ಡಾ. ಗಿರಿಧರ ಕಜೆ ಎಂ.ಡಿ.(ಆಯು)
ಮನುಷ್ಯ ಜನ್ಮಸಹಜವಾಗಿ ಯೋಜಕ. ಜೀವನವನ್ನು ಸೊಬಗಾಗಿಸಲು ನಿರಂತರ ಯತ್ನದಲ್ಲಿ ಕ್ರಿಯಾಶೀಲನಾಗಿರುತ್ತಾನೆ. ಹೀಗಾಗಿ ಏನೆಲ್ಲ ಬೇಕೋ ಅದರಲ್ಲಿ ವೈವಿಧ್ಯಗಳು ತುಂಬಿರುತ್ತವೆ. ನಿತ್ಯಜೀವನದಲ್ಲಿ ಉಪಯೋಗಿಸುವ ವಾಹನ, ಬಟ್ಟೆಬರೆ, ಮೊಬೈಲು, ಆಹಾರ ವಿಧವಿಧವಾಗಿ ಲಭ್ಯವಿರುವಂತೆ ಮಾಡಿಕೊಂಡಿರುವುದರಿಂದ ಅವರವರ ಅಭಿರುಚಿಗೆ ತಕ್ಕಂತೆ ಆಯ್ಕೆಯ ಅವಕಾಶವಿರುತ್ತದೆ. ಇದು ಇಂದು ನಿನ್ನೆಯ ಕಥೆಯಲ್ಲ. ಆದಿಯಿಂದಲೇ ಹೀಗೆ ಸಾಗಿಬಂದಿದೆ. ಆಹಾರ ವ್ಯಂಜನಗಳ ಹೆಸರುಗಳೂ ಪ್ರಾಚೀನ ಕಾಲದಲ್ಲಿ ಹೇಗಿತ್ತೋ ಬಹುತೇಕ ಅದೇ ತೆರನಾಗಿ ಇಂದಿಗೂ ಚಾಲ್ತಿಯಲ್ಲಿರುವುದು ದಿಗಮೆ ಹುಟ್ಟಿಸುತ್ತದೆ.
ಸ್ವಲ್ಪ ತುಪ್ಪ ಬಳಸಿ ಗೋಧಿಹಿಟ್ಟನ್ನು ಚೆನ್ನಾಗಿ ಕಲಸಿಕೊಳ್ಳಬೇಕು. ರೊಟ್ಟಿ ತಟ್ಟಿ ತುಪ್ಪದಲ್ಲಿ ಹುರಿಯಬೇಕು. ಬಳಿಕ ಸಿತಾಪಾಕವೆಂಬ ಸಕ್ಕರೆ ಕುದಿಸಿ ಮಾಡಿದ ಪಾಕಕ್ಕೆ ಏಲಕ್ಕಿ, ಲವಂಗ, ಪಚ್ಚಕರ್ಪರ, ಕರಿಮೆಣಸುಗಳನ್ನು ಹಾಕಿಡಬೇಕು. ಈ ಪಾಕದಲ್ಲಿ ಹುರಿದ ರೊಟ್ಟಿಯನ್ನು ಕೆಲವು ನಿಮಿಷ ಇಟ್ಟು ಹೊರತೆಗೆದರೆ ಅದು ಮಂಥಕ. ಇಂದಿನ ಸಿಹಿಪೂರಿ! ಬಲಕಾರಕ, ಪುಷ್ಟಿದಾಯಕ, ಲೈಂಗಿಕ ಶಕ್ತಿಪ್ರದಾಯಕ ಆಗಿದ್ದರೂ ಸುಲಭವಾಗಿ ಜೀರ್ಣವಾಗದು. ಹೀಗಾಗಿ ಅತಿಯಾದ ಜೀರ್ಣಶಕ್ತಿ ಇರುವವರಿಗೆ ಹಿತಕರ.
