ದಿನಂಪ್ರತಿ ಏರುತ್ತಿರುವ ತೈಲ ದರವನ್ನು ನಿಯಂತ್ರಿಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಲೇ ಇದೆ. ಆದರೆ ಅಪಾರ ಪ್ರಮಾಣದ ತೆರಿಗೆ ಹಣ ಕೈತಪ್ಪುತ್ತದೆಂಬ ಕಾರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಬಗ್ಗೆ ಅರೆಮನಸ್ಸು ಹೊಂದಿದ್ದವು. ಹೀಗಿದ್ದರೂ, ಇನ್ನು ಒತ್ತಡ ತಡೆಯಲಾಗದು ಎನಿಸಿಯೋ ಏನೋ ಕೇಂದ್ರ ಸರ್ಕಾರ ತೈಲದ ಮೇಲಿನ ಅಬಕಾರಿ ಸುಂಕವನ್ನು ಒಂದೂವರೆ ರೂಪಾಯಿಯಷ್ಟು ತಗ್ಗಿಸಿದೆ ಮತ್ತು ಮಾರಾಟದ ಕಮಿಷನ್ನಲ್ಲಿ ಒಂದು ರೂಪಾಯಿ ಕಡಿಮೆ ಮಾಡುವಂತೆ ತೈಲ ಮಾರಾಟ ಕಂಪನಿಗಳಿಗೆ ಸೂಚಿಸಿದೆ. ಹೀಗಾಗಿ ಒಟ್ಟು ಎರಡೂವರೆ ರೂಪಾಯಿ ತಗ್ಗಿದಂತಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಿಂದ ಬಸವಳಿದಿರುವ ಜನರಿಗೆ ಇದು ಸ್ವಲ್ಪ ಸಮಾಧಾನದ ಸಂಗತಿಯಾದರೂ, ತೈಲ ದರದ ಮೇಲೆ ಬಾಹ್ಯ ಪರಿಣಾಮಗಳೂ ಇರುವುದರಿಂದ ಈ ಖುಷಿ ತಾತ್ಕಾಲಿಕ ಎನ್ನಬಹುದು. ತೈಲೋತ್ಪನ್ನಗಳ ಮೇಲೆ ಕೇಂದ್ರ ಮತ್ತು ಆಯಾ ರಾಜ್ಯ ಸರ್ಕಾರಗಳು ಬಗೆ ಬಗೆ ತೆರಿಗೆ ವಿಧಿಸುತ್ತವೆ. ಈಗ ಅಬಕಾರಿ ಸುಂಕ ತಗ್ಗಿಸಿರುವ ಕೇಂದ್ರ, ರಾಜ್ಯಗಳಿಗೂ ತೆರಿಗೆ ತಗ್ಗಿಸುವಂತೆ ಸಲಹೆ ಮಾಡಿದೆ. ಕೆಲ ರಾಜ್ಯಗಳು ಈ ಮನವಿಗೆ ಓಗೊಟ್ಟು ತೆರಿಗೆಯಲ್ಲಿ ಕಡಿತ ಮಾಡಿವೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ, ಅಂತಾರಾಷ್ಟ್ರೀಯ ಆರ್ಥಿಕ ರಂಗದ ಬೆಳವಣಿಗೆಗಳು ಮುಂತಾದ ಸಂಗತಿಗಳು ತೈಲ ದರದ ಮೇಲೆ ಪರಿಣಾಮ ಬೀರುತ್ತವೆ. ಇನ್ನೊಂದೆಡೆ, ಈಗ ಭಾರತದ ರೂಪಾಯಿ ದುರ್ಬಲವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿದರೆ ಇಲ್ಲಿಯೂ ಪೆಟ್ರೋಲ್, ಡೀಸೆಲ್ ದರ ಏರುತ್ತದೆ. ಹೀಗಾಗಿ ಈಗ ಸಿಕ್ಕಿರುವ ಬೆಲೆ ಇಳಿಕೆ ಸಮಾಧಾನ ಮುಂದೆಯೂ ಇರುತ್ತದೆ ಎನ್ನಲಾಗದು. ಆದ್ದರಿಂದ ಇಂಧನ ಅವಲಂಬನೆಯನ್ನು ಆದಷ್ಟು ತಗ್ಗಿಸುವುದು ಇದ್ದುದರಲ್ಲಿ ಕಾರ್ಯಸಾಧ್ಯ ಪರಿಹಾರವಾಗುತ್ತದೆ.
