ವಿಷಯಕ್ಕೆ ಹೋಗಿ

Shivakumara Swamiji History: ದಿವ್ಯ ಚೇತನ ಶ್ರೀ ಸಿದ್ಧಗಂಗಾ ಶ್ರೀಗಳ ಹುಟ್ಟು, ಬಾಲ್ಯ, ಜೀವನ ಸಾಧನೆ

ತುಮಕೂರು: ಸಿದ್ಧಗಂಗಾಮಠದ ಹಿರಿಯ ಶ್ರೀ ಡಾ.ಶಿವಕುಮಾರಸ್ವಾಮಿಗಳು ನಡೆದಾಡುವ ದೇವರು, ತ್ರಿವಿಧ ದಾಸೋಹಿ ಎಂದೇ ಭಕ್ತರ ಮನ, ಮನೆಯಲ್ಲಿ ನೆಲೆಗೊಂಡವರು. ಸಾಮಾನ್ಯ ಬಡ ಕುಟುಂಬವೊಂದರಿಂದ ಬಂದ ಶ್ರೀಗಳು ಅಸಾಮಾನ್ಯರಾಗಿ ಜಗತ್ತಿಗೆ ಬೆಳಕಾಗಿದ್ದು ಈ ಶತಮಾನದ ಭಾಗ್ಯ. ಶಿಕ್ಷಣ, ಆರೋಗ್ಯ, ಧರ್ಮದ ಏಳಿಗೆಗೆ ಶ್ರೀಗಳು ತಮ್ಮ ಇಡೀ ಜೀವನವನ್ನು ಮುಡಿಪಾಗಿರಿಸಿದವರು. ಜಾತಿ, ಬೇಧವಿಲ್ಲದೆ ತಮ್ಮ ಮಠದಲ್ಲಿ ಸರ್ವಧರ್ಮಿಯರಿಗೂ ಆಶ್ರಯ ನೀಡಿದ ಸಿದ್ಧಗಂಗಾ ಮಠದ ಕೀರ್ತಿ ಪತಾಕೆ ಡಾ.ಶಿವಕುಮಾರಸ್ವಾಮಿಗಳ ಕಾರಣದಿಂದಲೇ ಇಂದು ವಿಶ್ವಮಟ್ಟದಲ್ಲಿ ರಾರಾಜಿಸುತ್ತಿದೆ.  ರಾಮನಗರ ಜಿಲ್ಲೆ, ಮಾಗಡಿ ತಾಲೂಕು, ಸೋಲೂರು ಹೋಬಳಿ ವೀರಾಪುರ ಎಂಬ ಸಣ್ಣ ಗ್ರಾಮ ಶ್ರೀಗಳ ಹುಟ್ಟೂರು. ಹೊನ್ನಪ್ಪ(ಹೊನ್ನೇಗೌಡರು) ಮತ್ತು ಗಂಗಮ್ಮ ದಂಪತಿಯರ 13 ಮಕ್ಕಳಲ್ಲಿ ಶಿವಣ್ಣ(ಈಗಿನ ಡಾ.ಶ್ರೀ ಶಿವಕುಮಾರಸ್ವಾಮೀಜಿ) ಒಬ್ಬರಾಗಿ 1908ರ ಏಪ್ರಿಲ್‌ 1ರಂದು ಜನಿಸಿದರು. ಇವರ ಆಗಮನದಿಂದ ಮನೆಯಲ್ಲಿ ಬೆಳೆ, ದನ, ಕರು, ಮೇವು ಎಲ್ಲದರಲ್ಲೂ ಸಮೃದ್ಧಿ ಉಂಟಾಯಿತು. ಎಂಟು ಗಂಡು ಮತ್ತು ಐದು ಹೆಣ್ಣು ಮಕ್ಕಳಲ್ಲಿ ಉತ್ಸಾಹ ಚಿಲುಮೆಯಂತೆ ಕಾಣುತ್ತಿದ್ದ ಇವರ ಮೇಲೆ ತಂದೆ-ತಾಯಿಗಳಿಗೆ ವಾತ್ಸಲ್ಯ ಅಧಿಕವಾಗಿತ್ತು.