ಗೋಧಿಹಿಟ್ಟಿಗೆ ಹೆಚ್ಚು ತುಪ್ಪ ಸೇರಿಸಿ ಮರದ ಮಣೆಯ ಮೇಲೆ ಉರುಟು ಹಾಗೂ ಉದ್ದವಾದ ಆಕೃತಿಯಲ್ಲಿ ಮಾಡಿಕೊಂಡು ಚಾಕುವಿನಿಂದ ತುಂಡರಿಸಬೇಕು. ಬಳಿಕ ಅದಕ್ಕೆ ಅಕ್ಕಿಹಿಟ್ಟು ಹಾಗೂ ನೀರನ್ನು ಹಾಕಿ ಚಿಕ್ಕ ಉರುಟಾದ ಬಿಲ್ಲೆಯಂತೆ ಲಟ್ಟಿಸಿಕೊಂಡು ತುಪ್ಪದಲ್ಲಿ ಮುಳುಗಿಸಿ ಚೆನ್ನಾಗಿ ಹುರಿಯಬೇಕು. ಅದು ಉಬ್ಬಿಕೊಂಡಾಗ ಹೊರತೆಗೆದು ಸಕ್ಕರೆಯ ಹುಡಿಯನ್ನು ಚಿಮುಕಿಸಬೇಕು. ಇದು ಅಂದಿನ ಫೇಣಿಕಾ, ಇಂದಿನ ಫೇಣಿ! ದೇಹಪುಷ್ಟಿಗೆ, ಶಕ್ತಿವರ್ಧನೆಗೆ, ಪಿತ್ತ, ವಾತ ನಿಯಂತ್ರಣಕ್ಕೆ, ಬಾಯಿರುಚಿ ಹೆಚ್ಚಿಸಲು ಅನುಕೂಲಕಾರಿಯಾಗಿದ್ದು ಸುಲಭವಾಗಿ ಜೀರ್ಣಗೊಳ್ಳುತ್ತದೆ.
ಗೋಧಿಹಿಟ್ಟಿಗೆ ತುಪ್ಪ ಹಾಕಿ ಹಪ್ಪಳ ಮಾಡಿ ಸಕ್ಕರೆ, ಏಲಕ್ಕಿ, ಲವಂಗ, ಕಾಳುಮೆಣಸು, ತೆಂಗಿನಕಾಯಿ ತುರಿ, ಪಚ್ಚಕರ್ಪರ, ಚಾರೊಲಿಗಳನ್ನು ಹುಡಿ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಬೆರೆಸಿ ಚಿಕ್ಕ ಉಂಡೆ ಮಾಡಿಟ್ಟುಕೊಳ್ಳಬೇಕು. ದಪ್ಪನೆಯ ಗೋಧಿಹಿಟ್ಟಿನ ರೊಟ್ಟಿ ಮಾಡಿ ಈ ಒಂದೊಂದೇ ಉಂಡೆಯನ್ನು ಅದರಿಂದ ಮುಚ್ಚಬೇಕು. ಇದನ್ನು ತುಪ್ಪದಲ್ಲಿ ಮುಳುಗಿಸಿ ಹುರಿಯಬೇಕು. ಇದು ಅಂದಿನ ಸಂಪಾವ, ಇಂದಿನ ಮೋದಕ! ಮಂಥಕದ ಗುಣಗಳಿಂದಲೇ ಕೂಡಿರುತ್ತದೆ. ಗೋಧಿಯ ಹಿಟ್ಟಿಗೆ ಜಾಸ್ತಿ ತುಪ್ಪ, ಸ್ವಲ್ಪ ಲವಂಗ, ಶುಂಠಿ, ಪಚ್ಚಕರ್ಪರ, ಸಕ್ಕರೆಯನ್ನು ನುಣ್ಣಗೆ ಹುಡಿ ಮಾಡಿ ಮಿಶ್ರಗೊಳಿಸಬೇಕು. ಕರ್ಪರ ನಾಲಿಕಾ ಎಂದರೆ ಇದೇ. ಇದೂ ಮಂಥಕದ ಗುಣವನ್ನೇ ಹೊಂದಿರುತ್ತದೆ. ಗೋಧಿಹಿಟ್ಟಿಗೆ ತುಪ್ಪ ಸೇರಿಸಿ ತೆಳ್ಳಗೆ ದುಂಡಗೆ ಆಕಾರದಲ್ಲಿ ತುಂಡರಿಸಿ ತುಪ್ಪದಲ್ಲಿ ಮುಳುಗಿಸಿ ಕರಿದರೆ ಸಿದ್ಧವಾಗುವುದೇ ಶಷ್ಕುಲಿ. ಮಂಥಕದಂತೆಯೇ ಗುಣಗಳಿದ್ದು ಇಂದಿನ ಚಕ್ಕುಲಿಯನ್ನೇ ಹೋಲುತ್ತದೆ. ಕಡಲೆಹಿಟ್ಟಿನಿಂದ ಇದೇ ತೆರನಾಗಿ ಮಾಡುವ ಚಕ್ಕುಲಿಯು ಕಫ, ಪಿತ್ತ, ರಕ್ತದೋಷಗಳನ್ನು ಕಡಿಮೆ ಮಾಡುತ್ತದೆ. ಜೀರ್ಣಕ್ಕೆ ಕಠಿಣವಾಗಿದ್ದು ದೇಹದಲ್ಲಿ ನೀರಿನ ಅಂಶವನ್ನು ತಗ್ಗಿಸುತ್ತದೆ. ಉದ್ದಿನಹಿಟ್ಟು ಅಥವಾ ಅಕ್ಕಿಹಿಟ್ಟಿನ ಚಕ್ಕುಲಿಯ ಬಳಕೆ ಇಂದು ಹೆಚ್ಚು ಪ್ರಚಲಿತದಲ್ಲಿದೆ.
