ನು ಪ್ರಶ್ನಿಸಿ ವಕೀಲ ಅಜಯ್ ಅಗರ್ವಾಲ್ ಅರ್ಜಿ ಸಲ್ಲಿಸಿದ್ದರು. ಅಗರ್ವಾಲ್ 2014ರ ಚುನಾವಣೆಯಲ್ಲಿ ರಾಯ್ ಬರೇಲಿ ಕ್ಷೇತ್ರದಲ್ಲಿ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸಿದ್ದರು.
ಚುನಾವಣಾ ವಿಷಯ
ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಘೋಷಣೆಯಾದ ಬೆನ್ನಿಗೆ ಬೊಫೋರ್ಸ್ ಹಗರಣದ ಮೇಲ್ಮನವಿ ವಿಚಾರಣೆಗೆ ಬರುತ್ತಿರುವುದು ರಾಜಕೀಯ ಮಹತ್ವ ಪಡೆದುಕೊಂಡಿದೆ. ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಗೆ ಇದು ಪ್ರಮುಖ ವಿಷಯವಾಗುವ ಸಾಧ್ಯತೆ ಇದೆ. ಕಾಂಗ್ರೆಸ್ ನಾಯಕರು ರಫೇಲ್ ಪ್ರಕರಣವನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತಿದ್ದು, ಇದಕ್ಕೆ ಪ್ರತಿಯಾಗಿ ಬಿಜೆಪಿಯವರು ಬೊಫೋರ್ಸ್ ಮೇಲ್ಮನವಿ ವಿಚಾರಣೆ ವಿಚಾರ ಮುಂದಿಟ್ಟುಕೊಂಡು ವಾಗ್ದಾಳಿ ನಡೆಸುವ ಸಾಧ್ಯತೆಯಿದೆ. ಬೊಫೋರ್ಸ್ ಹಗರಣದ ಪರಿಣಾಮ 1989ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು.
ತನಿಖೆ ಹಾದಿ
ಪ್ರಕರಣ ತನಿಖೆ ನಡೆಸಿದ ಸಿಬಿಐ, 1999ರ ಅಕ್ಟೋಬರ್ನಲ್ಲಿ ಮೊದಲ ಆರೋಪ ಪಟ್ಟಿ ಸಲ್ಲಿಸಿತು. ಇದರಲ್ಲಿ ಕ್ವಾಟ್ರೋಚಿ, ಹಿಂದುಜಾ ಸೋದರರು, ವಿನ್ ಛಡ್ಡಾ, ರಾಜೀವ್ ಗಾಂಧಿ, ರಕ್ಷಣಾ ಕಾರ್ಯದರ್ಶಿ ಎಸ್.ಕೆ.ಭಟ್ನಾಗರ್ ಮತ್ತು ಇತರರನ್ನು ಹೆಸರಿಸಲಾಗಿತ್ತು. 2001ರಲ್ಲಿ ವಿನ್ ಛಡ್ಡಾ ಮತ್ತು ಭಟ್ನಾಗಾರ್ ಮೃತಪಟ್ಟರು. ಸಿಬಿಐ ಆರೋಪ ಪಟ್ಟಿ ಸಲ್ಲಿಸುವುದಕ್ಕೂ 8 ವರ್ಷ (1991ರ ಮೇ) ಮೊದಲು ಎಲ್ಟಿಟಿಇ ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ರಾಜೀವ್ ಗಾಂಧಿ ಹತ್ಯೆಗೀಡಾಗಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