ಸಾರ್ವಜನಿಕ ಸಾರಿಗೆಗೆ ಮತ್ತಷ್ಟು ಒತ್ತು, ಎಥೆನಾಲ್ ಬಳಕೆಗೆ ಉತ್ತೇಜನ-ಪ್ರೋತ್ಸಾಹ ಮುಂತಾದ ಕ್ರಮಗಳ ಮೂಲಕ ಇಂಧನ ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರಗಳು ಮುಂದಡಿ ಇಡಬೇಕಾದುದು ಸದ್ಯದ ತುರ್ತ. ವಿದ್ಯುಚ್ಚಾಲಿತ ವಾಹನಗಳಿಗೆ ಕೇಂದ್ರ ಸರ್ಕಾರ ಈಗಾಗಲೇ ಕೆಲ ರಿಯಾಯಿತಿ ಪ್ರಕಟಿಸಿರುವುದು ಗಮನಾರ್ಹ. ಆದರೆ ಚಾರ್ಜಿಂಗ್ ಸ್ಟೇಷನ್ಗಳ ಕೊರತೆಯಿಂದಾಗಿ ಇ-ವಾಹನಗಳು ನಿರೀಕ್ಷೆಯಷ್ಟು ರಸ್ತೆಗಿಳಿಯುತ್ತಿಲ್ಲ. ಇ-ವಾಹನಗಳು ದೊಡ್ಡ ಸಂಖ್ಯೆಯಲ್ಲಿ ಬಂದರೆ ವಿದ್ಯುತ್ ಉತ್ಪಾದನೆಯೂ ಹೆಚ್ಚಬೇಕಾಗುತ್ತದೆ. 2030ರ ವೇಳೆಗೆ, ಭಾರತಕ್ಕೆ ಅಗತ್ಯವಾದ ಶೇ.40 ವಿದ್ಯುತ್ತನ್ನು ನವೀಕರಿಸಬಹುದಾದ ಇಂಧನ ಮೂಲಗಳಿಂದಲೇ ಉತ್ಪಾದಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿರುವುದು ಗಮನಾರ್ಹ. ಸದ್ಯ ಭಾರತ ಇಂಧನ ಆಮದಿಗಾಗಿ ವಾರ್ಷಿಕ ಸುಮಾರು 5 ಲಕ್ಷ ಕೋಟಿ ರೂ.ಗಳನ್ನು ತೆರುತ್ತಿದೆ. ಮತ್ತೊಂದೆಡೆ, ಸಾರ್ವಜನಿಕರು ಸಹ ಇಂಧನ ಬಳಕೆಗೆ ಸ್ವಯಂನಿಯಂತ್ರಣ ವಿಧಿಸಿಕೊಳ್ಳುವತ್ತ ಆಲೋಚಿಸಬೇಕು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ, ಅಂತಾರಾಷ್ಟ್ರೀಯ ಆರ್ಥಿಕ ರಂಗದ ಬೆಳವಣಿಗೆಗಳು ಮುಂತಾದ ಸಂಗತಿಗಳು ತೈಲ ದರದ ಮೇಲೆ ಪರಿಣಾಮ ಬೀರುತ್ತವೆ. ಇನ್ನೊಂದೆಡೆ, ಈಗ ಭಾರತದ ರೂಪಾಯಿ ದುರ್ಬಲವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿದರೆ ಇಲ್ಲಿಯೂ ಪೆಟ್ರೋಲ್, ಡೀಸೆಲ್ ದರ ಏರುತ್ತದೆ. ಹೀಗಾಗಿ ಈಗ ಸಿಕ್ಕಿರುವ ಬೆಲೆ ಇಳಿಕೆ ಸಮಾಧಾನ ಮುಂದೆಯೂ ಇರುತ್ತದೆ ಎನ್ನಲಾಗದು. ಆದ್ದರಿಂದ ಇಂಧನ ಅವಲಂಬನೆಯನ್ನು ಆದಷ್ಟು ತಗ್ಗಿಸುವುದು ಇದ್ದುದರಲ್ಲಿ ಕಾರ್ಯಸಾಧ್ಯ ಪರಿಹಾರವಾಗುತ್ತದೆ.
ಸಾರ್ವಜನಿಕ ಸಾರಿಗೆಗೆ ಮತ್ತಷ್ಟು ಒತ್ತು, ಎಥೆನಾಲ್ ಬಳಕೆಗೆ ಉತ್ತೇಜನ-ಪ್ರೋತ್ಸಾಹ ಮುಂತಾದ ಕ್ರಮಗಳ ಮೂಲಕ ಇಂಧನ ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರಗಳು ಮುಂದಡಿ ಇಡಬೇಕಾದುದು ಸದ್ಯದ ತುರ್ತ. ವಿದ್ಯುಚ್ಚಾಲಿತ ವಾಹನಗಳಿಗೆ ಕೇಂದ್ರ ಸರ್ಕಾರ ಈಗಾಗಲೇ ಕೆಲ ರಿಯಾಯಿತಿ ಪ್ರಕಟಿಸಿರುವುದು ಗಮನಾರ್ಹ. ಆದರೆ ಚಾರ್ಜಿಂಗ್ ಸ್ಟೇಷನ್ಗಳ ಕೊರತೆಯಿಂದಾಗಿ ಇ-ವಾಹನಗಳು ನಿರೀಕ್ಷೆಯಷ್ಟು ರಸ್ತೆಗಿಳಿಯುತ್ತಿಲ್ಲ. ಇ-ವಾಹನಗಳು ದೊಡ್ಡ ಸಂಖ್ಯೆಯಲ್ಲಿ ಬಂದರೆ ವಿದ್ಯುತ್ ಉತ್ಪಾದನೆಯೂ ಹೆಚ್ಚಬೇಕಾಗುತ್ತದೆ. 2030ರ ವೇಳೆಗೆ, ಭಾರತಕ್ಕೆ ಅಗತ್ಯವಾದ ಶೇ.40 ವಿದ್ಯುತ್ತನ್ನು ನವೀಕರಿಸಬಹುದಾದ ಇಂಧನ ಮೂಲಗಳಿಂದಲೇ ಉತ್ಪಾದಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿರುವುದು ಗಮನಾರ್ಹ. ಸದ್ಯ ಭಾರತ ಇಂಧನ ಆಮದಿಗಾಗಿ ವಾರ್ಷಿಕ ಸುಮಾರು 5 ಲಕ್ಷ ಕೋಟಿ ರೂ.ಗಳನ್ನು ತೆರುತ್ತಿದೆ. ಮತ್ತೊಂದೆಡೆ, ಸಾರ್ವಜನಿಕರು ಸಹ ಇಂಧನ ಬಳಕೆಗೆ ಸ್ವಯಂನಿಯಂತ್ರಣ ವಿಧಿಸಿಕೊಳ್ಳುವತ್ತ ಆಲೋಚಿಸಬೇಕು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