ಮಂಥಕ, ಫೇಣಿಕಾ, ಸಂಪಾವ, ಕರ್ಪರ ನಾಲಿಕಾ, ಶಷ್ಕುಲಿಗಳೆಲ್ಲವನ್ನೂ ಒಟ್ಟಾಗಿ ಆಯುರ್ವೆದವು ಪಕ್ವಾನ್ನ ಎಂದಿದೆ. ನಾವಿದನ್ನು ಕುರಕಲುತಿಂಡಿ ಅಥವಾ ಸ್ನ್ಯಾಕ್ಸ್ ಎನ್ನುತ್ತಿದ್ದೇವೆ!
ಪಂಚಸೂತ್ರಗಳು
# ಕಕ್ಕೆಮರ: ಹಣ್ಣು ನೋವು ನಿವಾರಕ.
# ಮಾದಲಹಣ್ಣು: ವಾಂತಿ ಶಮನ ಮಾಡುವುದು.
# ಮುಳ್ಳುಸೌತೆ: ಮೂತ್ರನಾಳದ ನೋವು ಶಾಮಕ.
# ಲಿಂಬೆಹಣ್ಣು: ತುರಿಕಜ್ಜಿ ಗುಣಕಾರಿ.
# ಕಿತ್ತಳೆಹೂ: ನಿದ್ರೆ ಬರಲು ಸಹಕಾರಿ.
ಮನುಷ್ಯ ಜನ್ಮಸಹಜವಾಗಿ ಯೋಜಕ. ಜೀವನವನ್ನು ಸೊಬಗಾಗಿಸಲು ನಿರಂತರ ಯತ್ನದಲ್ಲಿ ಕ್ರಿಯಾಶೀಲನಾಗಿರುತ್ತಾನೆ. ಹೀಗಾಗಿ ಏನೆಲ್ಲ ಬೇಕೋ ಅದರಲ್ಲಿ ವೈವಿಧ್ಯಗಳು ತುಂಬಿರುತ್ತವೆ. ನಿತ್ಯಜೀವನದಲ್ಲಿ ಉಪಯೋಗಿಸುವ ವಾಹನ, ಬಟ್ಟೆಬರೆ, ಮೊಬೈಲು, ಆಹಾರ ವಿಧವಿಧವಾಗಿ ಲಭ್ಯವಿರುವಂತೆ ಮಾಡಿಕೊಂಡಿರುವುದರಿಂದ ಅವರವರ ಅಭಿರುಚಿಗೆ ತಕ್ಕಂತೆ ಆಯ್ಕೆಯ ಅವಕಾಶವಿರುತ್ತದೆ. ಇದು ಇಂದು ನಿನ್ನೆಯ ಕಥೆಯಲ್ಲ. ಆದಿಯಿಂದಲೇ ಹೀಗೆ ಸಾಗಿಬಂದಿದೆ. ಆಹಾರ ವ್ಯಂಜನಗಳ ಹೆಸರುಗಳೂ ಪ್ರಾಚೀನ ಕಾಲದಲ್ಲಿ ಹೇಗಿತ್ತೋ ಬಹುತೇಕ ಅದೇ ತೆರನಾಗಿ ಇಂದಿಗೂ ಚಾಲ್ತಿಯಲ್ಲಿರುವುದು ದಿಗಮೆ ಹುಟ್ಟಿಸುತ್ತದೆ.
