ಭಾರತ ಪ್ರವಾಸದಲ್ಲಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ರಕ್ಷಣೆ, ಬಾಹ್ಯಾಕಾಶ, ಇಂಧನ ಕ್ಷೇತ್ರಗಳಿಗೆ ಸಂಬಂಧಿತ ಒಟ್ಟು 10 ಒಡಂಬಡಿಕೆಗಳಿಗೆ ಶುಕ್ರವಾರ ಸಹಿ ಹಾಕಿದ್ದಾರೆ. ಉಭಯ ದೇಶಗಳ 19ನೇ ವಾರ್ಷಿಕ ಶೃಂಗ ಸಭೆ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ದ್ವಿಪಕ್ಷೀಯ ಸಂಬಂಧದಲ್ಲಿ ಇಂದಿನಿಂದ ಹೊಸ ಪರ್ವ ಆರಂಭವಾಗಿದೆ. ಜಾಗತಿಕ ಪರಿಸ್ಥಿತಿ ಹಾಗೂ ಬೇಡಿಕೆಗೆ ತಕ್ಕಂತೆ ಭಾರತ-ರಷ್ಯಾ ನಡುವಿನ ವ್ಯವಹಾರದಲ್ಲಿ ಇನ್ನಷ್ಟು ವೃದ್ಧಿಯಾಗಲಿದೆ ’ಎಂದು ಭರವಸೆ ನೀಡಿದ್ದಾರೆ. ಈ ಮೂಲಕ ಅಮೆರಿಕದೊಂದಿಗಿನ ಸ್ನೇಹದ ಜತೆಗೆ ದಶಕಗಳ ಹಿಂದಿನ ಮಿತ್ರ ರಾಷ್ಟ್ರ ರಷ್ಯಾವನ್ನು ಕಡೆಗಣಿಸುವುದಿಲ್ಲ ಎಂಬ ಸಂದೇಶವನ್ನು ಪ್ರಧಾನಿ ಮೋದಿ ರವಾನಿಸಿದ್ದಾರೆ.
ಇನ್ವೆಸ್ಟ್ ಇಂಡಿಯಾ ಹಾಗೂ ಮೇಕ್ ಇನ್ ಇಂಡಿಯಾದಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ಸ್ಪೀಡ್ ರೈಲು ಯೋಜನೆ ಹಾಗೂ ರೈಲ್ವೆ ವಿಶ್ವವಿದ್ಯಾಲಯದ ಶಿಕ್ಷಣದಲ್ಲಿ ರಷ್ಯಾ ನೆರವಿಗೆ ಮುಂದಾಗಿದೆ. ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ ದೇಶದ ರಸ್ತೆ ಸಾರಿಗೆ ಹಾಗೂ ಜಲಸಾರಿಗೆ ಅಭಿವೃದ್ಧಿಯಲ್ಲೂ ಬಂಡವಾಳ ಹೂಡಿಕೆಗೆ ರಷ್ಯಾ ಸಮ್ಮತಿಸಿದೆ. ಶೀಘ್ರದಲ್ಲೇ ರೂಪಾಯಿ ಮತ್ತು ರಷ್ಯಾದ ಕರೆನ್ಸಿ ರೂಬಲ್ ವಿನಿಮಯ ಆಧಾರಿತ ವಹಿವಾಟು ಆರಂಭವಾಗಲಿದೆ.
ಇರಾನ್-ಇಂಧನ ಚರ್ಚೆ: ಅಮೆರಿಕದ ವಾಣಿಜ್ಯ ಸಮರ ಹಾಗೂ ಇರಾನ್ ಮೇಲೆ ನಿರ್ಬಂಧ ಕುರಿತು ಮೋದಿ-ಪುತಿನ್ ಮಾತುಕತೆ ನಡೆಸಿದ್ದಾರೆ. ಜಾಗತಿಕವಾಗಿ ಈ ವಿಷಯಗಳನ್ನು ಹೇಗೆ ನಿಭಾಯಿಸಬೇಕು ಹಾಗೂ ಉಭಯ ದೇಶಗಳ ಆರ್ಥಿಕತೆ ಮೇಲಿನ ದುಷ್ಪರಿಣಾಮ ಬೀರದಂತೆ ನಿಯಂತ್ರಿಸುವ ಬಗ್ಗೆಯೂ ಚರ್ಚೆ ನಡೆದಿದೆ.
