| ಕೆ. ರಾಘವ ಶರ್ಮ
ನವದೆಹಲಿ: ಆಕಸ್ಮಿಕ ಸಾವಿಗೆ ಜೀವವಿಮೆ ಮಾಡಿಸಿಕೊಂಡ ವ್ಯಕ್ತಿ ಒಂದೊಮ್ಮೆ ಹತ್ಯೆಗೊಳಗಾದರೂ ವಿಮಾ ಕಂಪನಿಗಳು ಜೀವವಿಮೆಯ ಹಕ್ಕಿನ ಹಣವನ್ನು ಆತನ ಕುಟುಂಬಸ್ಥರಿಗೆ ಪಾವತಿಸುವುದು ಕಡ್ಡಾಯ ಎಂದು ರಾಷ್ಟ್ರೀಯ ಗ್ರಾಹಕರ ಬಿಕ್ಕಟ್ಟು ಪರಿಹಾರ ಆಯೋಗ (ಎನ್.ಸಿ.ಡಿ.ಆರ್.ಸಿ) ಮಹತ್ವದ ತೀರ್ಪಿತ್ತಿದೆ. ಈ ಆದೇಶ ವಿಮಾ ಹಣ ನೀಡಲು ಹತ್ತು ಹಲವು ನೆಪ ಹೇಳಿ ನುಣುಚಿಕೊಳ್ಳುವ ವಿಮಾ ಕಂಪನಿಗಳಿಗೆ ಮುಟ್ಟಿಸಿರುವ ಬಿಸಿ ಎಂದೇ ವಿಶ್ಲೇಷಿಸಲಾಗುತ್ತಿದೆ.
ಆದೇಶವೇನು?: ವಿಮಾ ಕಂಪನಿಗಳು ತಮ್ಮ ನಿಯಮಾವಳಿಗಳಲ್ಲಿ ಹತ್ಯೆಯೆಂಬುದು ಆಕಸ್ಮಿಕ ಸಾವಿನ ವ್ಯಾಪ್ತಿಯಲ್ಲಿಲ್ಲ ಎಂಬ ಬಗ್ಗೆ ಸಮರ್ಪಕ ವಿವರಣೆ ನಮೂದಿಸಿದ್ದರಷ್ಟೇ ಹಣ ಪಾವತಿಯಿಂದ ವಿನಾಯಿತಿ ಪಡೆಯಬಹುದು. ಆದರೆ, ಈ ಅಂಶ ಇಲ್ಲದಿದ್ದರೆ ವಿಮೆ ಹಣ ಪಡೆಯುವುದು ಗ್ರಾಹಕರ ನ್ಯಾಯಬದ್ಧ ಹಕ್ಕಾಗುತ್ತದೆ. ಗ್ರಾಹಕರ ಮನವಿಯನ್ನು ಕಂಪನಿಗಳು ತಿರಸ್ಕರಿಸಲಾಗದೆಂದು ಆಯೋಗದ ನ್ಯಾಯಾಧೀಶ ಎಸ್.ಎಂ. ಕಂಠೀಕರ್ ಮತ್ತು ನ್ಯಾ. ದಿನೇಶ್ ಸಿಂಗ್ ಒಳಗೊಂಡ ದ್ವಿಸದಸ್ಯ ಪೀಠ ತಿಳಿಸಿದೆ.
ನಿಯಮ ಬದಲಾಗಲಿ
ವಿಮೆ ಹಣದ ಆಸೆಗಾಗಿ ಆತ್ಮಹತ್ಯೆಗೆ ಶರಣಾಗುವಂತಹ ಪ್ರಕರಣ ಬಿಟ್ಟು ಇತರ ಹಲವು ಕಾರಣಕ್ಕಾಗಿಯೂ ಜನರು ಆತ್ಮಹತ್ಯೆಗೆ ಶರಣಾಗುತ್ತಾರೆ. ಇಂತಹ ಪ್ರಕರಣಗಳನ್ನೂ ವಿಮೆ ವ್ಯಾಪ್ತಿಗೆ ತರಬೇಕೆಂಬ ಒತ್ತಾಯ ಹಲವು ದಿನಗಳಿಂದಲೂ ಕೇಳಿಬರುತ್ತಿದೆ. ಎನ್ಸಿಡಿಆರ್ಸಿನ ಆದೇಶದ ಬಳಿಕವಾದರೂ ವಿಮಾ ಕಂಪನಿಗಳು ನಿಯಮ ತಿದ್ದುಪಡಿ ಮಾಡಿಕೊಳ್ಳಬೇಕೆಂಬುದು ಗ್ರಾಹಕರ ಒತ್ತಾಸೆ.