ತಂದೆ-ತಾಯಿ, ಅಣ್ಣಂದಿರ, ಅಕ್ಕಂದಿರ, ಮಮತೆಯ ಸಾಗರದಲ್ಲಿ ಬೆಳೆಯಲಾರಂಭಿಸಿದ ಶ್ರೀ ಶಿವಕುಮಾರ ಸ್ವಾಮಿಗಳು ಸಮಗ್ರ ವೀರಾಪುರಕ್ಕೆ ಪ್ರೀತಿಯ ಬಾಲಕರಾಗಿದ್ದರು. ಶ್ರೀಗಳ ಬಾಲ್ಯದಲ್ಲಿ ಹಸ್ತ ಸಾಮುದ್ರಿಕರೊಬ್ಬರು ಶಿವಣ್ಣರ ಅಂಗೈ ನೋಡಿ, ‘ಮುಂದೆ ಈ ಮಗು ಲಕ್ಷಾಂತರ ಮಕ್ಕಳಿಗೆ ತಂದೆ ಸಮಾನವಾದ ಪೂಜ್ಯ ವ್ಯಕ್ತಿಯಾಗುತ್ತಾನೆ. ಲಕ್ಷಾಂತರ ಮಕ್ಕಳ ಬಾಳಿಗೆ ಬೆಳಕಾಗುತ್ತಾನೆ’ ಎಂದಿದ್ದರಂತೆ.
ಬಾಲ್ಯ,
ಸಂಪ್ರದಾಯಸ್ಥ ಶರಣರ ಕುಟುಂಬದ ವಾತಾವರಣದಲ್ಲಿ ಬೆಳೆದ ಶಿವಣ್ಣ ಪ್ರಾಥಮಿಕ ಶಿಕ್ಷಣವನ್ನು ವೀರಾಪುರ ಮತ್ತು ಪಕ್ಕದ ಹಳ್ಳಿಯಾದ ಪಾಲನಹಳ್ಳಿಯಲ್ಲಿನ ಕೂಲಿ ಮಠದಲ್ಲಿ ಪೂರೈಸಿದರು. ತಮ್ಮ 8ನೇ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡ ಶಿವಣ್ಣ, ಬಳಿಕ ತುಮಕೂರು ತಾಲೂಕಿನ ನಾಗವಲ್ಲಿಯಲ್ಲಿನ ತಮ್ಮ ಅಕ್ಕ ಪುಟ್ಟಹೊನ್ನಮ್ಮನವರ ಮನೆಯಲ್ಲಿ ಬೆಳೆದರು. ಇಲ್ಲಿಯೇ ಎ.ವಿ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಪೂರೈಸಿಕೊಂಡರು. ಬಳ್ಳಗೆರೆಯ ಬೋರೆಗೌಡ, ವೆಂಕಟರಮಣಯ್ಯ, ಬಾಲಯ್ಯ, ರುದ್ರಯ್ಯ ಇವರುಗಳು ಶಿವಣ್ಣರ ಬಾಲ್ಯ ಸ್ನೇಹಿತರಾಗಿದ್ದರು. ಬಾಲ್ಯದಲ್ಲಿ ಶಿವಣ್ಣನವರಿಗೆ ಅನ್ನದ ಮೇಲೆ ತುಪ್ಪ ಹಾಕಿದ ಮೇಲೆ ಅದನ್ನು ಅನ್ನದಲ್ಲಿ ಕಲೆಸಿ, ಮುಷ್ಟಿಯಲ್ಲಿ ಹಿಂಡಿದರೆ ಬೆರಳು ಸಂದಿಯಿಂದ ತುಪ್ಪ ಹೊರಬರಬೇಕಿತ್ತಂತೆ. ಇಲ್ಲವಾದರೆ ‘ಅಕ್ಕಾ, ನೋಡಿಲ್ಲಿ ನೀನು ಹಾಕಿದ ತುಪ್ಪ ಅನ್ನಕ್ಕೇ ಹತ್ತಲೇ ಇಲ್ಲ. ಇನ್ನಷ್ಟು ಹಾಕಿದರೆ ನಾನು ಉಣ್ಣುವುದು’, ಎಂದು ಅಕ್ಕ ಪುಟ್ಟ ಹೊನ್ನಮ್ಮನವರನ್ನು ಸತಾಯಿಸುತ್ತಿದ್ದಂತೆ. ಇಂತಹ ಅನೇಕ ತುಂಟಾಟದೊಂದಿಗೆ ಬೆಳೆದ ಶಿವಣ್ಣ, ಬರ ಬರುತ್ತಾ ಬಹಳ ಶಿಸ್ತು ಬೆಳೆಸಿಕೊಂಡರು.