ಸ್ವಲ್ಪ ತುಪ್ಪ ಬಳಸಿ ಗೋಧಿಹಿಟ್ಟನ್ನು ಚೆನ್ನಾಗಿ ಕಲಸಿಕೊಳ್ಳಬೇಕು. ರೊಟ್ಟಿ ತಟ್ಟಿ ತುಪ್ಪದಲ್ಲಿ ಹುರಿಯಬೇಕು. ಬಳಿಕ ಸಿತಾಪಾಕವೆಂಬ ಸಕ್ಕರೆ ಕುದಿಸಿ ಮಾಡಿದ ಪಾಕಕ್ಕೆ ಏಲಕ್ಕಿ, ಲವಂಗ, ಪಚ್ಚಕರ್ಪರ, ಕರಿಮೆಣಸುಗಳನ್ನು ಹಾಕಿಡಬೇಕು. ಈ ಪಾಕದಲ್ಲಿ ಹುರಿದ ರೊಟ್ಟಿಯನ್ನು ಕೆಲವು ನಿಮಿಷ ಇಟ್ಟು ಹೊರತೆಗೆದರೆ ಅದು ಮಂಥಕ. ಇಂದಿನ ಸಿಹಿಪೂರಿ! ಬಲಕಾರಕ, ಪುಷ್ಟಿದಾಯಕ, ಲೈಂಗಿಕ ಶಕ್ತಿಪ್ರದಾಯಕ ಆಗಿದ್ದರೂ ಸುಲಭವಾಗಿ ಜೀರ್ಣವಾಗದು. ಹೀಗಾಗಿ ಅತಿಯಾದ ಜೀರ್ಣಶಕ್ತಿ ಇರುವವರಿಗೆ ಹಿತಕರ.
ಗೋಧಿಹಿಟ್ಟಿಗೆ ಹೆಚ್ಚು ತುಪ್ಪ ಸೇರಿಸಿ ಮರದ ಮಣೆಯ ಮೇಲೆ ಉರುಟು ಹಾಗೂ ಉದ್ದವಾದ ಆಕೃತಿಯಲ್ಲಿ ಮಾಡಿಕೊಂಡು ಚಾಕುವಿನಿಂದ ತುಂಡರಿಸಬೇಕು. ಬಳಿಕ ಅದಕ್ಕೆ ಅಕ್ಕಿಹಿಟ್ಟು ಹಾಗೂ ನೀರನ್ನು ಹಾಕಿ ಚಿಕ್ಕ ಉರುಟಾದ ಬಿಲ್ಲೆಯಂತೆ ಲಟ್ಟಿಸಿಕೊಂಡು ತುಪ್ಪದಲ್ಲಿ ಮುಳುಗಿಸಿ ಚೆನ್ನಾಗಿ ಹುರಿಯಬೇಕು. ಅದು ಉಬ್ಬಿಕೊಂಡಾಗ ಹೊರತೆಗೆದು ಸಕ್ಕರೆಯ ಹುಡಿಯನ್ನು ಚಿಮುಕಿಸಬೇಕು. ಇದು ಅಂದಿನ ಫೇಣಿಕಾ, ಇಂದಿನ ಫೇಣಿ! ದೇಹಪುಷ್ಟಿಗೆ, ಶಕ್ತಿವರ್ಧನೆಗೆ, ಪಿತ್ತ, ವಾತ ನಿಯಂತ್ರಣಕ್ಕೆ, ಬಾಯಿರುಚಿ ಹೆಚ್ಚಿಸಲು ಅನುಕೂಲಕಾರಿಯಾಗಿದ್ದು ಸುಲಭವಾಗಿ ಜೀರ್ಣಗೊಳ್ಳುತ್ತದೆ.