ಏನಿದು ಪ್ರಕರಣ?
ಮಹಾರಾಷ್ಟ್ರ ಮೂಲದ ಬಲರಾಮ್ ಮುಲ್ಚಂದಾನಿ 2009ರ ಜನವರಿಯಲ್ಲಿ ಹತ್ಯೆಗೀಡಾಗಿದ್ದರು. ಇದಕ್ಕೂ ಮುನ್ನ 2008 ಮತ್ತು 2009ರ ನವೆಂಬರ್ ಅವಧಿಗೆ ಅನ್ವಯಿಸುವಂತೆ ರಾಯಲ್ ಸುಂದರಮ್ ಅಲಯನ್ಸ್ ಇನ್ಸುರೆನ್ಸ್ ಕಂಪನಿಯಿಂದ ಆಕಸ್ಮಿಕ ಸಾವಿನ ವ್ಯಾಪ್ತಿಯಲ್ಲಿ ವಿಮೆ ಮಾಡಿಕೊಂಡಿದ್ದರು. ಬಲರಾಮ್ ಹತ್ಯೆ ಬಳಿಕ ಅವರ ಪುತ್ರ ಪವನ್ ವಿಮೆ ಹಣಕ್ಕೆ ಮನವಿ ಮಾಡಿದ್ದರು. ಹತ್ಯೆಯನ್ನು ಆಕಸ್ಮಿಕ ಸಾವೆಂದು ಪರಿಗಣಿಸಲಾಗದೆಂದ ಕಂಪನಿ ಹಣ ನೀಡಲು ನಿರಾಕರಿಸಿತ್ತು. ಆಸ್ತಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಲರಾಮ್ ಹತ್ಯೆ ಆಗಿದೆ ಎಂಬುದು ಕಂಪನಿ ವಾದವಾಗಿತ್ತು. ಇದನ್ನು ಪ್ರಶ್ನಿಸಿ ಪವನ್ ಮಹಾರಾಷ್ಟ್ರ ರಾಜ್ಯ ಗ್ರಾಹಕರ ಬಿಕ್ಕಟ್ಟು ಪರಿಹಾರ ಆಯೋಗದ ಮೊರೆ ಹೋದಾಗ ವಿಚಾರಣೆ ನಡೆಸಿದ ಆಯೋಗ,ವಿಮಾ ಹಣ ಪಾವತಿಸುವಂತೆ ಕಂಪನಿಗೆ ಸೂಚಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ರಾಷ್ಟ್ರೀಯ ಗ್ರಾಹಕರ ಆಯೋಗದ ಮೊರೆ ಹೋಗಿದ್ದ ವಿಮಾ ಕಂಪನಿಯ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ತೀರ್ಪಿನ ಅನುಷ್ಠಾನದ ಬಗ್ಗೆ 3 ತಿಂಗಳ ಒಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.
ನಾಲ್ಕು ವಾರಗಳ ಗಡುವು
ಪವನ್ಗೆ 4 ವಾರದಲ್ಲಿ 20 ಲಕ್ಷ ರೂ. ವಿಮೆ ಹಣದ ಜತೆಗೆ ಕಂಪನಿಯ ವಿಳಂಬ ಧೋರಣೆಯಿಂದಾಗಿ ಗ್ರಾಹಕ ಹತಾಶೆ ಅನುಭವಿಸಿದ್ದಕ್ಕಾಗಿ 2 ಲಕ್ಷ ರೂ ಪರಿಹಾರ ನೀಡಬೇಕೆಂದೂ ಆಯೋಗ ಸೂಚನೆ ನೀಡಿದೆ.