ಶಿಕ್ಷಣ
ಶಿವಣ್ಣ ಆಟ, ಪಾಠದಲ್ಲಿ ಸದಾ ಮುಂದಿದ್ದರು. ಎರಡು ವರ್ಷಗಳ ಪಾಠ ಪ್ರವಚನಗಳನ್ನು ಒಂದೇ ವರ್ಷದಲ್ಲಿ ಓದಿ 1919 ಕನ್ನಡ ಲೋಯರ್‌ ಸೆಕೆಂಡರಿ ಪರೀಕ್ಷೆಯಲ್ಲೂ, 1921 ರಲ್ಲಿ ಇಂಗ್ಲಿಷ್‌ ಲೋಯರ್‌ ಸೆಕೆಂಡರಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು. ಅಣ್ಣ ಲಿಂಗಪ್ಪ, ಇಂಗ್ಲಿಷ್‌ ಲೋಯರ್‌ ಸೆಕೆಂಡರಿ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಒಂದು ವರ್ಷ ತಡವಾಯಿತು. ಇದರಿಂದ ಶಿವಣ್ಣನವರ ಒಂದು ವರ್ಷದ ವಿದ್ಯಾಭ್ಯಾಸ ನಿಂತಿತು. ಕಾರಣ ಅಣ್ಣ, ತಮ್ಮ ಇಬ್ಬರನ್ನು ತುಮಕೂರಿನಲ್ಲಿ ಒಟ್ಟಿಗೆ ಓದಲು ಬಿಡಬೇಕು ಎನ್ನುವುದು ಮನೆಯವರ ಆಪೇಕ್ಷೆಯಾಗಿತ್ತು. ನಾಗವಲ್ಲಿಯಲ್ಲಿ ಶಿವಣ್ಣನವರು ವಿದ್ಯಾಭ್ಯಾಸದಲ್ಲಿ ಮಹತ್ತರ ಸಾಧನೆ ಮಾಡುವ ಮೂಲಕ ಗ್ರಾಮಾಂತರ ಪ್ರದೇಶದ ಮೇಧಾವಿ ವಿದ್ಯಾರ್ಥಿಯಾಗಿ ಎಲ್ಲರ ಗಮನ ಸೆಳೆದರು.
ನಾಗವಲ್ಲಿಯಲ್ಲಿ ರೂರಲ್‌ ಎ.ವಿ.ಸ್ಕೂಲ್‌ (ಗ್ರಾಮಾಂತರ ಆಂಗ್ಲೋ ಎರ್ನಾಕ್ಯುಲರ್‌ ಸ್ಕೂಲ್‌) ನಲ್ಲಿ ಯಶಸ್ವಿಯಾಗಿ ವಿದ್ಯಾಭ್ಯಾಸ ಮುಗಿಸಿ ಶಿವಣ್ಣನವರು ಅಣ್ಣ ಲಿಂಗಪ್ಪನವರೊಂದಿಗೆ 1922 ರಲ್ಲಿ ತುಮಕೂರಿಗೆ ಬಂದರು. ಸರಕಾರಿ ಹೈಸ್ಕೂಲಿಗೆ ಮೊದಲ ತರಗತಿಗೆ ಸೇರಿದರು. ತುಮಕೂರಿನಲ್ಲಿ ಒಂದು ಬಾಡಿಗೆ ಕೊಠಡಿ ಹಿಡಿದು ಸ್ವತಃ ಅಡುಗೆ ಮಾಡಿಕೊಂಡು ಊಟಮಾಡುತ್ತ ಹೈಸ್ಕೂಲ್‌ ವಿದ್ಯಾಭ್ಯಾಸ ಮುಂದುವರಿಸಿದರು. ಹೈಸ್ಕೂಲಿನಲ್ಲಿ ಕೆಂಬಳಲಿನಿಂದ ಬಂದ ಕಾಳಪ್ಪನವರ (ಕನಕ ದೇಗುಲ ಮಠದ ಮಹಾಲಿಂಗ ಸ್ವಾಮಿಗಳು) ಪರಿಚಯವಾಯಿತು. ಸ್ನೇಹವಾಗಿ ತಿರುವು ಪಡೆಯಿತು.