ಗೋಧಿಹಿಟ್ಟಿಗೆ ತುಪ್ಪ ಹಾಕಿ ಹಪ್ಪಳ ಮಾಡಿ ಸಕ್ಕರೆ, ಏಲಕ್ಕಿ, ಲವಂಗ, ಕಾಳುಮೆಣಸು, ತೆಂಗಿನಕಾಯಿ ತುರಿ, ಪಚ್ಚಕರ್ಪರ, ಚಾರೊಲಿಗಳನ್ನು ಹುಡಿ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಬೆರೆಸಿ ಚಿಕ್ಕ ಉಂಡೆ ಮಾಡಿಟ್ಟುಕೊಳ್ಳಬೇಕು. ದಪ್ಪನೆಯ ಗೋಧಿಹಿಟ್ಟಿನ ರೊಟ್ಟಿ ಮಾಡಿ ಈ ಒಂದೊಂದೇ ಉಂಡೆಯನ್ನು ಅದರಿಂದ ಮುಚ್ಚಬೇಕು. ಇದನ್ನು ತುಪ್ಪದಲ್ಲಿ ಮುಳುಗಿಸಿ ಹುರಿಯಬೇಕು. ಇದು ಅಂದಿನ ಸಂಪಾವ, ಇಂದಿನ ಮೋದಕ! ಮಂಥಕದ ಗುಣಗಳಿಂದಲೇ ಕೂಡಿರುತ್ತದೆ. ಗೋಧಿಯ ಹಿಟ್ಟಿಗೆ ಜಾಸ್ತಿ ತುಪ್ಪ, ಸ್ವಲ್ಪ ಲವಂಗ, ಶುಂಠಿ, ಪಚ್ಚಕರ್ಪರ, ಸಕ್ಕರೆಯನ್ನು ನುಣ್ಣಗೆ ಹುಡಿ ಮಾಡಿ ಮಿಶ್ರಗೊಳಿಸಬೇಕು. ಕರ್ಪರ ನಾಲಿಕಾ ಎಂದರೆ ಇದೇ. ಇದೂ ಮಂಥಕದ ಗುಣವನ್ನೇ ಹೊಂದಿರುತ್ತದೆ. ಗೋಧಿಹಿಟ್ಟಿಗೆ ತುಪ್ಪ ಸೇರಿಸಿ ತೆಳ್ಳಗೆ ದುಂಡಗೆ ಆಕಾರದಲ್ಲಿ ತುಂಡರಿಸಿ ತುಪ್ಪದಲ್ಲಿ ಮುಳುಗಿಸಿ ಕರಿದರೆ ಸಿದ್ಧವಾಗುವುದೇ ಶಷ್ಕುಲಿ. ಮಂಥಕದಂತೆಯೇ ಗುಣಗಳಿದ್ದು ಇಂದಿನ ಚಕ್ಕುಲಿಯನ್ನೇ ಹೋಲುತ್ತದೆ. ಕಡಲೆಹಿಟ್ಟಿನಿಂದ ಇದೇ ತೆರನಾಗಿ ಮಾಡುವ ಚಕ್ಕುಲಿಯು ಕಫ, ಪಿತ್ತ, ರಕ್ತದೋಷಗಳನ್ನು ಕಡಿಮೆ ಮಾಡುತ್ತದೆ. ಜೀರ್ಣಕ್ಕೆ ಕಠಿಣವಾಗಿದ್ದು ದೇಹದಲ್ಲಿ ನೀರಿನ ಅಂಶವನ್ನು ತಗ್ಗಿಸುತ್ತದೆ. ಉದ್ದಿನಹಿಟ್ಟು ಅಥವಾ ಅಕ್ಕಿಹಿಟ್ಟಿನ ಚಕ್ಕುಲಿಯ ಬಳಕೆ ಇಂದು ಹೆಚ್ಚು ಪ್ರಚಲಿತದಲ್ಲಿದೆ.
ಮಂಥಕ, ಫೇಣಿಕಾ, ಸಂಪಾವ, ಕರ್ಪರ ನಾಲಿಕಾ, ಶಷ್ಕುಲಿಗಳೆಲ್ಲವನ್ನೂ ಒಟ್ಟಾಗಿ ಆಯುರ್ವೆದವು ಪಕ್ವಾನ್ನ ಎಂದಿದೆ. ನಾವಿದನ್ನು ಕುರಕಲುತಿಂಡಿ ಅಥವಾ ಸ್ನ್ಯಾಕ್ಸ್ ಎನ್ನುತ್ತಿದ್ದೇವೆ!
ಪಂಚಸೂತ್ರಗಳು
# ಕಕ್ಕೆಮರ: ಹಣ್ಣು ನೋವು ನಿವಾರಕ.
# ಮಾದಲಹಣ್ಣು: ವಾಂತಿ ಶಮನ ಮಾಡುವುದು.
# ಮುಳ್ಳುಸೌತೆ: ಮೂತ್ರನಾಳದ ನೋವು ಶಾಮಕ.
# ಲಿಂಬೆಹಣ್ಣು: ತುರಿಕಜ್ಜಿ ಗುಣಕಾರಿ.
# ಕಿತ್ತಳೆಹೂ: ನಿದ್ರೆ ಬರಲು ಸಹಕಾರಿ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