ಶೃಂಗಕ್ಕೆ ಆಹ್ವಾನ
2019ರ ಸೆಪ್ಟೆಂಬರ್ನಲ್ಲಿ ರಷ್ಯಾದಲ್ಲಿ ಈಸ್ಟ್ ಎಕನಾಮಿಕ್ ಫೋರಂ ಆಯೋಜಿಸುವ ವ್ಲಾಡಿವೊಸ್ಟೋಕ್ ಸಮಾವೇಶಕ್ಕೆ ಮುಖ್ಯ ಅತಿಥಿಯಾಗುವಂತೆ ಮೋದಿಗೆ ಪುತಿನ್ ಆಹ್ವಾನಿಸಿದ್ದಾರೆ.
ವಿದ್ಯಾರ್ಥಿಗಳ ಜತೆ ಸಂವಾದ:ಅಟಲ್ ಇನ್ನೋವೇಷನ್ ಮಿಷನ್ ಹಾಗೂ ರಷ್ಯಾದ ಸೈರಸ್ ವಿದ್ಯಾರ್ಥಿಗಳೊಂದಿಗೆ ಮೋದಿ ಮತ್ತು ಪುತಿನ್ ಸಂವಾದ ನಡೆಸಿದರು. ಎರಡೂ ದೇಶಗಳ ವಿದ್ಯಾರ್ಥಿಗಳು ಶೈಕ್ಷಣಿಕ ಹಾಗೂ ಸಂಶೋಧನಾ ಅಭಿವೃದ್ಧಿಗಾಗಿ ಜ್ಞಾನ ವಿನಿಮಯ ಮಾಡಿಕೊಳ್ಳಬೇಕು. ಇದಕ್ಕೆ ಉಭಯ ದೇಶಗಳಲ್ಲಿ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಮೋದಿ ತಿಳಿಸಿದ್ದಾರೆ. ಖಾಸಗಿ ಭೇಟಿ ಸಂದರ್ಭದಲ್ಲಿ ಶೈಕ್ಷಣಿಕ ವಿಚಾರಗಳಿಗೆ ಮೋದಿ ಒತ್ತು ನೀಡಿದ್ದಾರೆ.
ರಕ್ಷಣಾ ಕೈಗಾರಿಕೆ ಪಾರ್ಕ್ಗೆ ಆಹ್ವಾನ
ದಶಕಗಳಿಂದ ಭಾರತಕ್ಕೆ ರಷ್ಯಾ ಮಿಲಿಟರಿ ಸಾಧನಗಳನ್ನು ಪೂರೈಕೆ ಮಾಡುತ್ತಿದೆ. ಜತೆಗೆ ಕಠಿಣ ಪರಿಸ್ಥಿತಿಯಲ್ಲಿ ಭಾರತದ ಪರ ನಿಂತಿದೆ. ಜಾಗತಿಕ ಬದಲಾವಣೆಯ ಕಾಲಘಟ್ಟದಲ್ಲಿ ಭಾರತ- ರಷ್ಯಾದ ಗೆಳೆತನ ಮತ್ತಷ್ಟು ಬಲಿಷ್ಠಗೊಳ್ಳುತ್ತಿದೆ. ಹೀಗಾಗಿ ಭಾರತದಲ್ಲಿ ರಕ್ಷಣಾ ಕೈಗಾರಿಕೆ ಪಾರ್ಕ್ ಆರಂಭಿಸಲು ಸಕಾಲವಾಗಿದೆ. ಇದರ ಜತೆಗೆ ಜಲಸಾರಿಗೆ, ಮೆಟ್ರೋ ಯೋಜನೆ, ರಸ್ತೆ ಅಭಿವೃದ್ಧಿ ಹಾಗೂ ವಿಮಾನ ನಿಲ್ದಾಣ ನವೀಕರಣದಲ್ಲಿಯೂ ಭಾಗಿಯಾಗಬಹುದು ಎಂದು ಪ್ರಧಾನಿ ಮೋದಿ ರಷ್ಯಾ ಉದ್ಯಮಕ್ಕೆ ಆಹ್ವಾನ ನೀಡಿದ್ದಾರೆ.