ಶ್ರೀಮಠದ ಸಂಪರ್ಕ
ಸಿದ್ಧಗಂಗೆಯ ಕೀರ್ತಿಯನ್ನು, ಉದ್ದಾನ ಶಿವಯೋಗಿಗಳ ಮಹಿಮೆಯನ್ನು ಬಾಲ್ಯದಿಂದಲೇ ಕೇಳುತ್ತಾ ಬಂದಿದ್ದ ಶಿವಣ್ಣನವರು ಬಿಡುವು ಸಿಕ್ಕಾಗಲೆಲ್ಲ ಸಿದ್ಧಗಂಗಾ ಕ್ಷೇತ್ರಕ್ಕೆ ಕಾಳಪ್ಪನವರೊಡನೆ ಭೇಟಿ ನೀಡುತ್ತಿದ್ದರು. ಆಗಲೇ ಇವರು ಉದ್ದಾನ ಶಿವಯೋಗಿಗಳ ಅಪಾರ ಶಿವಯೋಗ ಸಂಪತ್ತಿಗೆ ಮಾರುಹೋದರು. ಶಿವಣ್ಣನವರು ಸಿದ್ಧಗಂಗೆಯ ಬೆಟ್ಟವನ್ನೇರಿ ಸಿದ್ಧಲಿಂಗೇಶ್ವರ ಮೂರ್ತಿಯೆದುರು ಜಲತೀರ್ಥವಿರುವ ಅಮ್ಮನವರ ಗವಿಯಲ್ಲಿ ಕುಳಿತು ಗಂಟೆಗಟ್ಟಲೆ ಮೈಮರೆಯುತ್ತಿದ್ದರು. ಸಿದ್ಧಗಂಗಾ ಬೆಟ್ಟದ ಮೂಲೆ ಮೂಲೆಗಳ ಪರಿಚಯ ಮಾಡಿಕೊಂಡರು. ದಿನಕಳೆದಂತೆ ಸಿದ್ಧಗಂಗೆಯ ಮೇಲಿನ ಮಮತೆ ಅಧಿಕವಾಗತೊಡಗಿತು. ಆದರೆ ಉದ್ದಾನ ಸ್ವಾಮಿಗಳನ್ನು ಕಂಡರೆ ಭಯದಿಂದ ದೂರದಿಂದಲೇ ನಮಸ್ಕಾರ ಹಾಕಿ ಬರುತ್ತಿದ್ದರು.
ಶ್ರೀಗಳಿಗೆ ಮಠದಲ್ಲಿ ಅಂದು ಆಶ್ರಯ ಸಿಕ್ಕಿರಲಿಲ್ಲ
ಶಿವಣ್ಣನವರ ತೇಜೋವಿಶೇಷ, ಗುರುಲಿಂಗ ಜಂಗಮ ಭಕ್ತಿ, ತಲ್ಲೀನತೆಗೆ ಆಕರ್ಷಿತರಾದ ಆ ಮಠದ ಉತ್ತರಾಧಿಕಾರಿಗಳೆಂದು ಗೊತ್ತಾಗಿದ್ದ ಮರುಳಾರಾಧ್ಯರು ಇವರಲ್ಲಿ ಯಾವುದೋ ವಿಶೇಷ ಶಕ್ತಿಯನ್ನು ಕಾಣತೊಡಗಿದರು. ಇವರಲ್ಲಿರುವ ಮಹತ್ತರ ತೇಜಸ್ಸಿಗೆ ಮಾರುಹೋಗಿದ್ದರು. ಈ ನಡುವೆ ಶಿವಣ್ಣ ಕಷ್ಟಪಟ್ಟು ಓದಿ 1929ರಲ್ಲಿ ಮೆಟ್ರಿಕ್ಯುಲೇಶನ್‌ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು. ಈ ಹೊತ್ತಿಗೆ ಅಣ್ಣ ಲಿಂಗಪ್ಪನವರು ಶಿಕ್ಷ ಣ ಕುಂಠಿತಗೊಳಿಸಿ ಊರಿಗೆ ಹಿಂದಿರುಗಿದ್ದರು.ಪ್ಲೇಗು ಜಾಢ್ಯದ ನಿಮಿತ್ತ 1924ರಲ್ಲಿ ಶಿವಣ್ಣನವರದ್ದೂ ಒಂದು ವರ್ಷ ವಿದ್ಯಾಭ್ಯಾಸ ಕುಂಠಿತಗೊಂಡಿತ್ತು.