ನವದೆಹಲಿ: ಆಕಸ್ಮಿಕ ಸಾವಿಗೆ ಜೀವವಿಮೆ ಮಾಡಿಸಿಕೊಂಡ ವ್ಯಕ್ತಿ ಒಂದೊಮ್ಮೆ ಹತ್ಯೆಗೊಳಗಾದರೂ ವಿಮಾ ಕಂಪನಿಗಳು ಜೀವವಿಮೆಯ ಹಕ್ಕಿನ ಹಣವನ್ನು ಆತನ ಕುಟುಂಬಸ್ಥರಿಗೆ ಪಾವತಿಸುವುದು ಕಡ್ಡಾಯ ಎಂದು ರಾಷ್ಟ್ರೀಯ ಗ್ರಾಹಕರ ಬಿಕ್ಕಟ್ಟು ಪರಿಹಾರ ಆಯೋಗ (ಎನ್.ಸಿ.ಡಿ.ಆರ್.ಸಿ) ಮಹತ್ವದ ತೀರ್ಪಿತ್ತಿದೆ. ಈ ಆದೇಶ ವಿಮಾ ಹಣ ನೀಡಲು ಹತ್ತು ಹಲವು ನೆಪ ಹೇಳಿ ನುಣುಚಿಕೊಳ್ಳುವ ವಿಮಾ ಕಂಪನಿಗಳಿಗೆ ಮುಟ್ಟಿಸಿರುವ ಬಿಸಿ ಎಂದೇ ವಿಶ್ಲೇಷಿಸಲಾಗುತ್ತಿದೆ.
ಆದೇಶವೇನು?: ವಿಮಾ ಕಂಪನಿಗಳು ತಮ್ಮ ನಿಯಮಾವಳಿಗಳಲ್ಲಿ ಹತ್ಯೆಯೆಂಬುದು ಆಕಸ್ಮಿಕ ಸಾವಿನ ವ್ಯಾಪ್ತಿಯಲ್ಲಿಲ್ಲ ಎಂಬ ಬಗ್ಗೆ ಸಮರ್ಪಕ ವಿವರಣೆ ನಮೂದಿಸಿದ್ದರಷ್ಟೇ ಹಣ ಪಾವತಿಯಿಂದ ವಿನಾಯಿತಿ ಪಡೆಯಬಹುದು. ಆದರೆ, ಈ ಅಂಶ ಇಲ್ಲದಿದ್ದರೆ ವಿಮೆ ಹಣ ಪಡೆಯುವುದು ಗ್ರಾಹಕರ ನ್ಯಾಯಬದ್ಧ ಹಕ್ಕಾಗುತ್ತದೆ. ಗ್ರಾಹಕರ ಮನವಿಯನ್ನು ಕಂಪನಿಗಳು ತಿರಸ್ಕರಿಸಲಾಗದೆಂದು ಆಯೋಗದ ನ್ಯಾಯಾಧೀಶ ಎಸ್.ಎಂ. ಕಂಠೀಕರ್ ಮತ್ತು ನ್ಯಾ. ದಿನೇಶ್ ಸಿಂಗ್ ಒಳಗೊಂಡ ದ್ವಿಸದಸ್ಯ ಪೀಠ ತಿಳಿಸಿದೆ.
ನಿಯಮ ಬದಲಾಗಲಿ
ವಿಮೆ ಹಣದ ಆಸೆಗಾಗಿ ಆತ್ಮಹತ್ಯೆಗೆ ಶರಣಾಗುವಂತಹ ಪ್ರಕರಣ ಬಿಟ್ಟು ಇತರ ಹಲವು ಕಾರಣಕ್ಕಾಗಿಯೂ ಜನರು ಆತ್ಮಹತ್ಯೆಗೆ ಶರಣಾಗುತ್ತಾರೆ. ಇಂತಹ ಪ್ರಕರಣಗಳನ್ನೂ ವಿಮೆ ವ್ಯಾಪ್ತಿಗೆ ತರಬೇಕೆಂಬ ಒತ್ತಾಯ ಹಲವು ದಿನಗಳಿಂದಲೂ ಕೇಳಿಬರುತ್ತಿದೆ. ಎನ್ಸಿಡಿಆರ್ಸಿನ ಆದೇಶದ ಬಳಿಕವಾದರೂ ವಿಮಾ ಕಂಪನಿಗಳು ನಿಯಮ ತಿದ್ದುಪಡಿ ಮಾಡಿಕೊಳ್ಳಬೇಕೆಂಬುದು ಗ್ರಾಹಕರ ಒತ್ತಾಸೆ.