ಪಾಕ್ ಉಗ್ರವಾದಕ್ಕೆ ಪರೋಕ್ಷ ಎಚ್ಚರಿಕೆ
ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಇಬ್ಬಗೆಯ ನೀತಿ ಸರಿಯಲ್ಲ. ಉಗ್ರರ ರಕ್ಷಣೆಗೆ ನಿಂತು ಭಯೋತ್ಪಾದನೆ ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಕೆಲ ದೇಶಗಳು ಉಗ್ರರ ಪಾಲಿಗೆ ಸ್ವರ್ಗವಾಗಿದ್ದು, ಗಡಿ ಪ್ರದೇಶಗಳಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿವೆ. ಇದಕ್ಕೆ ನಿಯಂತ್ರಣ ಹೇರಬೇಕಿದೆ. ಜಾಗತಿಕ ಶಾಂತಿ ನಿರ್ಮಾಣ ಹಾಗೂ ಉಗ್ರ ನಿಗ್ರಹ ಕಾರ್ಯಾಚರಣೆಗೆ ಬದ್ಧವಾಗಿದ್ದೇವೆ ಎಂದು ಉಭಯ ನಾಯಕರು ಜಂಟಿ ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಎರಡೂ ದೇಶಗಳು ಒಟ್ಟಾಗಿ ಉತ್ಪಾದನೆಯಲ್ಲಿ ತೊಡಗಬಹುದು. ಭಾರತದಲ್ಲಿನ ಮೇಕ್ ಇನ್ ಇಂಡಿಯಾ ಕಾರ್ಯಕ್ರಮವು ಇದಕ್ಕೆ ಪೂರಕವಾಗಿದೆ.
| ನರೇಂದ್ರ ಮೋದಿ ಪ್ರಧಾನಿ
ಭಾರತದ ಅಭಿವೃದ್ಧಿ ಪಥದಲ್ಲಿ ರಷ್ಯಾ ಖುಷಿಯಿಂದ ಭಾಗಿಯಾಗುತ್ತದೆ. ರೈಲ್ವೆ, ಜಲ ಸಾರಿಗೆ ಸೇರಿ ಇನ್ನಿತರ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಗೆ ಸಮ್ಮತಿಸಿದ್ದೇವೆ.
| ವ್ಲಾದಿಮಿರ್ ಪುತಿನ್ ರಷ್ಯಾ ಅಧ್ಯಕ್ಷ
ಇನ್ವೆಸ್ಟ್ ಇಂಡಿಯಾ ಹಾಗೂ ಮೇಕ್ ಇನ್ ಇಂಡಿಯಾದಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ಸ್ಪೀಡ್ ರೈಲು ಯೋಜನೆ ಹಾಗೂ ರೈಲ್ವೆ ವಿಶ್ವವಿದ್ಯಾಲಯದ ಶಿಕ್ಷಣದಲ್ಲಿ ರಷ್ಯಾ ನೆರವಿಗೆ ಮುಂದಾಗಿದೆ. ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ ದೇಶದ ರಸ್ತೆ ಸಾರಿಗೆ ಹಾಗೂ ಜಲಸಾರಿಗೆ ಅಭಿವೃದ್ಧಿಯಲ್ಲೂ ಬಂಡವಾಳ ಹೂಡಿಕೆಗೆ ರಷ್ಯಾ ಸಮ್ಮತಿಸಿದೆ. ಶೀಘ್ರದಲ್ಲೇ ರೂಪಾಯಿ ಮತ್ತು ರಷ್ಯಾದ ಕರೆನ್ಸಿ ರೂಬಲ್ ವಿನಿಮಯ ಆಧಾರಿತ ವಹಿವಾಟು ಆರಂಭವಾಗಲಿದೆ.