ಪ್ಲೇಗಿನ ಭಯದಿಂದ ಸ್ವತಃ ಕೊಠಡಿಯಲ್ಲಿ ಅಡುಗೆ ಮಾಡಿಕೊಂಡು ಊಟ ಮಾಡುವುದು ಅನಾನುಕೂಲವಾಗಿತ್ತು. ಆದ್ದರಿಂದ ಉದ್ದಾನ ಶಿವಯೋಗಿಗಳನ್ನು ಕಂಡು ಮಠದಲ್ಲಿ ಊಟ, ವಸತಿ ಸೌಕರ್ಯಕ್ಕಾಗಿ ಪ್ರಾರ್ಥಿಸಿಕೊಳ್ಳಬೇಕು ಎಂದು ಸಿದ್ಧಗಂಗೆಗೆ ಬಂದರು. ಶಿವಯೋಗಿಗಳನ್ನು ಕಾಣುವುದು ಹೇಗೆ? ಎಂದು ಬಹಳ ಹೊತ್ತು ಯೋಚಿಸಿದರು. ಏಕೆಂದರೆ ಶಿವಣ್ಣನವರಿಗೆ ಯಾರನ್ನಾದರೂ ಕೇಳಬೇಕೆಂದರೆ ಆಗುತ್ತಿರಲಿಲ್ಲ. ಅತ್ಯಂತ ಸಂಕೋಚ ಸ್ವಭಾವದವರಾಗಿದ್ದರು. ಆದರೂ ಧೈರ್ಯಮಾಡಿ ಉದ್ದಾನ ಶಿವಯೋಗಿಗಳನ್ನು ಕಂಡು, ಮಠದಲ್ಲಿ ಆಶ್ರಯ ಪಡೆದು ಶಿಕ್ಷ ಣ ಮುಂದುವರಿಸಲು ಅವಕಾಶ ಕೋರಿದರು. ಆದರೆ ಉದ್ದಾನ ಶಿವಯೋಗಿಗಳು ಅವಕಾಶ ನೀಡಲಿಲ್ಲ. ಶಿವಣ್ಣನವರ ಆಸೆಗೆ ತಣ್ಣೀರೆರೆಚಿದಂತಾಯಿತು. ಆದರೂ ಭಕ್ತಿ ಕಡಿಮೆಯಾಗಲಿಲ್ಲ. ಮರುಳಾರಾಧ್ಯರಾಗಲಿ, ಮಿತ್ರ ಕಾಳಪ್ಪನವರಿಂದಲೂ ಮಠದಲ್ಲಿ ಶಿವಣ್ಣರಿಗೆ ಸ್ಥಾನಕೊಡಿಸಲು ಸಾಧ್ಯವಾಗಲಿಲ್ಲ.
ಬಾಡಿಗೆ ಕೊಠಡಿಯಲ್ಲಿದ್ದರು!
ಅಂತಿಮವಾಗಿ ನಗರದ ಶೆಟ್ಟಿಹಳ್ಳಿಯಲ್ಲಿ ಒಂದು ಬಾಡಿಗೆ ಕೊಠಡಿ ಹಿಡಿದು ತಾವೇ ಅಡುಗೆ ಮಾಡಿಕೊಂಡು ಶಿವಣ್ಣ, ಶಿಕ್ಷಣ ಮುಂದುವರಿಸಿದರು. ಶಿವಣ್ಣರು ಕಷ್ಟಪಟ್ಟು ಓದುತ್ತಿರುವ ವಿಷಯ ತಿಳಿದ ಉದ್ದಾನ ಶಿವಯೋಗಿಗಳು ಶಿವಣ್ಣರ ಪರಿಸ್ಥಿತಿಗೆ ಮರುಗಿದರು. ಬಳಿಕ ಮನಸ್ಸು ಬದಲಾಯಿಸಿ, ಶಿವಣ್ಣರನ್ನು ಕರೆಸಿ ಮಠದಲ್ಲಿ ನಾಲ್ಕು ತಿಂಗಳ ಅವಧಿಗೆ ಆಶ್ರಯ ನೀಡಿದರು. ಮಠದ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ ಪಡೆದ ಶಿವಣ್ಣ, 1927ರ ಮಾರ್ಚ್‌-ಏಪ್ರಿಲ್‌ನಲ್ಲಿ ಮೆಟ್ರಿಕ್ಯುಲೇಶನ್‌ ನಂತರದ ಎಂಟ್ರನ್ಸ್‌ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು. ಈ ನಾಲ್ಕು ತಿಂಗಳ ಅವಧಿಯಲ್ಲಿ ಶ್ರೀ ಕ್ಷೇತ್ರದ ವಿದ್ಯಾರ್ಥಿಯಾಗಿದ್ದ ಶಿವಣ್ಣ ಮತ್ತು ಮಠದ ಉತ್ತರಾಧಿಕಾರಿ ಎಂದು ನೇಮಕಗೊಂಡಿದ್ದ ಮರುಳಾರಾಧ್ಯರ ನಡುವಿನ ಸ್ನೇಹ ಗಾಢವಾಯಿತು.