ಏನಿದು ಪ್ರಕರಣ?
ಮಹಾರಾಷ್ಟ್ರ ಮೂಲದ ಬಲರಾಮ್ ಮುಲ್ಚಂದಾನಿ 2009ರ ಜನವರಿಯಲ್ಲಿ ಹತ್ಯೆಗೀಡಾಗಿದ್ದರು. ಇದಕ್ಕೂ ಮುನ್ನ 2008 ಮತ್ತು 2009ರ ನವೆಂಬರ್ ಅವಧಿಗೆ ಅನ್ವಯಿಸುವಂತೆ ರಾಯಲ್ ಸುಂದರಮ್ ಅಲಯನ್ಸ್ ಇನ್ಸುರೆನ್ಸ್ ಕಂಪನಿಯಿಂದ ಆಕಸ್ಮಿಕ ಸಾವಿನ ವ್ಯಾಪ್ತಿಯಲ್ಲಿ ವಿಮೆ ಮಾಡಿಕೊಂಡಿದ್ದರು. ಬಲರಾಮ್ ಹತ್ಯೆ ಬಳಿಕ ಅವರ ಪುತ್ರ ಪವನ್ ವಿಮೆ ಹಣಕ್ಕೆ ಮನವಿ ಮಾಡಿದ್ದರು. ಹತ್ಯೆಯನ್ನು ಆಕಸ್ಮಿಕ ಸಾವೆಂದು ಪರಿಗಣಿಸಲಾಗದೆಂದ ಕಂಪನಿ ಹಣ ನೀಡಲು ನಿರಾಕರಿಸಿತ್ತು. ಆಸ್ತಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಲರಾಮ್ ಹತ್ಯೆ ಆಗಿದೆ ಎಂಬುದು ಕಂಪನಿ ವಾದವಾಗಿತ್ತು. ಇದನ್ನು ಪ್ರಶ್ನಿಸಿ ಪವನ್ ಮಹಾರಾಷ್ಟ್ರ ರಾಜ್ಯ ಗ್ರಾಹಕರ ಬಿಕ್ಕಟ್ಟು ಪರಿಹಾರ ಆಯೋಗದ ಮೊರೆ ಹೋದಾಗ ವಿಚಾರಣೆ ನಡೆಸಿದ ಆಯೋಗ,ವಿಮಾ ಹಣ ಪಾವತಿಸುವಂತೆ ಕಂಪನಿಗೆ ಸೂಚಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ರಾಷ್ಟ್ರೀಯ ಗ್ರಾಹಕರ ಆಯೋಗದ ಮೊರೆ ಹೋಗಿದ್ದ ವಿಮಾ ಕಂಪನಿಯ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ತೀರ್ಪಿನ ಅನುಷ್ಠಾನದ ಬಗ್ಗೆ 3 ತಿಂಗಳ ಒಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.
ನಾಲ್ಕು ವಾರಗಳ ಗಡುವು
ಪವನ್ಗೆ 4 ವಾರದಲ್ಲಿ 20 ಲಕ್ಷ ರೂ. ವಿಮೆ ಹಣದ ಜತೆಗೆ ಕಂಪನಿಯ ವಿಳಂಬ ಧೋರಣೆಯಿಂದಾಗಿ ಗ್ರಾಹಕ ಹತಾಶೆ ಅನುಭವಿಸಿದ್ದಕ್ಕಾಗಿ 2 ಲಕ್ಷ ರೂ ಪರಿಹಾರ ನೀಡಬೇಕೆಂದೂ ಆಯೋಗ ಸೂಚನೆ ನೀಡಿದೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