ಇರಾನ್-ಇಂಧನ ಚರ್ಚೆ: ಅಮೆರಿಕದ ವಾಣಿಜ್ಯ ಸಮರ ಹಾಗೂ ಇರಾನ್ ಮೇಲೆ ನಿರ್ಬಂಧ ಕುರಿತು ಮೋದಿ-ಪುತಿನ್ ಮಾತುಕತೆ ನಡೆಸಿದ್ದಾರೆ. ಜಾಗತಿಕವಾಗಿ ಈ ವಿಷಯಗಳನ್ನು ಹೇಗೆ ನಿಭಾಯಿಸಬೇಕು ಹಾಗೂ ಉಭಯ ದೇಶಗಳ ಆರ್ಥಿಕತೆ ಮೇಲಿನ ದುಷ್ಪರಿಣಾಮ ಬೀರದಂತೆ ನಿಯಂತ್ರಿಸುವ ಬಗ್ಗೆಯೂ ಚರ್ಚೆ ನಡೆದಿದೆ.
ಶೃಂಗಕ್ಕೆ ಆಹ್ವಾನ
2019ರ ಸೆಪ್ಟೆಂಬರ್ನಲ್ಲಿ ರಷ್ಯಾದಲ್ಲಿ ಈಸ್ಟ್ ಎಕನಾಮಿಕ್ ಫೋರಂ ಆಯೋಜಿಸುವ ವ್ಲಾಡಿವೊಸ್ಟೋಕ್ ಸಮಾವೇಶಕ್ಕೆ ಮುಖ್ಯ ಅತಿಥಿಯಾಗುವಂತೆ ಮೋದಿಗೆ ಪುತಿನ್ ಆಹ್ವಾನಿಸಿದ್ದಾರೆ.
ವಿದ್ಯಾರ್ಥಿಗಳ ಜತೆ ಸಂವಾದ:ಅಟಲ್ ಇನ್ನೋವೇಷನ್ ಮಿಷನ್ ಹಾಗೂ ರಷ್ಯಾದ ಸೈರಸ್ ವಿದ್ಯಾರ್ಥಿಗಳೊಂದಿಗೆ ಮೋದಿ ಮತ್ತು ಪುತಿನ್ ಸಂವಾದ ನಡೆಸಿದರು. ಎರಡೂ ದೇಶಗಳ ವಿದ್ಯಾರ್ಥಿಗಳು ಶೈಕ್ಷಣಿಕ ಹಾಗೂ ಸಂಶೋಧನಾ ಅಭಿವೃದ್ಧಿಗಾಗಿ ಜ್ಞಾನ ವಿನಿಮಯ ಮಾಡಿಕೊಳ್ಳಬೇಕು. ಇದಕ್ಕೆ ಉಭಯ ದೇಶಗಳಲ್ಲಿ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಮೋದಿ ತಿಳಿಸಿದ್ದಾರೆ. ಖಾಸಗಿ ಭೇಟಿ ಸಂದರ್ಭದಲ್ಲಿ ಶೈಕ್ಷಣಿಕ ವಿಚಾರಗಳಿಗೆ ಮೋದಿ ಒತ್ತು ನೀಡಿದ್ದಾರೆ.
