ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ನಾಟಿ ವೈದ್ಯರ ಬಳಿಗೆ ಹೋಗುವ ಮುನ್ನ…,

ಡಾ. ಬಿ.ಎಂ.ಹೆಗ್ಡೆ
ಕಾಯಿಲೆ ಬಂದಾಗ ಮೊದಲು ನಿಮ್ಮ ಮನೆವೈದ್ಯರ (ಫ್ಯಾಮಿಲಿ ಡಾಕ್ಟರ್) ಬಳಿಗೆ ಹೋಗಬೇಕೇ ಹೊರತು ಆಸ್ಪತ್ರೆಗೆ ಹೋಗುವುದಲ್ಲ. ನಮ್ಮ ಹೆಚ್ಚಿನ ಕಾಯಿಲೆಗಳು ತಮ್ಮಷ್ಟಕ್ಕೆ ತಾವೇ ಗುಣವಾಗುತ್ತವೆ. ಅದಕ್ಕೆ ಯಾವ ಪದ್ಧತಿಯ ವೈದ್ಯರ ಮದ್ದು ತೆಗೆದುಕೊಂಡರೂ ಗುಣವಾಗುತ್ತದೆ. ‘ಅವರ ಮದ್ದು ತೆಗೆದುಕೊಂಡರೆ ನನಗೆ ಗುಣವಾಗುತ್ತದೆ’ ಎಂಬ ಧೈರ್ಯ ನಮ್ಮ ಮನಸ್ಸಿನಲ್ಲಿದ್ದರೆ ಕಾಯಿಲೆಯನ್ನು ಮನಸ್ಸೇ ಗುಣ ಮಾಡುತ್ತದೆ. ಹಾಗಾಗಿ ನಾಟಿ ವೈದ್ಯರ ಮದ್ದು ಸೇವಿಸಿದರೂ ಕೆಲವು ಸಲ ನಮ್ಮ ಕಾಯಿಲೆ ಗುಣವಾಗುವುದುಂಟು. ಆದರೆ ಆ ಮದ್ದಿನಿಂದ ಅನೇಕ ಸಲ ಅನ್ಯಾಯವಾಗುವುದೂ ಇದೆ.
ಕೆಲವು ನಾಟಿ ವೈದ್ಯರಿರುತ್ತಾರೆ. ಅಂಥವರ ಬಗ್ಗೆ ಒಬ್ಬರು ನನಗೆ ಹೇಳಿದರು; ‘ಅಲ್ಲಿ ಒಬ್ಬ ವೈದ್ಯರಿದ್ದಾರೆ. ಅವರು ಎಲ್ಲ ಕಾಯಿಲೆಗಳಿಗೂ ಔಷಧ ಕೊಡುತ್ತಾರೆ. ಕಿಡ್ನಿ ಸಮಸ್ಯೆಗಳಿಗೆಲ್ಲ ಒಳ್ಳೆಯ ಮದ್ದು ಕೊಡುತ್ತಾರೆ. ಕಿಡ್ನಿ ಫೇಲ್ ಆದರೂ ಗುಣ ಮಾಡುತ್ತಾರೆ’ ಎಂದು. ಅಂಥ ಸಂಗತಿ ಇದ್ದರೆ ಬಹಳ ಒಳ್ಳೆಯದಲ್ಲವಾ? ಹಾಗಾಗಿ ನಾನು ಎರಡೂವರೆ ಸಾವಿರ ರೂಪಾಯಿ ಖರ್ಚು ಮಾಡಿ ಒಂದು ಟ್ಯಾಕ್ಸಿ ಹಿಡಿದುಕೊಂಡು ಅಲ್ಲಿಗೆ ಹೋದೆ. ಅಲ್ಲಿ ಒಂದು ಹಳೆ ಮನೆಯಲ್ಲಿ ಒಬ್ಬ ವೃದ್ಧರಿದ್ದರು. ‘ಏನು ಸ್ವಾಮಿ, ನೀವು ಕಿಡ್ನಿ ಸಮಸ್ಯೆಗೆ ಮದ್ದು ಕೊಡುತ್ತೀರಂತೆ. ಕಿಡ್ನಿ ಎಂದರೆ ಏನೆಂದು ನಿಮಗೆ ಗೊತ್ತಿದೆಯೇ?’ ಎಂದು ಕೇಳಿದೆ. ಅದಕ್ಕೆ ಅವರು,
‘ನನಗೆ ಗೊತ್ತಿಲ್ಲ’ ಎಂದರು. ‘ಮತ್ತೆ ಹೇಗೆ ಮದ್ದು ಕೊಡುತ್ತೀರಿ?’ ಎಂದೆ. ‘ನಾನು ಎಲ್ಲದಕ್ಕೂ ಮದ್ದು ಕೊಡುತ್ತೇನೆ’ ಎಂದು ಅವರು ಹೇಳಿದಾಗ ‘ಯಾರು ಹೇಳಿದ್ದು?’ ಎಂದೆ. ‘ನನ್ನ ತಂದೆ ಯಾವ ಗಿಡಮೂಲಿಕೆ ಎಂದು ಹೇಳಿದ್ದರು’ ಎನ್ನುತ್ತ ಮನೆಯ ಮಾಡಿನಿಂದ ಒಂದು ಗಿಡಮೂಲಿಕೆ ತಂದರು. ‘ಹಾರ್ಟ್​ಗೆ ಇದೇ, ಕಿಡ್ನಿಗೆ ಇದೇ’ ಎಂದರು. ಕಿಡ್ನಿ, ಹಾರ್ಟ್ ಬೇರೆ ಬೇರೆ ಎಂದು ಅವರಿಗೆ ಗೊತ್ತಿಲ್ಲ.