ಶಿಕ್ಷಣಕ್ಕಾಗಿ ಬೆಂಗಳೂರಿಗೆ
ಶಿವಣ್ಣನವರ ವಿದ್ಯಾಭ್ಯಾಸದ ಮೂರನೇ ಹಂತ ಇದು. ಎಂಟ್ರೆನ್ಸ್‌ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಶಿವಣ್ಣ, ಬೆಂಗಳೂರಿನ ಸೆಂಟ್ರಲ್‌ ಕಾಲೇಜಿಗೆ ಸೇರಿಕೊಳ್ಳಲು ಉದ್ದಾನ ಶ್ರೀಗಳ ಅಪ್ಪಣೆ ಕೇಳಿದರು. ಸ್ವಾಮಿಗಳು, ಚೆನ್ನಾಗಿ ಓದುವಂತೆ ಹಾಗೂ ಆಗಾಗ ಮಠಕ್ಕೆ ಬಂದು ಹೋಗುತ್ತಿರುವಂತೆ ತಿಳಿಸಿ ಆಶೀರ್ವದಿಸಿ ಬೀಳ್ಕೊಟ್ಟರು. ಬೆಂಗಳೂರಿನ ತೋಟದಪ್ಪನವರ ವಿದ್ಯಾರ್ಥಿನಿಲಯಕ್ಕೆ ಸೇರಿಕೊಂಡು ಸೆಂಟ್ರಲ್‌ ಕಾಲೇಜಿನಲ್ಲಿ 1927ರಿಂದ ವಿದ್ಯಾಭ್ಯಾಸ ಮುಂದುವರಿಸಿದರು.
ರಜಾ ದಿನಗಳಲ್ಲಿ ಸಿದ್ಧಗಂಗೆಗೆ

ಮರುಳಾರಾಧ್ಯರಿಲ್ಲದ ಸಮಯವೆಂದರೆ ವಿದ್ಯಾರ್ಥಿಗಳಿಗೆ ಆಲಸ್ಯದ ದಿನ. ಇದನ್ನರಿತ ಶಿವಣ್ಣನವರು ಮರುಳಾರಾದ್ಯರ ಕಪಿನಿಯನ್ನು ತೊಟ್ಟು ಪಾವುಡವನ್ನು ತಲೆಗೆ ಸುತ್ತಿ, ಆವುಗೆಗಳನ್ನು ಮೆಟ್ಟಿ ಸಪ್ಪಳ ಮಾಡುತ್ತ ಅವರಂತೆ ಗುಡುಡುತ್ತ, ವಿದ್ಯಾರ್ಥಿಗಳ ಕೊಠಡಿ ಪ್ರವೇಶ ಮಾಡುತ್ತಿದ್ದಂತೆ. ಮರುಳಾರಾದ್ಯರು ಇಲ್ಲವೆಂದು ಮೈ ಮರೆತು ಮಲಗಿದ್ದ ವಿದ್ಯಾರ್ಥಿಗಳ ಜಂಘಾ ಬಲವೇ ಉಡುಗಿ ಗಡಗಡ ನಡುಗಿ ಮೇಲೆದ್ದು ಅಡ್ಡ ಬಿದ್ದು ಮುಖ ನೋಡಿ ಆಮೇಲೆ ಬಿದ್ದು ಬಿದ್ದು ನಗುತ್ತಿದ್ದರಂತೆ. ಹೀಗೆ ರಜಾ ಕಾಲವನ್ನು ಪೂರೈಸಿ ಯಥಾಪ್ರಕಾರ ಶಿವಣ್ಣನವರು ಬೆಂಗಳೂರಿಗೆ ಬಂದು ಪುನಃ ತಮ್ಮ ವಿದ್ಯಾಭ್ಯಾಸ ಜೀವನದಲ್ಲಿ ತಲ್ಲೀನರಾಗಿರುತ್ತಿದ್ದರು. ಸೆಂಟ್ರಲ್‌ ಕಾಲೇಜಿನಲ್ಲಿ ಭೌತಶಾಸ್ತ್ರ ಮತ್ತು ಗಣಿತಗಳನ್ನು ಐಚ್ಛಿಕ ವಿಷಯಗಳನ್ನಾಗಿ ಸ್ವೀಕರಿಸಿ, ಎರಡುವರ್ಷ ಮುಗಿಸಿ ಮೂರನೆ ವರ್ಷದಲ್ಲಿ ಮುಕ್ಕಾಲು ಭಾಗ ಕಳೆದಿತ್ತು.