ರಕ್ಷಣಾ ಕೈಗಾರಿಕೆ ಪಾರ್ಕ್ಗೆ ಆಹ್ವಾನ
ದಶಕಗಳಿಂದ ಭಾರತಕ್ಕೆ ರಷ್ಯಾ ಮಿಲಿಟರಿ ಸಾಧನಗಳನ್ನು ಪೂರೈಕೆ ಮಾಡುತ್ತಿದೆ. ಜತೆಗೆ ಕಠಿಣ ಪರಿಸ್ಥಿತಿಯಲ್ಲಿ ಭಾರತದ ಪರ ನಿಂತಿದೆ. ಜಾಗತಿಕ ಬದಲಾವಣೆಯ ಕಾಲಘಟ್ಟದಲ್ಲಿ ಭಾರತ- ರಷ್ಯಾದ ಗೆಳೆತನ ಮತ್ತಷ್ಟು ಬಲಿಷ್ಠಗೊಳ್ಳುತ್ತಿದೆ. ಹೀಗಾಗಿ ಭಾರತದಲ್ಲಿ ರಕ್ಷಣಾ ಕೈಗಾರಿಕೆ ಪಾರ್ಕ್ ಆರಂಭಿಸಲು ಸಕಾಲವಾಗಿದೆ. ಇದರ ಜತೆಗೆ ಜಲಸಾರಿಗೆ, ಮೆಟ್ರೋ ಯೋಜನೆ, ರಸ್ತೆ ಅಭಿವೃದ್ಧಿ ಹಾಗೂ ವಿಮಾನ ನಿಲ್ದಾಣ ನವೀಕರಣದಲ್ಲಿಯೂ ಭಾಗಿಯಾಗಬಹುದು ಎಂದು ಪ್ರಧಾನಿ ಮೋದಿ ರಷ್ಯಾ ಉದ್ಯಮಕ್ಕೆ ಆಹ್ವಾನ ನೀಡಿದ್ದಾರೆ.
ಪಾಕ್ ಉಗ್ರವಾದಕ್ಕೆ ಪರೋಕ್ಷ ಎಚ್ಚರಿಕೆ
ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಇಬ್ಬಗೆಯ ನೀತಿ ಸರಿಯಲ್ಲ. ಉಗ್ರರ ರಕ್ಷಣೆಗೆ ನಿಂತು ಭಯೋತ್ಪಾದನೆ ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಕೆಲ ದೇಶಗಳು ಉಗ್ರರ ಪಾಲಿಗೆ ಸ್ವರ್ಗವಾಗಿದ್ದು, ಗಡಿ ಪ್ರದೇಶಗಳಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿವೆ. ಇದಕ್ಕೆ ನಿಯಂತ್ರಣ ಹೇರಬೇಕಿದೆ. ಜಾಗತಿಕ ಶಾಂತಿ ನಿರ್ಮಾಣ ಹಾಗೂ ಉಗ್ರ ನಿಗ್ರಹ ಕಾರ್ಯಾಚರಣೆಗೆ ಬದ್ಧವಾಗಿದ್ದೇವೆ ಎಂದು ಉಭಯ ನಾಯಕರು ಜಂಟಿ ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಎರಡೂ ದೇಶಗಳು ಒಟ್ಟಾಗಿ ಉತ್ಪಾದನೆಯಲ್ಲಿ ತೊಡಗಬಹುದು. ಭಾರತದಲ್ಲಿನ ಮೇಕ್ ಇನ್ ಇಂಡಿಯಾ ಕಾರ್ಯಕ್ರಮವು ಇದಕ್ಕೆ ಪೂರಕವಾಗಿದೆ.
| ನರೇಂದ್ರ ಮೋದಿ ಪ್ರಧಾನಿ
ಭಾರತದ ಅಭಿವೃದ್ಧಿ ಪಥದಲ್ಲಿ ರಷ್ಯಾ ಖುಷಿಯಿಂದ ಭಾಗಿಯಾಗುತ್ತದೆ. ರೈಲ್ವೆ, ಜಲ ಸಾರಿಗೆ ಸೇರಿ ಇನ್ನಿತರ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಗೆ ಸಮ್ಮತಿಸಿದ್ದೇವೆ.
| ವ್ಲಾದಿಮಿರ್ ಪುತಿನ್ ರಷ್ಯಾ ಅಧ್ಯಕ್ಷ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