ಆದರೆ ಇಂಥವರ ಬಗ್ಗೆ ಹೇಳುವ ಜನ ಹೇಗೆ ವರ್ಣಿಸುತ್ತಾರೆ ಹೇಳಿ? ಈ ವೃದ್ಧರನ್ನು ಹುಡುಕಿಕೊಂಡು ನಾನು ಎರಡೂವರೆ ಸಾವಿರ ರೂ. ಖರ್ಚು ಮಾಡಿ, ಇಡೀ ದಿನ ಕಾರಿನಲ್ಲಿ ಹೋಗಿ ನೋಡಿದರೆ ಅವರು ಅಸಲಿ ಅಲ್ಲ ಎಂದು ತಿಳಿಯಿತು. ಆದರೆ ಜನರಿಗೆ ಅವರ ಬಗ್ಗೆ ಬಹಳ ನಂಬಿಕೆ ಇದೆ. ಅಲ್ಲಿ ಬೆಳಗ್ಗೆಯಿಂದ ಜನರ ಒಂದು ದೊಡ್ಡ ಸರದಿ ಸಾಲೇ ಇದೆ. ನಂಬಿಕೆಯಿಂದಲೇ ಗುಣಮುಖರಾದ ಎಷ್ಟೋ ಜನರಿದ್ದಾರೆ. ನಂಬಿಕೆಯ ಬಲದಿಂದ ಗುಣಮುಖರಾಗಿ ಅವರು ಮನೆಗೆ ಮರಳುತ್ತಾರೆ. ಹಾಗಾಗಿ ಬಹುಪಾಲು ನಾಟಿವೈದ್ಯ ಅಪಾಯಕಾರಕ. ಹಾವು ಕಚ್ಚಿದಾಗ ಯಾವ ಹಾವು ಎಂದು ಗೊತ್ತಾದರೆ ಆಸ್ಪತ್ರೆಗೆ ಹೋಗಿಬಿಡಬೇಕು. ಈಗೆಲ್ಲ ವಿಷವನ್ನು ತಡೆಯಬಲ್ಲ ಔಷಧಗಳಿವೆ (ಅಠಿಜಿಛ್ಞಿಟಞ). ಎಂಥ ಹಾವಿನ ವಿಷವನ್ನೂ ನಿವಾರಿಸಬಹುದು. ಮುಂಚಿನ ಕಾಲದಲ್ಲಿ ಟೆಲಿಗ್ರಾಂ ಕಳಿಸಿದರೆ ಗುಣವಾಗುತ್ತದೆ ಎಂಬೆಲ್ಲ ನಂಬಿಕೆಗಳಿದ್ದವು. ಹಾವು ಕಚ್ಚಿದ ನೂರು ಮನುಷ್ಯರಲ್ಲಿ
99 ಜನರಿಗೆ ಕಚ್ಚುವಾಗ ಆ ಹಾವುಗಳಲ್ಲಿ ವಿಷ ಇರುವುದಿಲ್ಲ. ಅವರು ಸಾಯುವುದಿಲ್ಲ. ಧೈರ್ಯವಿದ್ದರೆ ಅವರಿಗೆ ಏನೂ ಆಗದು. ಹೆದರಿದರೆ ಸಾಯುವುದುಂಟು. ಅಂಥವರಿಗೆ ಆ ಮದ್ದು ಪರಿಣಾಮಕಾರಿ. ಆದರೆ ಒಂದೊಮ್ಮೆ ವಿಷ ಇದ್ದಾಗ ಕಚ್ಚಿದರೆ ವ್ಯಕ್ತಿ ಸತ್ತೇಹೋಗುತ್ತಾನೆ.
ಹಾವಿಗೆ ಕಣ್ಣು ಅಕ್ಕಪಕ್ಕದಲ್ಲಿ ಇರುವುದರಿಂದ ಮುಂದೆ ಸಾಗುವಾಗ ಎದುರಿಗೆ ಕಾಣುವುದಿಲ್ಲ. ಹೀಗಾಗಿ ಅದು ನಾಲಗೆಯನ್ನು ಮುಂದಕ್ಕೆ ಚಾಚಿ ಸಾಗುತ್ತದೆ. ನಾಲಗೆಗೆ ಅಡ್ಡ ಬಂದದ್ದನ್ನೆಲ್ಲ ಕಚ್ಚುತ್ತದೆ. ಒಮ್ಮೆ ಕಚ್ಚಿದಾಗ ವಿಷ ಹೊರಹೋಗುತ್ತದೆ. ಅದು ಪುನಃ ಉತ್ಪತ್ತಿಯಾಗಲು ಹದಿನೈದು ದಿನ ಬೇಕು. ಈ ನಡುವಿನ ಅವಧಿಯಲ್ಲಿ ಯಾರಿಗೆ ಕಚ್ಚಿದರೂ ಏನೂ ಆಗುವುದಿಲ್ಲ. ಹಾಗಾಗಿ ಹಾವು ಕಡಿದಾಗ ನಾಟಿ ವೈದ್ಯರ ಬಳಿ ಹೋಗುವ ಬದಲು ಆಸ್ಪತ್ರೆಗೆ ಹೋಗಿ ವೈದ್ಯರ ಔಷಧ ಪಡೆಯುವುದೇ ಒಳ್ಳೆಯದು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....