ಮರುಳಾರಾಧ್ಯರು ಲಿಂಗೈಕ್ಯ
ಶಿವಣ್ಣ ಅಂತಿಮ ಪರೀಕ್ಷೆಗೆ ಕಾದುಕುಳಿತಿದ್ದರು. 1930 ಜನವರಿ 16 ರಂದು ಬರಸಿಡಿಲಿನಂತೆ ದಾರುಣ ವಾರ್ತೆಯೊಂದು ಬಂದು ಬಡಿಯಿತು. ಶ್ರೀ ಸಿದ್ಧಗಂಗಾ ಕ್ಷೇತ್ರದ ಉತ್ತರಾಧಿಕಾರಿ ಶ್ರೀ ಮರುಳಾರಾಧ್ಯರು ಲಿಂಗೈಕ್ಯರಾಗಿದ್ದರು. ಶಿವಣ್ಣ ತತ್‌ಕ್ಷಣ ಶ್ರೀ ಕೇತ್ರಕ್ಕೆ ಧಾವಿಸಿ ಬಂದರು. ದೈವ ಕರೆದುಕೊಂಡು ಬಂದಿತು ಎಂದರೆ ತಪ್ಪಾಗಲಾರದು.
ಶಿವಣ್ಣ ಶಿವಕುಮಾರಸ್ವಾಮಿಗಳಾಗಿದ್ದು ಹೀಗೆ
1930 ಜನವರಿ 16 ರಂದು ಲಿಂಗೈಕ್ಯರಾದ ಮುರುಳಾರಾಧ್ಯರ ಸಮಾಧಿ ಪೂಜಾ ಕಾರ್ಯ ಮುಗಿಯುತ್ತಿದ್ದಂತೆ ಮುಂದೆ ಮಠದ ಉತ್ತರಾಧಿಕಾರಿ ಯಾರೆಂಬ ಜಿಜ್ಞಾಸೆಯೊಡಮೂಡಿತ್ತು. ಎಲ್ಲರ ಮನಸ್ಸಿನಲ್ಲೂ ಶಿವಣ್ಣನವರೇ ಈ ಕ್ಷೇತ್ರದ ಉತ್ತರಾಧಿಕಾರಕ್ಕೆ ಯೋಗ್ಯ ಎಂಬ ಪಿಸುಗುಟ್ಟುವ ಧ್ವನಿ ಏಳತೊಡಗಿತ್ತು. ಆಗ ಅಲ್ಲಿಗೆ ಬಂದ ಉದ್ಧಾನ ಶ್ರೀಗಳು, ‘ಶಿವಣ್ಣನವರೇ ನೀವು ಈ ಮಠದ ಉತ್ತರಾಧಿಕಾರವನ್ನು ವಹಿಸಿಕೊಂಡು ಸಿದ್ಧಲಿಂಗೇಶ್ವರರ ಪ್ರತಿನಿಧಿಗಳಾಗಿ ಈ ದಾಸೋಹ ಕ್ಷೇತ್ರದ ಗುರುತರ ಹೊಣೆಗಾರಿಕೆಯನ್ನು ವಿಶೇಷ ಶಕ್ತಿ ಸಾಮರ್ಥ್ಯ‌ದಿಂದ ನಡೆಸಿಕೊಂಡು ಹೋಗಬೇಕು. ಇದು ಭಕ್ತರ ಅಭಿಲಾಷೆ ಮತ್ತು ಸಿದ್ಧಲಿಂಗೇಶ್ವರರ ಆಜ್ಞೆ, ನಮ್ಮ ಇಚ್ಛೆ. ಯಾವುದನ್ನೂ ಯೋಚಿಸದೇ ನಮಸ್ಕಾರ ಹಾಕಿಬಿಡು’’ ಎಂದು ಶಿವಣ್ಣನವರ ತಲೆ ಮೇಲೆ ಕೈ ಇಟ್ಟು ಹೇಳಿ ಬಿಟ್ಟರು. ಶಿವಣ್ಣನವರು ಒಪ್ಪಿಗೆ ಸೂಚಿಸಿದರು. ಅವರಿತ್ತ ವೀರಶೈವ ವಿರಕ್ತ ಪರಂಪರೆಯ ಕಾಶಾಯ ವಸ್ತ್ರ ಧರಿಸಿ ‘‘ಶ್ರೀ ಶಿವಕುಮಾರ ಸ್ವಾಮಿಗಳು’’ ಎಂಬ ನೂತನ ನಾಮಾಂತರದಿಂದ ತಮ್ಮ ಪದವಿ ಶಿಕ್ಷ ಣದ ಕೊನೆಯ ಪರೀಕ್ಷೆಗಾಗಿ ಬೆಂಗಳೂರಿಗೆ ತೆರಳಿದರು. ಬಳಿಕ 1930 ಮಾರ್ಚ್‌ 3ರಂದು ಶ್ರೀ ಸಿದ್ಧಗಂಗಾ ಕ್ಷೇತ್ರದ ಉತ್ತರಾಧಿಕಾರಿಯಾಗಿ ಶಿವಣ್ಣ(ಶಿವಕುಮಾರಸ್ವಾಮಿ) ಆಯ್ಕೆಯಾದರು. 1941 ಜನವರಿ 11ರಂದು ಶಿವಯೋಗಿ ಶ್ರೀ ಉದ್ದಾನಸ್ವಾಮಿಗಳು ಲಿಂಗೈಕ್ಯರಾದರು. ಆ ಬಳಿಕ ಶ್ರೀ ಸಿದ್ಧಗಂಗಾ ಮಠದ ಪೂರ್ಣಾಧಿಕಾರಿಯಾಗಿ ಶಿವಕುಮಾರ ಸ್ವಾಮಿಗಳು ಅಧಿಕಾರ ಸ್ವೀಕಾರ ಮಾಡಿದರು. ಶಿವಕುಮಾರ ಸ್ವಾಮಿಗಳು 1988 ಮಾರ್ಚ್‌ 3ರಂದು ಶ್ರೀ ಸಿದ್ದಲಿಂಗ ಸ್ವಾಮಿ ಅವರಿಗೆ ದೀಕ್ಷೆ ನೀಡಿ ತಮ್ಮ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿಕೊಂಡರು.
ಮುಖ್ಯಾಂಶಗಳು
* 1930 ಜನವರಿ 16: ಶ್ರೀ ಸಿದ್ಧಗಂಗಾ ಕ್ಷೇತ್ರದ ಉತ್ತರಾಧಿಕಾರಿ ಶ್ರೀ ಮರುಳಾರಾಧ್ಯರು ಲಿಂಗೈಕ್ಯ.
* 1930 ಜನವರಿ 16: ಶ್ರೀ ಸಿದ್ಧಗಂಗಾ ಕ್ಷೇತ್ರದ ಹಿರಿಯ ಶ್ರೀ ಉದ್ಧಾನ ಶಿವಯೋಗಿಗಳಿಂದ ಶಿವಣ್ಣರನ್ನು ಮಠದ ಉತ್ತರಾಧಿಕಾರಿಯನ್ನಾಗಿ ನೇಮಕ, ಶ್ರೀ ಶಿವಕುಮಾರ ಸ್ವಾಮಿಗಳೆಂದು ಶಿವಣ್ಣರಿಗೆ ಮರುನಾಮಕರಣ.
*1930 ಮಾರ್ಚ್‌ 3: ಶ್ರೀ ಸಿದ್ಧಗಂಗಾ ಕ್ಷೇತ್ರದ ಉತ್ತರಾಧಿಕಾರಿಯಾಗಿ ಶಿವಣ್ಣ(ಶಿವಕುಮಾರಸ್ವಾಮಿ) ಆಯ್ಕೆ.
*1941 ಜನವರಿ 11: ಶಿವಯೋಗಿ ಶ್ರೀ ಉದ್ದಾನಸ್ವಾಮಿಗಳು ಲಿಂಗೈಕ್ಯ, ಶ್ರೀ ಸಿದ್ಧಗಂಗಾ ಮಠದ ಪೂರ್ಣಾಧಿಕಾರಿಯಾಗಿ ಶಿವಕುಮಾರ ಸ್ವಾಮಿಗಳಿಂದ ಅಧಿಕಾರ ಸ್ವೀಕಾರ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....